ಬೆಂಗಳೂರು ನಗರದಿಂದ 29 ಕಿಮೀ ದೂರದಲ್ಲಿರುವ ನಟ ಉಪೇಂದ್ರ ರವರ 'ರುಪ್ಪಿಸ್ ರೆಸಾರ್ಟ್ ಉಪ್ಪಿಗೆ ಸಿಕ್ಕಿರೋದು ಅವರ ಅದೃಷ್ಟ ಅನ್ನುತ್ತಾರೆ ಕನ್ನಡ ಖ್ಯಾತ ನಿರ್ಮಾಪಕರೊಬ್ಬರು. ಉಪ್ಪಿಗೆ ಈ ರೆಸಾರ್ಟ್ ಡೀಲ್ ಕುದುರಿಸಿಕೊಟ್ಟವರು ಒಂದು ಕಾಲದ ಬಹು ದೊಡ್ಡ ಕನ್ನಡ ನಿರ್ಮಾಪಕರಾಗಿದ್ದವರು.
ಹೌದು, ಕನ್ನಡದ ಸಾಹಸಸಿಂಹ ವಿಷ್ಣುವರ್ಧನ್ ನಟಿಸಿದ 'ಯಜಮಾನ' ಸಿನಿಮಾದ ನಿರ್ಮಾಪಕರು ಒಂದು ಕಾಲದ ಕನ್ನಡ ಸಿನಿಮಾ ರಂಗದ ಬಹಳ ಪ್ರಸಿದ್ಧ ಮತ್ತು ಶ್ರೀಮಂತ ನಿರ್ಮಾಪಕರಾಗಿದ್ದರು. ಅವರ ಹೆಸರೇ ರೆಹಮಾನ್. ಬಹಳ ಸಿನಿಮಾಗಳನ್ನು ನಿರ್ಮಿಸಿದ ಕೀರ್ತಿ ರೆಹಮಾನ್ ರವರಿಗೆ ಆದರೆ ಅವರು ಮಾತ್ರ ಆರ್ಥಿಕ ನಷ್ಟದಿಂದ ಬಳಲುತ್ತಿರುವುದು ಆಶ್ಚರ್ಯದ ಸಂಗತಿ.
ಉಪೇಂದ್ರನಿಗೆ ತೆಗೆದು ಕೊಡಿಸಿದ್ದ 'ರುಪ್ಪಿಸ್ ರೆಸಾರ್ಟ್'
ನಟ ಉಪೇಂದ್ರರವರಿಗೆ ಕೋಟಿಗಟ್ಟಲೆ ಬೆಲೆಬಾಳುವ 'ರುಪ್ಪಿಸ್ ರೆಸಾರ್ಟ್' ಡೀಲ್ ಮಾಡಿ ಕೊಟ್ಟವರು ಇವರಂತೆ. ಅಂದು 3.75 ಕೋಟಿಗೆ ಕೆಎಸ್ಐಡಿಸಿ ಯಿಂದ ಹರಾಜಿನ ಮೂಲಕ ನಿರ್ಮಾಪಕ ರೆಹಮಾನ್ ರವರು ಕೆಜಿಎಫ್ ಬಾಬು ರವರನ್ನು ಮನವೊಲಿಸಿ ನಟ ಉಪೇಂದ್ರ ರವರಿಗೆ ಕೊಡಿಸಿದ್ದಾರಂತೆ.
ಕೇವಲ ಸಾಮಾನ್ಯ ಭೂಮಿ ಎಂದು ತಿಳಿದಿದ್ದ ಇವರು ಡೀಲ್ ಕುದುರಿದ ನಂತರ ನೋಡಿದಾಗ ಬಿಲ್ಡಿಂಗ್, ಈಜು ಕೊಳ, ಮತ್ತು ಬಹಳಷ್ಟು ಜಾಗ ಇರುವ ಪ್ರದೇಶವಾಗಿದ್ದು ಅಂದು 4 ಕೋಟಿಗೆ ಎಲ್ಲಾ ಡೀಲ್ ಪಕ್ಕ ಮಾಡಿದ್ದರು ಇಂದು 400 ಕೋಟಿ ಬೆಲೆಬಾಳುವ ರೆಸಾರ್ಟ್ ಆಗಿದೆ ಎಂದು ರೆಹಮಾನ್ ರವರು ಒಂದು ಯೌಟ್ಯೂಬ್ ಸಂದರ್ಶನದಲ್ಲಿ ತಮ್ಮ ಕಷ್ಟದ ದಿನಗಳನ್ನು ನೆನೆಸುತ್ತಾ ಹೇಳಿದರು.