ಬಂಟ್ವಾಳ ಕೆಳಗಿನ ಮಂಡಾಡಿ 2ನೇ ವಾರ್ಡಿನಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣ; ಉದ್ಘಾಟನೆ ನೆರವೇರಿಸಿದ ಮಾಜಿ ಸಚಿವ ರಮಾನಾಥ ರೈ

  • 13 Nov 2025 01:16:17 PM

ಬಂಟ್ವಾಳ: ಬಂಟ್ವಾಳ ತಾಲೂಕಿನ ಕೆಳಗಿನ ಮಂಡಾಡಿ 2ನೇ ವಾರ್ಡಿನಲ್ಲಿ ನಿರ್ಮಿತವಾದ ಕಾಂಕ್ರೀಟ್‌ ರಸ್ತೆಯ ಉದ್ಘಾಟನೆಯನ್ನು ಮಾಜಿ ಸಚಿವ ಬಿ. ರಮಾನಾಥ ರೈ ಅವರು ನೆರವೇರಿಸಿ ಶುಭ ಹಾರೈಸಿದರು.

 

ಈ ರಸ್ತೆ ನಿರ್ಮಾಣಕ್ಕೆ ಸ್ಥಳೀಯ ಪುರಸಭಾ ಸದಸ್ಯ ಪುರುಷೋತ್ತಮ ಎಸ್. ಬಂಗೇರ ಅವರು ಅನುದಾನ ಒದಗಿಸಿದ್ದರು.

 

ಕಾರ್ಯಕ್ರಮದಲ್ಲಿ ಬಂಟ್ವಾಳ ಪುರಸಭಾ ಅಧ್ಯಕ್ಷ ವಾಸು ಪೂಜಾರಿ, ಸದಸ್ಯರು ಪಿಯೂಸ್ ಎಲ್. ರೋಡ್ರಿಗಸ್, ಬಿ. ಆರ್. ಅಂಚನ್, ಜಿ. ಟಿ. ಟಿ. ಇಕ್ಬಾಲ್, ಕುಶಾಲ್ ಕರ್ಕೇರ, ದೇವದಾಸ್ ಕುಲಾಲ್, ವೆಂಕಪ್ಪ ಕುಲಾಲ್, ವೆಂಕಪ್ಪ ಪೂಜಾರಿ, ಹರಿಶ್ಚಂದ್ರ ಆಚಾರ್ಯ, ರಾಜೇಶ್ ರೋಡ್ರಿಗಸ್, ನೀತೇಶ್ ಕುಲಾಲ್, ಅಮ್ಮಣ್ಣ ಅರ್ಬಿಗುಡ್ಡೆ, ಗಣೇಶ್ ಕುಲಾಲ್, ಲೋಕೇಶ್, ಸತೀಶ್ ಮಂಡಾಡಿ, ಪುರುಷೋತ್ತಮ ಎಸ್. ಬಿ., ರಂಜೀತ್ ಕುಂದರ್ ಹಾಗೂ ಇತರರು ಉಪಸ್ಥಿತರಿದ್ದರು.