ಮಂಗಳೂರು, ಮೇ 16: ಪಹಲ್ಗಾಮ್ ದಾಳಿಗೆ ಪ್ರತಿಕಾರವಾಗಿ ಪಾಕಿಸ್ತಾನದ ಉಗ್ರ ತಾಣಗಳ ಮೇಲೆ ಭಾರತ ನಡೆಸಿದ 'ಆಪರೇಷನ್ ಸಿಂಧೂರ್' ಯಶಸ್ವಿಯಾಗಿದ್ದು, ಪಾಕಿಸ್ತಾನದಲ್ಲಿ ನೆಲೆಸಿದ್ದ 9 ಉಗ್ರ ಶಿಬಿರಗಳನ್ನು ಭಾರತದ ಸೈನಿಕರು ಧ್ವಂಸ ಮಾಡಿದ್ದರು. ಈ ಯಶಸ್ವೀ ಕಾರ್ಯಾಚರಣೆ ಮತ್ತು ಅದರ ನಂತರ ನಡೆದ ದಾಳಿಯಲ್ಲಿ ಭಾರತದ ವಿಜಯವನ್ನು ಈಗ ದೇಶದ ಎಲ್ಲೆಡೆ ವಿಜಯೋತ್ಸವದ ಮೂಲಕ ವಿಜೃಂಭಿಸುತ್ತಿದ್ದಾರೆ.
ಅದೇ ಪ್ರಯುಕ್ತ, ಮಂಗಳೂರಿನ ಪಿವಿಎಸ್ ವೃತ್ತದಿಂದ ಕರಾವಳಿ ಉತ್ಸವ ಮೈದಾನದವರೆಗೆ ' ಸಿಂಧೂರ್ ವಿಜಯೋತ್ಸವ ಸಮಿತಿ' ಮಂಗಳೂರು, ದಕ್ಷಿಣ ಕನ್ನಡ ಜಿಲ್ಲೆ ವತಿಯಿಂದ ದಿನಾಂಕ ಮೇ 20, 2025 ರ ಮಂಗಳವಾರ 'ಸಿಂಧೂರ ವಿಜಯೋತ್ಸವ' ಎನ್ನುವ ಬೃಹತ್ ವಿಜಯೋತ್ಸವ ಕಾರ್ಯಕ್ರಮ ನೆರವೇರಲಿದೆ.
ಮೇ 20, 2025 ರ ಮಧ್ಯಾಹ್ನ 3.00 ಗಂಟೆಗೆ ಮೆರವಣಿಗೆ ಶುರುವಾಗಲಿದ್ದು, ಸಂಜೆ 5.00 ಗಂಟೆಗೆ ಕರಾವಳಿ ಉತ್ಸವ ಮೈದಾನದಲ್ಲಿ ಕಾರ್ಯಕ್ರಮ ಜರಗಲಿದೆ. ಈ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರು ಭಾಗವಹಿಸಿ ಭಾಷಣ ಮಾಡಲಿದ್ದಾರೆ ಎಂದು ಸಿಂಧೂರ್ ವಿಜಯೋತ್ಸವ ಸಮಿತಿ, ಮಂಗಳೂರು ಇದರಿಂದ ಪ್ರಕಟಿಸಲಾಗಿದೆ.