AADHAAR Card : ಆಧಾರ್ ಕಾರ್ಡ್ ಪ್ರತಿಯೊಂದು ಸರ್ಕಾರಿ ಮತ್ತು ಸರ್ಕಾರಿಯೇತರ ಕೆಲಸಗಳಲ್ಲಿ ಬಳಸುವ ಮಹತ್ವದ ಗುರುತಿನ ಚೀಟಿ. ಸರ್ಕಾರಿ ಕೆಲಸಗಳು ನಿಮ್ಮ ಆಧಾರ್ ಕಾರ್ಡ್ ಇಲ್ಲದೆ ನಡೆಯುವುದೇ ಇಲ್ಲ ಅದರ ಜೊತೆಗೆ ಸರಕಾರಿಯೇತರ ಕೆಲಸಗಳಿಗೂ ಆಧಾರ್ ಕಾರ್ಡ್ ಅಗತ್ಯ. ಬ್ಯಾಂಕ್ ಖಾತೆ ತೆರಿಯುವುದಾಗಲಿ, ಹೋಟೆಲ್ ಬುಕಿಂಗ್ ಮಾಡುವುದಾಗಲಿ, ಹೊಸ ಸಿಮ್ ಕಾರ್ಡ್ ಪಡೆಯುವುದಾಗಲಿ, ಮತ ಚಲಾವಣೆ ಸಂದರ್ಭದಲ್ಲಿ, ವಿಮಾನದಲ್ಲಿ ದೇಶದ ಒಳಗಡೆ ಪ್ರಯಾಣ, ಸರ್ಕಾರಿ ಬಸ್ ಗಳಲ್ಲಿ ಪ್ರಯಾಣ ಎಲ್ಲೆಂದರೆಡೆ ಆಧಾರ್ ಕಾರ್ಡ್ ಅತ್ಯಗತ್ಯ.
ಆಧಾರ್ ಕಾರ್ಡ್ ಎಷ್ಟು ಅಗತ್ಯವೋ ಅಷ್ಟೇ ಜಾಗರೂಕತೆಯಲ್ಲಿ ಅದನ್ನು ಬಳಸಬೇಕಾಗುತ್ತದೆ. ಒಂದು ವೇಳೆ ಆಧಾರ್ ಕಾರ್ಡ್ ದುರುಪಯೋಗವಾದರೆ ಶಿಕ್ಷೆ ಮತ್ತು ದಂಡ ಕಟ್ಟಿಟ್ಟ ಬುತ್ತಿ. ಅದೇ ರೀತಿ ಆಧಾರ್ ಕಾರ್ಡ್ ನಲ್ಲಿ ನಿಮಗೆ ಸಂಬಂಧಪಟ್ಟ ವಿವರಗಳನ್ನು ಬದಲಾಯಿಸಲು ಪ್ರಯತ್ನಿಸಿದರೆ ಯುಐಡಿಎಐ (ದಂಡ ನಿರ್ಧಾರ) ನಿಯಮಗಳು, 2021 ರ ಪ್ರಕಾರ, ಯುಐಡಿಎಐ ಅನಧಿಕೃತ ಪ್ರವೇಶ ಅಥವಾ ಯುಐಡಿಎಐ ನಿರ್ದೇಶನಗಳ ಉಲ್ಲಂಘನೆಗಾಗಿ ದಂಡವನ್ನು ವಿಧಿಸಲಾಗುವುದು.
ಒಂದು ವೇಳೆ ನೀವು ಅಥವಾ ನಿಮ್ಮ ಹೆಸರಿನಲ್ಲಿ ಬೇರೆ ಯಾರಾದರು ನಿಮ್ಮ ಆಧಾರ್ ಕಾರ್ಡ್ ನ್ನು ದುರುಪಯೋಗ ಪಡಿಸಿದರೆ ನಿಮಗೆ ಶಿಕ್ಷೆ ಮತ್ತು ದಂಡ ವಿಧಿಸಲಾಗುತ್ತದೆ. ಆದ್ದರಿಂದ ನಿಮ್ಮ ಆಧಾರ್ ಕಾರ್ಡ್ ಬಹಳ ಜೋಪಾನವಾಗಿ ಇಡುವುದು ನಿಮ್ಮದೇ ಕರ್ತವ್ಯ.
ಆಧಾರ್ ಕಾರ್ಡ್ ದುರುಪಯೋಗ ಮಾಡಿದರೆ ಆಗುವ ಶಿಕ್ಷೆ
ಆಧಾರ್ ಕಾರ್ಡ್ ದುರುಪಯೋಗಪಡಿಸಿಕೊಂಡರೆ 3 ವರ್ಷಗಳ ಜೈಲು ಶಿಕ್ಷೆ ವಿಧಿಸಬಹುದು ಮತ್ತು ರೂ. 10,0000 ವರೆಗೆ ದಂಡ ಕೂಡ ವಿಧಿಸಬಹುದು. uidai.gov.in ವೆಬ್ಸೈಟ್ ಪ್ರಕಾರ, ಆಧಾರ್ ಸಂಖ್ಯೆ ಹೊಂದಿರುವವರ ಜನಸಂಖ್ಯಾ ಮತ್ತು ಬಯೋಮೆಟ್ರಿಕ್ ಮಾಹಿತಿಯನ್ನು ಬದಲಾಯಿಸುವ ಅಥವಾ ಬದಲಾಯಿಸಲು ಪ್ರಯತ್ನಿಸುವ ಮೂಲಕ ಆಧಾರ್ ಸಂಖ್ಯೆ ಹೊಂದಿರುವವರ ಗುರುತನ್ನು ನಕಲಿ ಮಾಡುವುದು ದೊಡ್ಡ ಅಪರಾಧವಾಗಿದೆ. ಒಂದು ವೇಳೆ ನೀವು ಇಂತಹ ಕೆಲಸದಲ್ಲಿ ಬಾಗಿಯಾಗಿದ್ದರೆ ಸರಕಾರದ ಆಧಾರ್ ಕಾರ್ಡ್ ಅಧಿಕಾರಿಗಳು 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 10,000 ರೂ.ವರೆಗೆ ದಂಡ ವಿಧಿಸಬಹುದು.
ನೀವು ಮಾಡಬೇಕಾದ ಕೆಲಸ,
ಮೊದಲು ನಿಮ್ಮ ಕಾರ್ಡ್ ಬೇರೆ ಯಾರಾದರೂ ಬಳಸುತ್ತಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಿ. MyAadhaar ವೆಬ್ ಸೈಟ್ ಗೆ ನೀವು ಲಾಗಿನ್ ಮಾಡಬೇಕು. ನಂತರ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ ಮತ್ತು ಕ್ಯಾಪ್ಚಾ ಕೋಡ್ ಅನ್ನು ಕೂಡಾ ಭರ್ತಿ ಮಾಡಬೇಕಾಗುತ್ತದೆ. ನಂತರ "OTP ಯೊಂದಿಗೆ ಲಾಗಿನ್ ಮಾಡಿ" ಕ್ಲಿಕ್ ಮಾಡಿ. ನಿಮ್ಮ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ, ಅದನ್ನು ನಮೂದಿಸಿ ಮತ್ತು ಲಾಗಿನ್ ಮಾಡಿ.
ಈಗ "ದೃಢೀಕರಣ ಹಿಸ್ಟರಿ" ವಿಭಾಗಕ್ಕೆ ಹೋಗಿ. ನಿಮ್ಮ ಆಧಾರ್ ಕಾರ್ಡ್ ಅನ್ನು ಯಾವಾಗ ಬಳಸಲಾಗಿದೆ ಎಂದು ಇಲ್ಲಿ ನಿಮಗೆ ತಿಳಿಯುತ್ತದೆ. ನಿಮ್ಮ ಆಧಾರ್ ಕಾರ್ಡ್ ಅನ್ನು ಯಾರಾದರೂ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ನಿಮಗೆ ಇಲ್ಲಿ ತಿಳಿಯಲಿದೆ. ಒಂದು ವೇಳೆ ನಿಮ್ಮ ಆಧಾರ್ ಕಾರ್ಡ್ ದುರುಪಯೋಗವಾಗುತ್ತಿದೆ ಅಥವಾ ಬೇರೆ ಯಾರಾದರೂ ನಕಲಿ ದಾಖಲೆಯ ಮುಖಾಂತರ ನಕಲಿ ಮಾಡಿದ್ದಾರೆ ಎಂದು ತಿಳಿದು ಬಂದರೆ ತಕ್ಷಣ UIDAI ಗೆ ತಿಳಿಸಿ, ಕಂಪ್ಲೇಂಟ್ ರಿಜಿಸ್ಟರ್ ಮಾಡಬೇಕಾಗುತ್ತದೆ.
ನವೀಕರಣವಿಲ್ಲದ ಆಧಾರ್ ಕಾರ್ಡ್ ನಿಷ್ಕ್ರಿಯಗೊಳ್ಳಬಹುದು ಅಥವಾ ರದ್ದಾಗಬಹುದು, ಇದು ಭವಿಷ್ಯದಲ್ಲಿ ಅನೇಕ ಸಮಸ್ಯೆಗಳನ್ನು ಉಂಟು ಮಾಡುವ ಸಾಧ್ಯತೆ ಇರುವುದರಿಂದ ನಿಮ್ಮ ಆಧಾರ್ ಕಾರ್ಡ್ ನಿಯಮಿತವಾಗಿ ಪರಿಶೀಲಿಸಬೇಕು ಮತ್ತು ಅಗತ್ಯಬಿದ್ದಲ್ಲಿ ನವೀಕರಿಸುವುದು ಬಹಳ ಪ್ರಮುಖ್ಯ.