20 June 2025 | Join group

ನಿಮಗೆ ಬೋರ್ ವೆಲ್ ಕೊರೆಸಲು ಇದೆಯೇ? ಹಾಗಾದರೆ ಬನ್ನಿ ತಿಳಿಯೋಣ ಬೋರ್ ವೆಲ್ ಕೊರೆಸಲು ರಾಜ್ಯದಲ್ಲಿ ಬಂದಿರುವ ಹೊಸ ರೂಲ್

  • 16 May 2025 12:19:22 AM

ನಿಮಗೆ ಬೋರ್ ವೆಲ್ ಕೊರೆಸಲು ಇದೆಯೇ? ಹಾಗಾದರೆ ಬನ್ನಿ ತಿಳಿಯೋಣ ಬೋರ್ ವೆಲ್ ಕೊರೆಸಲು ರಾಜ್ಯದಲ್ಲಿ ಬಂದಿರುವ ಹೊಸ ರೂಲ್.

 

ಬೇಸಿಗೆ ಕಾಲದಲ್ಲಿ ನೀರಿನ ಸಮಸ್ಯೆ ರಾಜ್ಯದಾದ್ಯಂತ ಇದೆ. ಬೋರ್ ವೆಲ್ ಕೊರೆಯದೆ ಇದ್ದರೆ ಮಾರ್ಚ್ ತಿಂಗಳ ನಂತರ ಕೆಲವು ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತದೆ. ಅದೇ ಕಾರಣಕ್ಕಾಗಿ ರಾಜ್ಯದಲ್ಲಿ ಬೇಸಿಗೆ ಸಮಯದಲ್ಲಿ ಬಹಳಷ್ಟು ಬೋರ್ ಗಳನ್ನು ಕೊರೆಯಲಾಗುತ್ತದೆ

 

ಇದೀಗ ರಾಜ್ಯ ಸರಕಾರ ಹೊಸ ಬೋರ್ ವೆಲ್ ಕೊರೆಯುವವರಿಗೆ ಹೊಸ ನಿಯಮವೊಂದನ್ನು ಜಾರಿಗೊಳಿಸಿದ್ದಾರೆ.

 

ರಾಜ್ಯ ಅಂತರ್ಜಲ ಪ್ರಾಧಿಕಾರದ ಅನುಮತಿ

ಇತ್ತೀಚಿಗೆ ಜಾರಿಯಾದ ಹೊಸ ನೀತಿ ಪ್ರಕಾರ, ಕರ್ನಾಟಕ ರಾಜ್ಯದಲ್ಲಿ ಬೋರ್ ವೆಲ್ ಅಥವಾ ಕೊಳವೆ ಬಾವಿ ಕೊರೆಯಬೇಕಾದರೆ ರಾಜ್ಯ ಅಂತರ್ಜಲ ಪ್ರಾಧಿಕಾರದ ಅನುಮತಿ ಪಡೆಯಬೇಕಾಗುತ್ತದೆ. ಕೊಳವೆ ಬಾವಿ ಕೊರೆಯುವ ಭೂಮಾಲೀಕರು ಅಥವಾ ಕೊರೆಯುವ ಏಜೆನ್ಸಿಗಳು ಕನಿಷ್ಠ 15 ದಿನಗಳ ಮುಂಚಿತವಾಗಿ ಸ್ಥಳೀಯ ಅಂತರ್ಜಲ ಪ್ರಾಧಿಕಾರಕ್ಕೆ ಅಥವಾ ಪಂಚಾಯತ್ ಗೆ ಲಿಖಿತ ಸೂಚನೆ ನೀಡಬೇಕಾಗುತ್ತದೆ ಮತ್ತು ಸಂಬಂಧಪಟ್ಟ ಇಲಾಖೆಯಿಂದ ಅನುಮತಿ ಪಡೆದ ನಂತರ ಬೋರ್ ವೆಲ್ ಕೊರೆಯಬಹುದಾಗಿದೆ.

 

ಅನುಮತಿ ಪಡೆಯಲು ಬೇಕಾದ ದಾಖಲೆಗಳು

♦ ಅರ್ಜಿ ಪತ್ರ

♦ ಆಧಾರ್ ಕಾರ್ಡ್ ಪ್ರತಿಗಳು

♦ ಸ್ಥಳ ಮಾಲೀಕತ್ವದ ದಾಖಲೆಗಳು

♦ ರಿಜಿಸ್ಟರ್ಡ್ ಮೊಬೈಲ್ ನಂಬರ್

♦ ಪಾಸ್ಪೋರ್ಟ್ ಗಾತ್ರದ ಫೋಟೋ

 

ಆಕ್ಯುಪೆನ್ಸಿ ಪ್ರಮಾಣ ಪತ್ರ ( Occupancy Certificate )

ಒಂದು ವೇಳೆ ಬೋರ್ ವೆಲ್ ಕೃಷಿಯೇತರ ಉದ್ದೇಶಗಳಿಗಾಗಿ ಬೇಕಾದಲ್ಲಿ ಆಕ್ಯುಪೆನ್ಸಿ ಸರ್ಟಿಫಿಕೇಟ್ ಪಡೆಯಬೇಕಾಗುವುದು. ವಸತಿ, ವಾಣಿಜ್ಯ, ಕೈಗಾರಿಕಾ ಕೇಂದ್ರ ಹಾಗೂ ಇನ್ನಿತರ ಕೃಷಿಯೇತರ ಚಟುವಟಿಗೆಗಳ ಉದ್ದೇಶಕ್ಕಾಗಿ ಬಳಕೆಯಾಗುವುದಾದರೆ ಈ ಸರ್ಟಿಫಿಕೇಟ್ ಅಗತ್ಯ.

 

ಬೋರ್ ವೆಲ್ ಕೊರೆದ ನಂತರ ತೆಗೆದುಕೊಳ್ಳಬೇಕಾದ ಸುರಕ್ಷಾ ಕ್ರಮಗಳು

ಕೊಳವೆ ಕೊರೆದ ತಕ್ಷಣ ಅದನ್ನು ಸರಿಯಾದ ಉಕ್ಕಿನ ಮುಚ್ಚಳ ಅಥವಾ ಶಾಶ್ವತ ಮುಚ್ಚಳಗಳಿಂದ ಸುರಕ್ಷಿತವಾಗಿ ಮುಚ್ಚಬೇಕು. ವಿಫಲವಾದ ಬೋರ್ ವೆಲ್ ಗಳನ್ನು ಸುರಕ್ಷಿತವಾಗಿ ಮುಚ್ಚಿ, ಛಾಯಾಚಿತ್ರದೊಂದಿಗೆ 24 ಗಂಟೆಯೊಳಗೆ ಪ್ರಾಧಿಕಾರಕ್ಕೆ ಮಾಹಿತಿ ನೀಡಬೇಕು. ಬೋರ್ ವೆಲ್ ಕೊರೆದ ಸ್ಥಳದಲ್ಲಿ ಬೇಲಿ ಅಥವಾ ಸೂಚನಾ ಫಲಕ ಕಡ್ಡಾಯವಾಗಿ ಹಾಕಬೇಕು.

 

ಕಾನೂನು ಉಲ್ಲಂಘನೆ ಮಾಡಿದರೆ ದಂಡ ಮತ್ತು ಶಿಕ್ಷೆ

♦ ನಿಯಮ ಉಲ್ಲಂಘನೆ ಮಾಡಿದರೆ ರೂ. 5,000 ದಂಡ ಅಥವಾ 3 ತಿಂಗಳವರೆಗೆ ಜೈಲುವಾಸ

♦ ಸುರಕ್ಷತಾ ಕ್ರಮಗಳನ್ನು ಪಾಲಿಸದೆ ಇದ್ದರೆ ರೂ.10,000 ದಂಡ ಅಥವಾ 6 ತಿಂಗಳವರೆಗೆ ಜೈಲುವಾಸ

♦ ಕೊರೆಯುವ ಏಜನ್ಸಿಗಳು ನಿಯಮ ಪಾಲಿಸದಿದ್ದರೆ ರೂ. 25,000 ವರೆಗೆ ದಂಡ ಅಥವಾ 1 ವರ್ಷ ಶಿಕ್ಷೆ

♦ ಸೂಚನಾಫಲಕ ಅಥವಾ ಬೇಲಿ ಹಾಕದೆ ಇದ್ದಲ್ಲಿ ರೂ. 5,000 ದಂಡ ಅಥವಾ 3 ತಿಂಗಳು ಶಿಕ್ಷೆ

 

ರೈತರಿಗೆ ವಿನಾಯಿತಿ ಇದೆ

ರೈತರಿಗೆ ಕೆಲವು ವಿನಾಯಿತಿಗಳನ್ನು ನೀಡಲಾಗಿದೆ. ರೈತರು ಬೋರ್ ವೆಲ್ ಕೊರೆಯುವ ಮುನ್ನ ಸ್ಥಳೀಯ ಪ್ರಾಧಿಕಾರಕ್ಕೆ ಸೂಚನೆ ನೀಡುವ ಅವಶ್ಯಕತೆ ಇಲ್ಲ ಎಂದು ತಿಳಿಸಲಾಗಿದೆ. ಆದರೆ ಸುರಕ್ಷಾ ಕ್ರಮಗಳನ್ನು ತಪ್ಪದೆ ಪಾಲಿಸಬೇಕೆಂದು ಹೇಳಲಾಗಿದೆ.

 

ಕೆಟ್ಟು ಹೋದ ಅಥವಾ ನೀರು ಸಿಗದ ಕೊಳವೆ ಬಾವಿಗಳನ್ನು ಅದರಷ್ಟಕ್ಕೆ ಬಿಟ್ಟ ಕಾರಣ ಮಕ್ಕಳು ಬಿದ್ದು ಸಾವು ಸಂಭವಿಸಿದ ಘಟನೆಗಳು ಆಗ್ಗಾಗೆ ನಡೆಯುವುದರಿಂದ ಇಂತಹ ಘಟನೆಗಳನ್ನು ತಪ್ಪಿಸುವ ಸಲುವಾಗಿ ರಾಜ್ಯ ಜಲ ಪ್ರಾಧಿಕಾರ ಇಂತಹ ಒಂದು ನಿಯಮವನ್ನು ಜಾರಿಗೊಳಿಸಿದೆ ಮತ್ತು ಇದನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕಾಗಿ ಸಾರ್ವಜನಿಕರಲ್ಲಿ ಕೋರಿದೆ.