20 June 2025 | Join group

3 ತಿಂಗಳ ರೇಷನ್ ಒಟ್ಟಿಗೆ ದೊರೆಯಲಿದೆ : ಕೇಂದ್ರ ಸರಕಾರದ ನಿರ್ಧಾರ, ಏನಿದರ ಗುಟ್ಟು?

  • 17 May 2025 02:34:46 AM

ಕೇಂದ್ರ ಸರಕಾರದ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿಯಲ್ಲಿ ಬಿಪಿಎಲ್ ಕಾರ್ಡ್ ಹೊಂದಿರುವ ಮನೆಗಳಿಗೆ ಮೂರು ತಿಂಗಳ ಮುಂಗಡ ಪಡಿತರ ರೇಷನ್ ನೀಡಲು ನಿರ್ಧರಿಸಿದೆ. ಈ ಹೊಸ ತೀರ್ಮಾನ ಭಾರತ ಮತ್ತು ಪಾಕಿಸ್ತಾನ ನಡುವೆ ಉಂಟಾಗಿರುವ ಯುದ್ಧದ ಪರಿಸ್ಥಿತಿಯ ನಡುವೆ ಪಡೆದುಕೊಳ್ಳಲಾಗಿದೆ.

 

ಕೇಂದ್ರ ಸರಕಾರವು ಸಾರ್ವಜನಿಕ ವಿತರಣಾ ವ್ಯವಸ್ಥೆ ( ಪಿಡಿಎಸ್) ಅಡಿಯಲ್ಲಿ ಫಲಾನುಭವಿಗಳಿಗೆ ಮೂರು ತಿಂಗಳ ಮುಂಚಿತವಾಗಿ ರೇಷನ್ ವಿತರಿಸಲು ಆದೇಶ ಹೊರಡಿಸಿದೆ. ಮುಂಬರುವ ಮುಂಗಾರಿನ ಕಾರಣಕ್ಕೆ ಎಲ್ಲಾ ಮನೆಗೂ ಆಹಾರ ಭದ್ರತೆ ಖಚಿತಪಡಿಸಿಕೊಳ್ಳಲು ಈ ನಿರ್ಧಾರ ಮಾಡಲಾಗಿದೆ.

 

ಕೇಂದ್ರ ಸರಕಾರವು ಈಗಾಗಲೇ ಭಾರತೀಯ ನಿಗಮ ಮತ್ತು ನ್ಯಾಯಬೆಲೆ ಅಂಗಡಿಗಳಿಗೆ ಮೂರು ತಿಂಗಳ ಅಂದರೆ ಜೂನ್ ಜುಲೈ ಮತ್ತು ಅಗಸ್ಟ್ ರೇಷನ್ ಪಧಾರ್ಥಗಳನ್ನು ಮುಂಚಿತವಾಗಿ ಸರಬರಾಜು ಮಾಡಲು ಆದೇಶಿಸಿದೆ. ಈ ಮೂಲಕ ಪ್ರತಿ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ತಲಾ ತಿಂಗಳಿಗೆ 10 ಕಿಲೋ ಗ್ರಾಂ ( ಕೇಂದ್ರದ 5ಕೆಜಿ ಮತ್ತು ರಾಜ್ಯದ 5ಕೆಜಿ ) ಲೆಕ್ಕದಲ್ಲಿ ಪ್ರತಿ ಪರಿವಾರಕ್ಕೆ ಒಟ್ಟು 30 ಕಿಲೋ ಗ್ರಾಂ ಅಕ್ಕಿ ಒಂದೇ ಬಾರಿ ನೀಡಲಾಗುವುದು.

 

ಮುಂಗಾರು ಮಳೆಯ ಸಮಯದಲ್ಲಿ ದುರ್ಗಮ ಪ್ರದೇಶಗಳಿಗೆ ಸಂಪರ್ಕ ಕಡಿತವಾಗುವ ಸಾಧ್ಯತೆ ಇರುವುದರಿಂದ, ಅಂತಹ ಸಂದರ್ಭದಲ್ಲಿ ಪದಾರ್ಥಗಳ ವಿತರಣೆ ಆ ಪ್ರದೇಶಗಳಿಗೆ ಕಷ್ಟವಾಗಿರುವುದರಿಂದ ಈ ಕ್ರಮ ಕೈಗೊಳಲಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

 

ಕೆಲವರು ಹೇಳುವ ಪ್ರಕಾರ, ಭಾರತ ಮತ್ತು ಪಾಕಿಸ್ತಾನದ ನಡುವೆ ಬೂದಿ ಮುಚ್ಚಿದ ಕೆಂಡದಂತಿರುವ ಪರಿಸ್ಥಿತಿಯಲ್ಲಿ ಒಂದು ವೇಳೆ ಯಾವುದೇ ಸಂದರ್ಭದಲ್ಲಿ ಮುಖಾಮುಖಿ ಎದುರಾದಲ್ಲಿ ದೇಶದ ಜನತೆ ತೊಂದರೆ ನುಭವಿಸಬಾರದೆಂಬ ಉದ್ದೇಶದಲ್ಲಿ ಈ ರೀತಿಯ ಯೋಜನೆಯನ್ನು ಜಾರಿಗೆ ತಂದಿದ್ದಾರೆ ಎಂದು ಹೇಳುತ್ತಾರೆ. ಒಟ್ಟಾರೆಯಾಗಿ ಮಳೆಗಾಲದಲ್ಲಿ ದುರ್ಗಮ ಪ್ರದೇಶಗಳಲ್ಲಿ ರೇಷನ್ ಪಡೆಯಲು ಕಷ್ಟ ಪಡುತ್ತಿದ್ದ ಬಡಕುಟುಂಬಗಳಿಗೆ ಈ ಯೋಜನೆ ತುಂಬಾ ಪ್ರಯೋಜನಕಾರಿಯಾಗಲಿದೆ.