ಇನ್ನು ಕೆಲವೇ ದಿನಗಲ್ಲಿ ಮಳೆಗಾಲ ಪ್ರಾರಂಭವಾಗಲಿದೆ. ಮಳೆಗಾಲ ಸಂದರ್ಭದಲ್ಲಿ ಮನೆಗೆ ಹಾವುಗಳು ಬರುವ ಸಾಧ್ಯತೆ ಹೆಚ್ಚಿರುವುದರಿಂದ ನಾವು ತೆಗೆದುಕೊಳ್ಳುವ ಕೆಲ ಮುನ್ನಚ್ಚರಿಕೆಯಿಂದ ಅವುಗಳ ಬರುವಿಕೆಯನ್ನು ತಪ್ಪಿಸಬಹುದು. ಸಾಮಾನ್ಯವಾಗಿ ಹಳ್ಳಿ ಪ್ರದೇಶಗಳಲ್ಲಿ ಹಾವಿನ ಕಾಟ ಹೆಚ್ಚಾಗಿರುತ್ತದೆ.
ಆದ್ದರಿಂದ, ಮಳೆಗಾಲದ ಸಮಯದಲ್ಲಿ ಹಾವುಗಳ ಕಾಟದಿಂದ ದೂರವಿರಲು ಮತ್ತು ಹಾವುಗಳು ಬರದಂತೆ ಈ ರೀತಿ ಮಾಡಿ;
ಮನೆಗಳ ಕಿಟಕಿಗಳನ್ನು ಸರಿಯಾಗಿ ಮುಚ್ಚಿ
ಮನೆಯ ಕಿಟಕಿಗಳನ್ನು ಸರಿಯಾಗಿ ಮುಚ್ಚಬೇಕು. ಮಳೆಗಾಲದಲ್ಲಿ ಹಾವುಗಳು ಬೆಚ್ಚನೆಯ ಪ್ರದೇಶಗಳನ್ನು ಹುಡುಕುತ್ತಿರುತ್ತವೆ. ಒಂದು ವೇಳೆ ಕಿಟಕಿ ಬಾಗಿಲುಗಳು ತೆರೆದಿದ್ದರೆ ಮನೆಯ ಒಳಗೆ ಪ್ರವೇಶಿಸಬಹುದು. ಆದ್ದರಿಂದ ಮನೆಯ ಬಾಗಿಲು ಮತ್ತು ಕಿಟಕಿ ಮುಚ್ಚಿಡಬೇಕು.
ಮನೆಯ ಸುತ್ತ ಬಳ್ಳಿಗಳಿರಬಾರದು
ಮನೆಯ ಸುತ್ತ ಬಳ್ಳಿಗಳಿರಬಾರದು. ಬಳ್ಳಿಗಳು ಮನೆಯ ಗೋಡೆಗೆ ಅಂಟಿಕೊಂಡಿದ್ದರೆ ಅದು ಬಹಳ ದೊಡ್ಡ ಸಮಸ್ಯೆಗೆ ಕಾರಣವಾಗಬಹುದು. ಬಳ್ಳಿಗಳ ಮೂಲಕ ಹಾವುಗಳು ಮನೆಯ ಒಳಗೆ ಬರಲಿದೆ. ಆದ್ದರಿಂದ ಮನೆಯ ಸುತ್ತ ಇರುವ ಬಳ್ಳಿಗಳನ್ನು ತಪ್ಪದೆ ಕತ್ತರಿಸಿ.
ಕೋಳಿ ಅಥವಾ ನಾಯಿ ಗೂಡು ಸ್ವಚ್ಛವಾಗಿರಬೇಕು
ಮನೆಯಲ್ಲಿರುವ ಕೋಳಿ ಅಥವಾ ನಾಯಿ ಗೂಡು ಯಾವಾಗಲೂ ಸ್ವಚ್ಛವಾಗಿರಬೇಕು. ಕೆಲ ತಳಿಯ ಹಾವುಗಳು ಕೋಳಿಯ ತ್ಯಾಜ್ಯಗಳನ್ನು ತಿನ್ನಲು ಗೂಡಿನ ಹತ್ತಿರ ಬರುತ್ತದೆ.
ತಾಜ್ಯ ರಾಶಿ ಹಾಕಬಾರದು
ಮನೆಯ ಸುತ್ತ ತಾಜ್ಯ ರಾಶಿ ಹಾಕಬೇಡಿ. ಮರದ ತುಂಡುಗಳು, ಒಣ ಎಲೆಗಳು, ಪೈಪ್ ತುಂಡುಗಳು ಹಾಗೆ ಯಾವುದೇ ತಾಜ್ಯ ಒಂದೇ ಕಡೆ ರಾಶಿ ಹಾಕುವುದರಿಂದ ಅಲ್ಲಿ ಹಾವು ಬಂದು ಕುಳಿತುಕೊಳ್ಳುವ ಸಾಧ್ಯತೆ ಹೆಚ್ಚು. ಒಂದು ವೇಳೆ ನಿಮಗೆ ಬೇರೆ ಯಾವುದೇ ದಾರಿ ಇಲ್ಲದೆ ತಾಜ್ಯವನ್ನು ರಾಶಿ ಹಾಕಲೇ ಬೇಕಾದ ಪರಿಸ್ಥಿತಿ ಬಂದರೆ, ಅದನ್ನು ತೆರವುಗೊಳಿಸುವಾಗ ಬಹಳ ಎಚ್ಚರಿಕೆಯಿಂದ ಮಾಡಿ.
ನಿಮ್ಮ ಬಟ್ಟೆಗಳನ್ನು ರಾಶಿ ಹಾಕಬೇಡಿ
ಮಳೆಗಾಲದಲ್ಲಿ ಬಟ್ಟೆಗಳನ್ನು ಒಂದೇ ಕಡೆ ರಾಶಿ ಹಾಕಲು ಹೋಗಬೇಡಿ. ಹಾವುಗಳು ಬೆಚ್ಚಗಿನ ವಾತಾವರಣ ಹುಡುಕುವ ಸಂದರ್ಭದಲ್ಲಿ ಇಂತಹ ಬಟ್ಟೆ ರಾಶಿ ಸಿಕ್ಕಿದರೆ ಅದರ ಒಳಗೆ ಕುಳಿತುಕೊಳ್ಳಲಿದೆ. ಆದ್ದರಿಂದ ಭಾರಿ ಎಚ್ಚರ ವಹಿಸಬೇಕು.
ಆಹಾರಗಳ ತಾಜ್ಯ ಇಡಬೇಡಿ
ಮನೆಯಲ್ಲಿ ಆಹಾರಗಳ ತ್ಯಾಜ್ಯ ಇಡಬೇಡಿ. ಇದರ ವಾಸನೆಗೆ ಹಾವುಗಳು ಮನೆಯ ಸುತ್ತ ಬರುವ ಸಾಧ್ಯತೆ ಇದೆ. ಸಾಕು ಪ್ರಾಣಿಗಳ ತ್ಯಾಜ್ಯ ಮಾತ್ರ ಮನೆಯ ಹೊರಗಡೆ ಇಡಲೇ ಬೇಡಿ.
ಮನೆಯ ಸುತ್ತ ಬಿಲಗಳಿದ್ದರೆ ಮುಚ್ಚಿ
ಮನೆಯ ಸುತ್ತ ಬಿಲಗಳಿದ್ದರೆ ಅದನ್ನು ಮುಚ್ಚಬೇಕು. ಬಿಲಗಳಲ್ಲಿ ಹಾವುಗಳು ಬಂದು ಕುಳಿತುಕೊಳ್ಳುವ ಸಾಧ್ಯತೆ ಹೆಚ್ಚು. ಚಿಕ್ಕ ಬಿಲ ಇದ್ದರು ಕೂಡ ಅದರಲ್ಲಿ ಬಂದು ಕುಳಿತುಕೊಳ್ಳಲಿದೆ. ಆದ್ದರಿಂದ ಮನೆಯ ಸುತ್ತ ಬಿಲಗಳಿದ್ದರೆ ಅದನ್ನು ಮುಚ್ಚಿ.
ಪಾಪಾಸುಕಳ್ಳಿ, ಶುಂಠಿ ಗಿಡಗಳನ್ನು ಬೆಳೆಸಿ
ಮನೆಯ ಪಕ್ಕ ಪಾಪಾಸುಕಳ್ಳಿ ಅಥವಾ ಶುಂಠಿ ಗಿಡಗಳನ್ನು ನೆಟ್ಟರೆ ಹಾವುಗಳು ಮನೆಯ ಹತ್ತಿರ ಬರುವುದು ಕಡಿಮೆಯಾಗುವುದು. ಈ ಸಸ್ಯಗಳು ಮನೆಯ ಹತ್ತಿರ ಇದ್ದಾರೆ ಹಾವುಗಳನ್ನು ಸಂಚಾರ ಕಡಿಮೆಯಾಗುತ್ತದೆ.