COVID-19 : ದಿನದಿಂದ ದಿನಕ್ಕೆ ಕೋವಿಡ್ -19 ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಈಗಾಗಲೇ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಹೆಚ್ಚಿನ ಸಂಖ್ಯೆಯ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಮಹಾರಾಷ್ಟ್ರದಲ್ಲಿ ಈ ವರ್ಷದಲ್ಲಿ 2 ಸಾವು ಕೂಡ ಸಂಭವಿಸಿದೆ.
ಆಂಧ್ರ ಪ್ರದೇಶದಲ್ಲಿ ಗುರುವಾರ ಒಂದೇ ದಿವಸ 19 ಮಂದಿಯಲ್ಲಿ ಕೋರೋಣ ಸೋಂಕು ದೃಢಪಟ್ಟಿದೆ. ಈಗಾಗಲೇ ಆಂದ್ರಪ್ರದೇಶದಲ್ಲಿ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ. ಆಂಧ್ರಪ್ರದೇಶ ಆರೋಗ್ಯ ಇಲಾಖೆಯು ನವೀಕರಿಸಿದ COVID-19 ಸಲಹೆಯನ್ನು ಹೊರಡಿಸಿದ್ದು, ಸಾರ್ವಜನಿಕರು ನೈರ್ಮಲ್ಯವನ್ನು ಪಾಲಿಸಬೇಕು, ಗುಂಪು ಸೇರುವುದನ್ನು ತಪ್ಪಿಸಬೇಕು ಮತ್ತು ರೋಗಲಕ್ಷಣಗಳಿದ್ದರೆ ಪರೀಕ್ಷೆಗೆ ಒಳಗಾಗಬೇಕು ಎಂದು ಒತ್ತಾಯಿಸಿದೆ.
ಜನದಟ್ಟಣೆ ಇರುವ ಅಥವಾ ಮುಚ್ಚಿದ ವಾತಾವರಣದಲ್ಲಿ, ವೈರಸ್ ಹರಡುವಿಕೆಯನ್ನು ಕಡಿಮೆ ಮಾಡಲು ಮುಖವಾಡಗಳನ್ನು ಖಡ್ಡಾಯವಾಗಿ ಧರಿಸಲು ಶಿಫಾರಸು ಮಾಡಲಾಗಿದೆ. ಆಗಾಗ್ಗೆ ಕೈ ತೊಳೆಯುವುದು, ಕೆಮ್ಮು ಮತ್ತು ಸೀನುವಾಗ ಮುಸುಕನ್ನು ಮುಚ್ಚಿಕೊಳ್ಳುವುದು ಮತ್ತು ಮುಖ ಸ್ಪರ್ಶಿಸುವುದನ್ನು ತಪ್ಪಿಸುವುದು ಮುಂತಾದ ವೈಯಕ್ತಿಕ ನೈರ್ಮಲ್ಯ ಅಭ್ಯಾಸಗಳ ಮಹತ್ವವನ್ನು ಇಲಾಖೆ ಒತ್ತಿ ಹೇಳಿದೆ.
60 ವರ್ಷಕ್ಕಿಂತ ಮೇಲ್ಪಟ್ಟ ವ್ಯಕ್ತಿಗಳು ಮತ್ತು ಗರ್ಭಿಣಿಯರು ಮನೆಯೊಳಗೆ ಇರಲು ಮತ್ತು ಸಂಭಾವ್ಯ ಸೋಂಕಿನ ಮೂಲಗಳ ಸಂಪರ್ಕ ತಪ್ಪಿಸಲು ತಿಳಿಸಿದೆ. ಸಾರ್ವಜನಿಕ ಆರೋಗ್ಯಕ್ಕೆ ಸವಾಲಾಗಿ ಪರಿಣಮಿಸುತ್ತಿರುವ ಪ್ರಕರಣಗಳು ಮುಂದುವರೆದಿರುವುದರಿಂದ ನಾಗರಿಕರು ತಡೆಗಟ್ಟುವ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸಲಹೆಯು ಒತ್ತಾಯಿಸುತ್ತದೆ.
ಧಾರ್ಮಿಕ ಸಭೆಗಳು, ಸಾಮಾಜಿಕ ಕಾರ್ಯಕ್ರಮಗಳು, ಪಾರ್ಟಿಗಳು, ರೈಲ್ವೆ ನಿಲ್ದಾಣಗಳು, ಬಸ್ ಟರ್ಮಿನಲ್ಗಳು ಮತ್ತು ವಿಮಾನ ನಿಲ್ದಾಣಗಳಂತಹ ಸಾರ್ವಜನಿಕ ಸ್ಥಳಗಳು ಕಠಿಣ ಕೋವಿಡ್-19 ಸುರಕ್ಷತಾ ಪ್ರೋಟೋಕಾಲ್ಗಳನ್ನು ಜಾರಿಗೆ ತರಲು ನಿರ್ದೇಶಿಸಲಾಗಿದೆ.
ಈ ಹಿಂದೆ ಕೋರೋಣ ಪ್ರಕರಣಗಳು ಶಿಖರಕ್ಕೆ ಏರಿದ್ದ ಸಂದರ್ಭದಲ್ಲಿ ಯಾವೆಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸುತ್ತಿದ್ದೇವೊ, ಆ ಎಲ್ಲಾ ಮುನ್ನೆಚ್ಚರಿಕೆ ಮತ್ತು ಸೋಂಕಿನ ನಂತರ ಪಡೆಯಬೇಕಾದ ಚಿಕಿಸ್ಥೆ ಈ ಎಲ್ಲದರ ಬಗ್ಗೆ ಇಲಾಖೆ ಸಲಹೆಯಲ್ಲಿ ನಮೂದಿಸಿದೆ.
ಈಗಾಗಲೇ ಕರ್ನಾಟಕದಲ್ಲಿ 33 ಕೇಸುಗಳು ದಾಖಲಾಗಿದ್ದು, ಕೇರಳದಲ್ಲಿ 186 ಪ್ರಕರಣಗಳಿವೆ. ಮಹಾರಸ್ತರದಲ್ಲಿ 106 ಪ್ರಕರಣಗಳು ಪತ್ತೆಯಾಗಿವೆ. ಇದೆ ರೀತಿ ತಮಿಳುನಾಡಿನಲ್ಲೂ ಸೋಂಕು ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವರದಿಯಾಗಿದೆ.