ಇತ್ತೀಚಿಗೆ ಮಂಡ್ಯದಲ್ಲಿ ಟ್ರಾಫಿಕ್ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ನಿಲ್ಲಿಸಿದ ಬೈಕ್ ನಿಂದ ಬಿದ್ದ ಮಗು ಮೇಲೆ ಲಾರಿ ಹರಿದು ಮೃತಪಟ್ಟ ಘಟನೆ ಮತ್ತು ದಾವಣಗೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಕ್ಯಾಂಟರ್ ಚಾಲಕ ಡಿಕ್ಕಿ ಹೊಡೆದ ಪ್ರಕರಣದ ಬೆನ್ನಲ್ಲೇ ರಾಜ್ಯ ಪೊಲೀಸ್ ಪಡೆಯ ಮುಖ್ಯಸ್ಥರಾದ ಡಾ. ಎಂ. ಎ ಸಲೀಮ್ ನೂತನ ಮಾರ್ಗಸೂಚಿ ಹೊರಡಿಸಿದ್ದಾರೆ.
1. ಸಂಚಾರ ನಿಯಮಗಳ ಉಲ್ಲಂಘನೆ ಕಂಡುಬಂದಲ್ಲಿ ಮಾತ್ರ ವಾಹನ ನಿಲ್ಲಿಸಬೇಕು
ಸ್ಪಷ್ಟ ನಿಯಮ ಉಲ್ಲಂಘನೆಯಾದಾಗ ಮಾತ್ರ ವಾಹನ ಸವಾರರನ್ನು ನಿಲ್ಲಿಸಬೇಕು - ಯಾದೃಚ್ಛಿಕವಾಗಿ ವಾಹನಗಳನ್ನು ನಿಲ್ಲಿಸಿ ದಾಖಲೆ ಪರಿಶೀಲನೆ ಮಾಡತಕ್ಕದ್ದು.
2. ವಾಹನ ಹಿಂಬಾಲಿಸುವುದು, ಕೀ ಕಿತ್ತುಕೊಳ್ಳುವುದು ನಿಷೇದ
ಪಲಾಯನ ಮಾಡುವ ವಾಹನಗಳನ್ನು ಬೆನ್ನಟ್ಟುವಂತಿಲ್ಲ. ನಂಬರ್ ಪ್ಲೇಟ್ ರೆಕಾರ್ಡ್ ಮಾಡಿ ನಿಯಂತ್ರಣ ಕೊಠಡಿಯನ್ನು ಎಚ್ಚರಿಸಬೇಕು.
ಪ್ರಯಾಣಿಕನನ್ನು ಕೆಳಗಿಳಿಸುವುದು, ಚಾವಿ ಕಿತ್ತುಕೊಳ್ಳುವುದು ಅಥವಾ ಆಕಸ್ಮಿಕವಾಗಿ ತಡೆದು ನಿಲ್ಲಿಸುವಂತಿಲ್ಲ.
3. ಸಂಚಾರಿ ಪೊಲೀಸರು ಹೆದ್ದಾರಿ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು
ಝಿಗ್-ಝಾಗ್ ಬ್ಯಾರಿಕೇಡ್ ಗಳನ್ನು ತೆಗೆದು ಹಾಕಬೇಕು.
ತಪಾಸಣೆಗೆ 100 ರಿಂದ 150ಮೀ ಮೊದಲು ಪ್ರತಿಫಲನ (Reflector) ಹೊಂದಿರುವ ಶಂಕುಗಳನ್ನು ಇರಿಸಬೇಕು.
4. ಅಧಿಕಾರಿಗಳು ಗೋಚರಣೆಗೆ ಸಂಬಂಧಪಟ್ಟ ಸುರಕ್ಷಿತಾ ಕ್ರಮ ಅನುಸರಿಸಬೇಕು
ಪೊಲೀಸರು ಕಡ್ಡಾಯವಾಗಿ ಪ್ರತಿಫಲಿತ (Reflective Jacket) ಧರಿಸಿರಬೇಕು ಮತ್ತು ಎಲ್ಇಡಿ ಬ್ಯಾಟನ್ಗಳು (LED Batons) ಕೈಯಲ್ಲಿ ಹಿಡಿದಿರಬೇಕು.
ದೈಹಿಕ ತಪಾಸಣೆ ಸಂದರ್ಭದಲ್ಲಿ ದೇಹ ಧರಿಸಬಹುದಾದ ಕ್ಯಾಮೆರಾ (Body-worn Camera) ಬಳಸುವುದು ಕಡ್ಡಾಯ.
5. ಟೆಕ್ನಾಲಜಿಯ ಆಧಾರಿತ
ITMS (ಕ್ಯಾಮೆರಾ) ವ್ಯವಸ್ಥೆ ಇದ್ದ ಸ್ಥಳಗಳಲ್ಲಿ ದೂರದಿಂದಲೇ ನಿಯಂತ್ರಣ ಮಾಡಬೇಕು.
ಟ್ರಾಫಿಕ್ ಪೊಲೀಸರ ಸಹಯೋಗವಿಲ್ಲದೆ ನಾಕಾಬಂದಿ ಮಾಡುವಂತಿಲ್ಲ.
6. ಸಾರ್ವಜನಿಕ ಜಾಗೃತಿಗಾಗಿ ಅಭಿಯಾನ
ವಾಹನ ಚಾಲಕರಿಗೆ ಶಿಸ್ತಿನ ಬಗ್ಗೆ ಜಾಗೃತಿ ಮೂಡಿಸಲು ಕಾರ್ಯಾಚರಣೆ ರೂಪಿಸುವುದು.
ಇನ್ನು ಮುಂದೆ ಸಂಚಾರಿ ಕಾರ್ಯಾಚರಣೆ ಸಂದರ್ಭದಲ್ಲಿ ಈ ಎಲ್ಲಾ ಮಾರ್ಗಸೂಚಿಗಳನ್ನು ಪೊಲೀಸರು ಪಾಲಿಸದೇ ಇದ್ದರೆ ಸಾರ್ವಜನಿಕರು ಮುಕ್ತವಾಗಿ ಪ್ರಶ್ನೆ ಮಾಡುವುದಲ್ಲದೆ, ಒಂದು ವೇಳೆ ಉಲ್ಲಂಘನೆ ಕಂಡು ಬಂದಲ್ಲಿ ಉನ್ನತ ಅಧಿಕಾರಿಗಳಿಗೆ ಮಾಹಿತಿ ನೀಡಬಹುದಾಗಿದೆ.