10 December 2025 | Join group

ಯಕ್ಷಗಾನ ಕುರಿತು ವಿವಾದದ ಹೇಳಿಕೆ ನೀಡಿದ ಬಿಳಿಮಲೆಯಯನ್ನು ಸ್ಥಾನದಿಂದ ವಜಾಗೊಳಿಸಿ: ಸುನಿಲ್ ಕುಮಾರ್ ಕಾರ್ಕಳ

  • 20 Nov 2025 03:37:21 PM

ಕಾರ್ಕಳ: ಯಕ್ಷಗಾನದ ಬಗ್ಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ನೀಡಿದ ವಿವಾದಾತ್ಮಕ ಹೇಳಿಕೆಗೆ ಮಾಜಿ ಕನ್ನಡ ಸಂಸ್ಕೃತಿ ಸಚಿವ ವಿ. ಸುನಿಲ್ ಕುಮಾರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

 

ಯಕ್ಷಗಾನದಲ್ಲಿ ‘ಸಲಿಂಗಕಾಮ’ ಇದೆ ಎಂದು ಬಿಳಿಮಲೆ ಮಾಡಿದ ಟಿಪ್ಪಣಿ ಕಲಾ ಜಗತ್ತಿಗೆ ಅವಮಾನಕಾರಿಯಾಗಿದೆ ಎಂದು ಅವರು ಹೇಳಿದ್ದಾರೆ.

 

ಮುಂಜಾನೆ ಬಿಡುಗಡೆ ಮಾಡಿದ ತಮ್ಮ ಪ್ರತಿಕ್ರಿಯೆಯಲ್ಲಿ ಸುನಿಲ್ ಕುಮಾರ್, “ನಮ್ಮ ಪ್ರದೇಶದ ಪರಂಪರೆಯ ಗುರುತು ಆಗಿರುವ ಯಕ್ಷಗಾನವನ್ನು ಇಂತಹ ಆಧಾರವಿಲ್ಲದ ಮಾತುಗಳಿಂದ ಕೆಳಗೆಳೆಯಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ.

 

ಕರಾವಳಿ ಮತ್ತು ಮಲೆನಾಡಿನ ಸಾವಿರಾರು ಕಲಾವಿದರು ಭಕ್ತಿಯಿಂದ ಈ ಕಲೆ ಉಳಿಸಿಕೊಂಡಿದ್ದಾರೆ ಎಂಬುದನ್ನು ಉಲ್ಲೇಖಿಸಿ, ಬಿಳಿಮಲೆ ಅವರ ಹೇಳಿಕೆ ಅವರನ್ನು ನೋವುಂಟುಮಾಡಿದೆ ಎಂದಿದ್ದಾರೆ. ಬಿಳಿಮಲೆ ಅವರು ಹೊಣೆ ಹೊತ್ತು ಸ್ಥಾನ ತ್ಯಜಿಸುವಂತೆ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.