ಅಜಿತ್ ದೋವಲ್, ಭಾರತದ ಜೇಮ್ಸ್ ಬಾಂಡ್ ಎಂದೇ ಖ್ಯಾತಿಯ ರಾಷ್ಟ್ರೀಯ ಭದ್ರತಾ ಸಲಹೆಗಾರ. 'ಆಪರೇಷನ್ ಸಿಂಧೂರ್' ನ ಪ್ರಮುಖ ಮಾಸ್ಟರ್ ಮೈಂಡ್. ಪಾಕಿಸ್ತಾನದ ಭಯೋತ್ಪಾದಕ ಮನಸ್ಥಿತಿಗೆ 'ಅಜಿತ್ ಡೆವಿಲ್' (Ajith Devil) ಎಂದೇ ಖ್ಯಾತಿಯ ಈ ಅಜಿತ್ ದೋವಲ್ ಭಾರತದ ದೊಡ್ಡ ರತ್ನ.
ಒಂದು ಕಾಲದ ಗೂಢಚಾರ (Spy) ಆಗಿರುವ ಅಜಿತ್ ದೋವಲ್ ಪಾಕಿಸ್ತಾನದಲ್ಲಿ ಬರೋಬರಿ 7 ವರ್ಷಗಳ ಕಾಲ ಗೂಢಚಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ದೋವಲ್ ರವರ ಪಾಕಿಸ್ತಾನದ ಜೀವನ ಭಯಂಕರ ರೋಮಾಂಚನಕಾರಿಯಾಗಿದೆ. ಕೆಲ ದಿನಗಳ ಹಿಂದೆ ಒಂದು ಕಾರ್ಯಕ್ರಮದಲ್ಲಿ ದೋವಲ್ ರವರಿಗೆ ಒಬ್ಬ ಯುವಕ ಕಾರ್ಯಕ್ರಮವೊಂದರಲ್ಲಿ ಒಂದು ಪ್ರಶ್ನೆಯನ್ನು ಕೇಳುತ್ತಾನೆ 'ನೀವು ಪಾಕಿಸ್ತಾನದಲ್ಲಿ ಇರುವಾಗ ಯಾವುದಾದರು ಧರ್ಮ ಸಂಕಟಕ್ಕೆ ತುತ್ತಾಗಿದ್ದೀರಾ?' ಅದಕ್ಕೆ ದೋವಲ್ ರವರು ವಿವರಿಸಿದ ನೈಜ ಘಟನೆಯ ಆ ತುಣುಕು ಕೇಳಲು ಬಹಳ ಆಸಕ್ತಿದಾಯಕವಾಗಿತ್ತು.
ಆ ಯುವಕ ಕೇಳಿದ ಪ್ರಶ್ನೆಗೆ ದೋವಲ್ ರವರು ತನ್ನ ಜೀವನದಲ್ಲಿ ನಡೆದ ನೈಜ ಘಟನೆಯನ್ನು ವಿವರಿಸಿದ್ದಾರೆ. ಅವರು ಲಾಹೋರ್ ನಲ್ಲಿ ಗೂಢಚಾರಿಕೆ ಮಾಡುತ್ತಾ ಇದ್ದ ಸಂದರ್ಭದಲ್ಲಿ ಸ್ಥಳೀಯ ಮುಸ್ಲಿಂ ವ್ಯಕ್ತಿಯಂತೆ ವೇಷ ಧರಿಸಿ ಅಲ್ಲಿನ ಮಾರುಕಟ್ಟೆ ಸುತ್ತಾಡುವುದು, ಮಸೀದಿಗಳಲ್ಲಿ ನಮಾಜ್ ಮಾಡಲು ಹೋಗೋದು, ಈ ರೀತಿಯ ಚಟುವಟಿಕೆಗಳು ಮಾಡುತ್ತಿದ್ದರಂತೆ. ಆದರೆ ಒಂದು ದಿವಸ ಲಾಹೋರ್ ಪಕ್ಕದ ಮಸೀದಿ ಹತ್ತಿರ ಹೋದ ಸಂದರ್ಭದಲ್ಲಿ ಒಬ್ಬ ಬಿಳಿ ಗಡ್ಡಧಾರಿ ವೃದ್ಧ ಮಸೀದಿ ಎದುರು ಕುಳಿತಿದ್ದರು ಮತ್ತು ಅವರು ನನ್ನನ್ನು 'ಇಲ್ಲಿಗೆ ಬಾ' ಎಂದು ಕರೆದರು ಮತ್ತು 'ನಾನು ಅವರ ಬಳಿಗೆ ಹೋದೆ' ಎಂದು ನಡೆದ ಘಟನೆಯನ್ನು ವಿವರಿಸಿದ್ದರು.
ದೋವಲ್ ರವರು ಮುಂದಕ್ಕೆ ಮಾತನಾಡಿ, 'ನನ್ನನು ಸುಮ್ಮನೆ ಕರೆದಿರಬಹುದೆಂದು ನಾನು ಅವರ ಬಳಿ ಹೋದೆ, ಆದರೆ ಅವರು ನನಗೆ ಒಂದು ಪ್ರಶ್ನೆ ಕೇಳಿದರು...ಅದೇನೆಂದರೆ...ನೀನು ಹಿಂದೂನ? ತಕ್ಷಣ ನಾನು ಹೇಳಿದೆ, ಅಲ್ಲ ನಾನು ಹಿಂದೂ ಅಲ್ಲ, ಆದರೆ ಆ ಮುದುಕ ಅವರನ್ನು ಬಿಡೋದಿಲ್ಲವಂತೆ. ದೋವಲ್ ರವರ ಕೈ ಹಿಡಿದು ಗಲ್ಲಿಗಳನ್ನು ದಾಟಿ ಆತನ ಮನೆಗೆ ಕರೆದುಕೊಂಡು ಹೋಗುತ್ತಾರೆ. ಅಲ್ಲಿ ಮತ್ತೆ ಕೇಳ್ತಾರಂತೆ 'ನೀನು ಹಿಂದೂ ಅಲ್ಲವಾ?' ಆದರೆ ದೋವಲ್ ಈಗ ಪ್ರಶ್ನೆ ನೀರಾಕಿಸುತ್ತಾರೆ. ಅಂತಿಮವಾಗಿ, ದೋವಲ್ ಆ ವೃದ್ಧ ವ್ಯಕ್ತಿಗೆ ನೀವು ಯಾಕೆ ಈ ತರ ಕೇಳ್ತಾ ಇದ್ದೀರಾ? ಎಂದು ಪ್ರಶ್ನಿಸುತ್ತಾರೆ. ಅದಕ್ಕೆ ವೃದ್ಧ ಕೊಟ್ಟ ಆ ಉತ್ತರ ದೋವಲ್ ರವರನ್ನು ನಿಜಕ್ಕೂ ಶಾಕ್ ಮಾಡುತ್ತದೆ .
ಇಂತ ಸಣ್ಣ ವಿಚಾರ ನನ್ನ ಗಮನಕ್ಕೆ ಬರದೇ ಹೋಯಿತೇ ಎಂಬ ಮುಜುಗರ ಕೂಡ ದೋವಲ್ ರವರಿಗೆ ಆಗುತ್ತೆ. ವೃದ್ಧ ಅಜಿತ್ ಕಿವಿಯನ್ನು ತೋರಿಸಿ ನಿನ್ನ ಕರ್ಣ ಛೇದ ಆಗಿದೆ, ಕಿವಿಯಲ್ಲಿ ತೂತು ಇದೆ ಎಂದರಂತೆ. ಆ ವೃದ್ಧ ಮುಂದಕ್ಕೆ ವಿವರಿಸಿ, 'ಮುಸ್ಲಿಮರಲ್ಲಿ ಕಿವಿ ತೂತು ನಿಷಿದ್ಧ. ಇದನ್ನು ಹಿಂದೂಗಳು ಮಾತ್ರ ಮಾಡಿಕೊಳ್ಳುತ್ತಾರೆ' ಎಂದು ಹೇಳುತ್ತಾರೆ.
ಅದಕ್ಕೆ ಪ್ರತಿಯುತ್ತರವಾಗಿ, 'ಇಲ್ಲ ನಾನು ಕನ್ವರ್ಟ್ ಆಗಿದ್ದೇನೆ ಅಂತ ಹೇಳಿದರೆ ಮುದುಕ ಹೇಳ್ತಾರೆ ಇಲ್ಲ ನೀನು ಎಂದು ಮುಸ್ಲಿಂ ಆಗಿರಲು ಸಾಧ್ಯವೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳುತ್ತಾರಂತೆ. ದೋವಲ್ ಗೆ ಕುತೂಹಲ ಕೆರಳಿ 'ಇದೆಲ್ಲ ನಿಮಗೆ ಹೇಗೆ ಗೊತ್ತಾಯಿತು, ನೀವು ಹೇಗೆ ಗಮನಿಸಿದಿರಿ' ಎಂದು ಪ್ರಶ್ನಿಸುತ್ತಾರೆ. ಅವಾಗ ಆ ಮುದುಕ ಹೇಳ್ತಾರಂತೆ 'ನಾನು ಕೂಡ ಹಿಂದೂ, ಇಲ್ಲಿನ ಕೆಲ ಕೋಮುವಾದಿ ಮನಸ್ಥಿತಿಯವರು ನನ್ನ ಇಡೀ ಕುಟುಂಬವನ್ನು ಕೊಂದು ಹಾಕಿದ್ದಾರೆ. ಜೀವನ ನಡೆಸಲು ನಾನು ವೇಷ ಧರಿಸಿ ಜೀವನ ನಡೆಸುತ್ತಿದ್ದೇನೆ' ಎಂದು ತನ್ನ ಕಷ್ಟಗಳನ್ನು ಹೇಳಿಕೊಂಡರಂತೆ. ಇದು ದೋವಲ್ ಅವರು ಸಿಕ್ಕಿ ಹಾಕಿಕೊಳ್ಳುವುದರಿಂದ ಜಸ್ಟ್ ಮಿಸ್ ಆದ ಕತೆ ಎಂದು ತನ್ನ ಮನದಾಳದ ಮಾತುಗಳನ್ನು ಡೋವಲ್ ರವರು ಹೇಳಿಕೊಂಡಿದ್ದಾರೆ. ಈ ಘಟನೆ ನಂತರ ಅಜಿತ್ ದೋವಲ್ ತನ್ನ ಕಿವಿಯನ್ನು ಪ್ಲಾಸ್ಟಿಕ್ ಸರ್ಜರಿ ಅಥವಾ ಬೇರೆ ವಿಧಾನಗಳಿಂದ ರಂಧ್ರವನ್ನು ಮುಚ್ಚಿಸಲು ಪ್ರಯತ್ನ ಪತ್ತೆ ಎಂದು ತಿಳಿಸಿದರು.
ಈ ಘಟನೆ ಬಗ್ಗೆ ವಿಸ್ತಾರವಾಗಿ ಖುದ್ದು ಅಜಿತ್ ಡೋವಲ್ ರವರು ಒಂದು ಕಾರ್ಯಕ್ರಮದಲ್ಲಿ ತನ್ನ ಭಾಷಣಗಳ ಮೂಲಕ ವ್ಯಕ್ತಪಡಿಸಿದ್ದಾರೆ. ಅಜಿತ್ ಡೋವಲ್ ರಂತಹ ಅನುಭವಿ ತೀಕ್ಷ್ಣ ವ್ಯಕ್ತಿ ಭಾರತಕ್ಕೆ ಭದ್ರತಾ ಸಲಹೆಗಾರರಾಗಿ ಸಿಕ್ಕಿರುವುದು ಪ್ರತಿಯೊಬ್ಬ ಭಾರತೀಯರ ಹೆಮ್ಮೆಯ ವಿಚಾರ.