02 February 2026 | Join group

8 ವರ್ಷಗಳ ಪ್ರೀತಿ, ಕೊನೆಗೆ ನೇಣಿಗೆ ಶರಣಾಗುವುದರಲ್ಲಿ ಅಂತ್ಯ: ಯುವತಿ ಆಸ್ಪತ್ರೆಗೆ ಸೇರ್ಪಡೆ

  • 07 Jul 2025 07:09:18 PM

ಬಂಟ್ವಾಳ: ಯುವತಿಯೊಬ್ಬಳಿಗೆ ಹಲ್ಲೆ ನಡೆಸಿ ನಂತರ ತಾನು ನೇಣಿಗೆ ಶರಣಾದ ಘಟನೆಯೊಂದು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ.

 

ಕೊಡ್ಮಣು ಗ್ರಾಮದ ಸುಧೀರ್ ಎಂಬ ಹುಡುಗ, ಸುಜೀರಿನ ಯುವತಿಗೆ ಹಲ್ಲೆ ನಡೆಸಿದ್ದ ಎನ್ನಲಾಗಿದ್ದು, ಆಮೇಲೆ ತಾನು ನೇಣು ಬಿಗಿದು ಸಾವನ್ನಪ್ಪಿದ್ದಾನೆ.

 

ಆತನ ಮೃತದೇಹವು ಮನೆಯ ಕೋಣೆಯೊಳಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಗಾಯಗೊಂಡ ಮಹಿಳೆಯನ್ನು ತುಂಬೆ ಆಸ್ಪತ್ರೆಗೆ ಸೇರಿಸಲಾಗಿದೆ.

 

ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಘಟನೆಗೆ ಸ್ಪಷ್ಟ ಕಾರಣ ಇನ್ನಷ್ಟೆ ತಿಳಿಯಬೇಕಾಗಿದೆ.