ಸೆಲ್ಫಿ ತೆಗೆಯುವ ನೆಪದಲ್ಲಿ ಪತಿಯನ್ನೇ ನದಿಗೆ ತಳ್ಳಿದ ಪತ್ನಿ

  • 12 Jul 2025 04:18:39 PM

ರಾಯಚೂರು: ಸೆಲ್ಫಿ ತೆಗೆದುಕೊಳ್ಳುವ ನೆಪದಲ್ಲಿ ಪತ್ನಿ ತನ್ನ ಪತಿಯನ್ನು ನದಿಗೆ ತಳ್ಳಿದ ಘಟನೆ ರಾಯಚೂರು ತಾಲೂಕಿನ ಗುರ್ಜಾಪುರದಲ್ಲಿ ನಡೆದಿದೆ.

 

ಕೃಷ್ಣ ನದಿಯಲ್ಲಿರುವ ಸೇತುವೆಯೊಂದರಲ್ಲಿ ತಾತಪ್ಪ ಎಂಬಾತನನ್ನು ಆತನ ಪತ್ನಿ ಸೆಲ್ಫಿ ತೆಗೆಯಲು ಕರೆದುಕೊಂಡು ಹೋಗಿದ್ದಳು. ಸೆಲ್ಫಿ ತೆಗೆಯುವ ನೆಪದಲ್ಲಿ ಗಂಡನನ್ನು ನದಿಗೆ ತಳ್ಳಿದ್ದಳು.

 

ತಾತಪ್ಪ ಸ್ವಲ್ಪ ದೂರ ಈಜಾಡಿ ಬಂಡೆಯ ಮೇಲೆ ಕುಳಿತು ಬೊಬ್ಬೆ ಹೊಡೆದಿದ್ದಾನೆ. ಸ್ಥಳೀಯರು ರಕ್ಷಣೆಗೆ ಧಾವಿಸಿ ಆತನನ್ನು ಹಗ್ಗವನ್ನು ಎಸೆಯುವುದರ ಮೂಲಕ ರಕ್ಷಿಸಿದ್ದಾರೆ.

 

ಸ್ಥಳೀಯರು ಏನು ಸಂಭವಿಸಿದೆ ಎಂದು ಕೇಳಿದಾಗ, ಪತಿ ಹೇಳಿದ್ದ "ಪತ್ನಿ ನನ್ನನ್ನು ನದಿಗೆ ತಳ್ಳಿದಳು", ಆದರೆ ಪತ್ನಿ ಹೇಳುತ್ತಿದ್ದಳು "ಅವನು ಆಕಸ್ಮಿಕವಾಗಿ ನದಿಗೆ ಬಿದ್ದನು" ಎಂದು.