ಬಂಟ್ವಾಳ, ಕಡೇಶಿವಾಲಯ: ಮಹತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀ ನರಸಿಂಹ ಸ್ವಾಮಿ ದೇವಸ್ಥಾನ, ಕಡೇಶಿವಾಲಯ ಕ್ಷೇತ್ರದಲ್ಲಿ ದಿನಾಂಕ 15 ಜೂನ್ 2025 ರಂದು ಆದಿತ್ಯವಾರ ರಾತ್ರಿ ಗಂಟೆ 6:45 ರಿಂದ 7:00ರ ವರೆಗೆ ದೇವರಿಗೆ 'ವಿಶೇಷ ರಂಗಪೂಜೆ'ಯು ಜರಗಲಿರುವುದು.
ಈ ವರ್ಷದ ನಿತ್ಯ ಬಳಿ ಹಾಗೂ ರಂಗಪೂಜೆಯು 15 ಜೂನ್ ರಂದು ಕೊನೆಗೊಳ್ಳಲಿದೆ. ನಂತರ ದೀಪಾವಳಿ ಸಂದರ್ಭದಲ್ಲಿ ಪುನರಾರಂಭಗೊಳ್ಳಲಿದೆ ಎಂದು ಆಡಳಿತ ಮಂಡಳಿ ತಿಳಿಸಿದೆ.
ಶ್ರೀ ಕ್ಷೇತ್ರದಲ್ಲಿ ನಡೆಯುವ ಈ ವಿಶೇಷ ರಂಗ ಪೂಜೆಯ ರಶೀದಿಯನ್ನು ಪೂಜೆಯ ದಿವಸವೇ ಮಾಡಿಸಬಹುದು ಅಥವಾ ಮುಂಚಿತವಾಗಿ ದೇವಾಲಯದ ಕಾರ್ಯಾಲಯದಲ್ಲಿ ಮಾಡಿಸಬಹುದು ಎಂದು ತಿಳಿಸಲಾಗಿದೆ.
ಎಲ್ಲಾ ಊರ ಮತ್ತು ಪರವೂರ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಶ್ರೀ ಕ್ಷೇತ್ರಕ್ಕೆ ಬಂದು, ವಿಶೇಷ ರಂಗ ಪೂಜೆ ಮಾಡಿಸಿ, ಶ್ರೀ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಿ ಪ್ರಸಾದ ಸ್ವೀಕರಿಸಬೇಕಾಗಿ ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ, ಕಡೇಶಿವಾಲಯ ಇದರ ಆಡಳಿತ ಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರುಗಳು ವಿನಂತಿಸಿಕೊಂಡಿದ್ದಾರೆ.
ಕ್ಷೇತ್ರದ ಬಗ್ಗೆ: ಮಹತೋಭಾರ ಚಿಂತಾಮಣಿ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ, ಕಡೇಶಿವಾಲಯ