19 June 2025 | Join group

ಸೋಮವಾರ ಕಾಸರಗೋಡಿನ ಮಧೂರು ದೇವಸ್ಥಾನ ಮತ್ತೊಮ್ಮೆ ಜಲಾವೃತಗೊಂಡಿದೆ

  • 16 Jun 2025 07:51:50 PM

ಕಾಸರಗೋಡು: ಕೆಲ ದಿನಗಳಿಂದ ವರುಣನ ಅರ್ಭಟ ದಕ್ಷಿಣ ಕನ್ನಡ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಜೋರಾಗಿದೆ. ಭಾನುವಾರ ಸುರಿದ ಮಳೆಯಿಂದ ಜಲಾಶಯಗಳು ತುಂಬಿ ಹರಿಯುತ್ತಿದ್ದು, ತಗ್ಗಿನ ಪ್ರದೇಶಗಳು ಜಲಾವೃತಗೊಂಡಿದೆ.

 

ಅತಿಯಾದ ಮಳೆಗೆ ಮಧೂರು ಮದನಂತೇಶ್ವರ ವಿನಾಯಕ ದೇವಾಲಯ ಸೋಮವಾರ ಮತ್ತೆ ಜಲಾವೃತಗೊಂಡಿದೆ. ಉಪ್ಪಳ ಮತ್ತು ಮಧೂರು ಪ್ರದೇಶಗಳಲ್ಲಿ ನೀರಿನ ಮಟ್ಟ ಅಪಾಯಕಾರಿಯಾಗಿ ಹರಿಯುತ್ತಿದ್ದು, ಶಾಲಾ ಕಾಲೇಜುಗಳಿಗೆ ರಜೆ ಸಾರಲಾಗಿದೆ.

 

ಮಧೂರು ದೇವಸ್ಥಾನ ಈ ವರ್ಷದಲ್ಲಿ ಎರಡನೇ ಬಾರಿಗೆ ಜಲಾವೃತಗೊಂಡಿದೆ. ಕಳೆದ ತಿಂಗಳು ಸುರಿದ ಮಳೆಗೆ ಕೂಡ ವಿನಾಯಕನ ಸಾನಿಧ್ಯ ಜಲಾವೃತಗೊಂಡಿತ್ತು. ಪೂಜೆ ಮತ್ತು ಇನ್ನಿತರ ಸೇವೆಗಳನ್ನು ನೆರವೇರಿಸಿವಂತಿಲ್ಲ.

 

ಕಳೆದ ಏಪ್ರಿಲ್ ತಿಂಗಳಲ್ಲಿ ಮಧೂರು ಮದನಂತೇಶ್ವರ ವಿನಾಯಕ ದೇವಸ್ಥಾನದ ಬ್ರಹ್ಮಕಲಶೋತ್ಸವ ನೆರವೇರಿತ್ತು ಮತ್ತು ಆ ಸಂದರ್ಭದಲ್ಲೂ ಕಾರ್ಯಕ್ರಮ ಕೊನೆಯ ದಿನಗಳಲ್ಲಿ ಗಾಳಿ ಮಳೆ ಬಂದಿರುವುದು ನೆನಪಿಸಬಹುದಾಗಿದೆ.