ತಿರುಪತಿ: ಭಾರತದ ಅತಿ ದೊಡ್ಡ ಶ್ರೀಮಂತ ದೇವಸ್ಥಾನವಾದ ತಿರುಪತಿ ದೇವಸ್ಥಾನ ಲಡ್ಡುವಿನ ಬಗ್ಗೆ ದಿನಾಲೂ ಸುದ್ದಿಯಾಗುತ್ತಿದೆ. ತಿರುಪತಿ ತಿಮ್ಮಪ್ಪನ ಲಡ್ಡು ಪ್ರಸಾದ ಸ್ವೀಕಾರ ಮಾಡದೇ ಹೋದರೆ ತಿರುಪತಿ ದೇವರ ದರ್ಶನ ವ್ಯರ್ಥವಾದಂತೆ.
ಆದರೆ ಕೆಲ ಆನ್ ಲೈನ್ ಪ್ಲಾಟ್ ಫಾರ್ಮ್ ನಲ್ಲಿ ತಿರುಪತಿ ಲಡ್ಡು ದೊರೆಯುತ್ತಿದೆ. ಈ ಆನ್ ಲೈನ್ ಸಂಸ್ಥೆಗಳು ಮತ್ತು ಕೆಲ ಸಿಹಿತಿಂಡಿ ಅಂಗಡಿಗಳಲ್ಲಿ ತಿರುಪತಿ ಲಡ್ಡಿನ ಹೆಸರಿನಲ್ಲಿ ನಕಲಿ ತಿರುಪತಿ ಲಡ್ಡುಗಳನ್ನು ಮಾರಾಟ ಮಾಡಲಾಗುವ ವಿಚಾರ ಬಯಲಾಗಿದೆ.
ಭಕ್ತರನ್ನು ವಂಚಿಸಲು ನಡೆಸುತ್ತಿರುವ ಈ ದಂಧೆ ಬಗ್ಗೆ ತಿರುಪತಿ ಆಡಳಿತ ಸಂಸ್ಥೆ (TTD) ಗೆ ವಿಷಯ ತಿಳಿದಿದ್ದು, ಈಗ ಕಾರ್ಯಪ್ರವೃತ್ತರಾಗಿದ್ದಾರೆ. ದೇವಸ್ಥಾನದ ಪ್ರಸಾದ ಮತ್ತು ಅದರ ಪಾವಿತ್ರ್ಯತೆ ಕಾಪಾಡುವ ನಿಟ್ಟಿನಲ್ಲಿ ತಿರುಪತಿ ಲಡ್ಡುವಿನ ದುರ್ಬಳಕೆ ಮಾಡಿದ PushMyCart ಎನ್ನುವ ಆನ್ ಲೈನ್ ಸಂಸ್ಥೆ ಸೇರಿದಂತೆ ಹಲವಾರು ಕಂಪನಿಗಳಿಗೆ ಕಾನೂನುಬದ್ಧ ನೋಟೀಸ್ ಜಾರಿ ಮಾಡಿದೆ.
ತಿರುಪತಿ ತಿಮ್ಮಪ್ಪನ ಪವಿತ್ರ ಲಡ್ಡುವಿನ ಬಗ್ಗೆ ಈ ಹಿಂದಿನ ಸರಕಾರ ಪ್ರಾಣಿಗಳ ತುಪ್ಪ ಬಳಸಿತ್ತು ಎನ್ನುವ ಪ್ರಕರಣ ಬಹಳ ಸುದ್ದಿ ಮಾಡಿತ್ತು. ಭಕ್ತರು ತಿರುಪತಿ ಲಡ್ಡು ಖರೀದಿಸುವಾಗ ಎಚ್ಚರದಿಂದ ಇರಬೇಕು ಎಂದು ಆಡಳಿತ ಸಂಸ್ಥೆ TTD ತಿಳಿಸದೆ.