ಮಂಗಳೂರು: ನಗರದ ಉರ್ವ ಮಾರುಕಟ್ಟೆ ಬಳಿ ನಿರ್ಮಾಣ ಹಂತದಲ್ಲಿರುವ ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ (MSCL) ಪ್ರಾಯೋಜಕತ್ವದಲ್ಲಿ ಒಳಾಂಗಣ ಕ್ರೀಡಾಂಗಣ(Indoor Stadium) ಇನ್ನು ಕೆಲವೇ ತಿಂಗಳುಗಳಲ್ಲಿ ಸಜ್ಜಾಗಲಿದೆ. ಈ ಅತ್ಯಾಧುನಿಕ ಸೌಲಭ್ಯ ಹೊಂದಿರುವ ಒಳ ಕ್ರೀಡಾಂಗಣ ಬ್ಯಾಡ್ಮಿಂಟನ್ ಮತ್ತು ಕಬಡ್ಡಿ ಎರಡಕ್ಕೂ ರಾಷ್ಟ್ರೀಯ ಮಾನದಂಡಗಳನ್ನು ಪೂರೈಸಲು ವಿನ್ಯಾಸಗೊಳಿಸಲಾಗಿದೆ.
ಮೇ 16 ರಂದು ನಡೆದ ಹೊಸ ಡಿಸಿ ಕಚೇರಿಯ ಉದ್ಘಾಟನಾ ಸಂದರ್ಭದಲ್ಲಿ ಸ್ಪೀಕರ್ ಯು ಟಿ ಖಾದರ್ ಮಾತನಾಡಿ " ದೇಶದಲ್ಲೇ ಮಾದರಿಯಾದ ಅತ್ಯುತ್ತಮವಾದ ಒಳಾಂಗಣ ಕ್ರೀಡಾಂಗಣ(Indoor Stadium) ಮಂಗಳೂರು ನಗರಕ್ಕೆ ಸಿಕ್ಕುವಂತಹ ಅವಕಾಶ ಆಗಿದೆ. ಅದನ್ನು ಶುರು ಮಾಡುವಾಗ ಸ್ಮಾರ್ಟ್ ಸಿಟಿಯ ಮಂತ್ರಿಯಾಗಿ ನಾನೇ ಅದಕ್ಕೆ ಹಣ ಬಿಡುಗಡೆ ಮಾಡಿದ್ದೇನೆ". ಎಂದು ನುಡಿದರು.
ಮುಂದಕ್ಕೆ ಮಾತನಾಡಿ "ಅದಕ್ಕೆ ಹೆಚ್ಚುವರಿ ಅನುದಾನ ಬೇಕೆಂದು ಕೇಳಿದಾಗ ನಗರ ಸಚಿವರಾದ ದಿನೇಶ್ ಗುಂಡೂರಾವ್ ಹೆಚ್ಚುವರಿ ಹಣ ಬಿಡುಗಡೆ ಮಾಡಿ, ಈ ಯೋಜನೆಯನ್ನು ಪೂರ್ಣಗೊಳಿಸಲು ನಮ್ಮ ಸಂಪೂರ್ಣ ಸಹಕಾರವಿದೆ ಎಂಬ ಭರವಸೆ ಕೊಟ್ಟರು. ಕಬ್ಬಡ್ಡಿ ಮತ್ತು ಶೆಟಲ್ ಬ್ಯಾಡ್ಮಿಂಟನ್ ನ ರಾಷ್ಟ್ರೀಯ ಮಟ್ಟದ ಕ್ರೀಡಾಂಗಣ (National Level Stadium) ಮಂಗಳೂರಿನಲ್ಲಿ ಮಾಡುವ ಮುಖಾಂತರ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟ ಮುಂದಿನ ದಿನಗಳಲ್ಲಿ ಆಗಲು ದೊಡ್ಡ ಮಟ್ಟದ ಅವಕಾಶ ಸಿಗುತ್ತದೆ ಎಂದು ಹೇಳಲು ಇಚ್ಚಿಸುತ್ತೇನೆ" ಎಂದು ತನ್ನ ಆಶಯ ವ್ಯಕ್ತಪಡಿಸಿದ್ದಾರೆ.