ಈ ಬಾರಿಯ ಐಪಿಎಲ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, 2025 ಐಪಿಎಲ್ ಕಪ್ ಎತ್ತುವ ಕನಸು ಕಾಣುತ್ತಿದೆ. ಈಗಾಗಲೇ 2 ನೇ ಕ್ರಮಾಂಕದಲ್ಲಿರುವ ಆರ್ ಸಿ ಬಿ ಇನ್ನು 2 ನಿರ್ಣಾಯಕ ಪಂದ್ಯಗಳನ್ನು ಆಡಲಿದೆ.
ಮೇ 23 ರಂದು ಶುಕ್ರವಾರ ಬೆಂಗಳೂರಿನಲ್ಲಿ ನಡೆಯಬೇಕಾದ ಪಂದ್ಯ ಈಗ ಬೇರೆ ಗ್ರೌಂಡ್ ಗೆ ಸ್ಥಳಾಂತರಿಸಿದ್ದು ಆರ್ ಸಿ ಬಿ(RCB) ಗೆ ಫ್ಯಾನ್ಸ್ ಗೆ ನಿರಾಸೆಯನ್ನು ತಂದಿದೆ. ಕಳೆದ ರವಿವಾರ ನಡೆದಿದ್ದ ಕೊಲ್ಕತ್ತಾ ನೈಟ್ ರೈಡರ್ಸ್(KKR) ಜೊತೆಗಿನ ಪಂದ್ಯ ಮಳೆಯ ಕಾರಣದಿಂದ ಡ್ರಾ ಆಗಿದ್ದರ ಪರಿಣಾಮ ಬೆಂಗಳೂರು ರಾಯಲ್ಸ್ ಅಭಿಮಾನಿಗಳು ಬೇಸರಗೊಂಡಿದ್ದರು.
ಆದರೆ ಇದೀಗ ಬೆಂಗಳೂರಿನಲ್ಲಿ ಮಳೆಯ ಆರ್ಭಟ ಜಾಸ್ತಿ ಇರುವುದರಿಂದ ಮುಂದಿನ ಸನ್ ರಿಸೆರ್ಸ್ ಹೈದರಾಬಾದ್ (SRH) ಜೊತೆ ಆಡಬೇಕಾಗಿದ್ದ ಪಂದ್ಯವನ್ನು ಲಕ್ನೋ ಗೆ ಸ್ಥಳಾಂತರ ಮಾಡಲಾಗಿದೆ. ಹೈದರಾಬಾದ್ ತಂಡ ಈಗಾಗಲೇ ಲಕ್ನೋದಲ್ಲಿ ಬೀಡುಬಿಟ್ಟಿದ್ದು ಬೆಂಗಳೂರಿನಲ್ಲಿ ಭಾರೀ ಮಳೆ ಸುರಿಯುವುದರಿಂದ ಬಿಸಿಸಿಐ ಅವರಿಗೆ ಅಲ್ಲೇ ಉಳಿಯುವಂತೆ ಸೂಚಿಸಿದ್ದಾರೆ. ಹೀಗಾಗಿ ಬೆಂಗಳೂರು ಮೈದಾನಕ್ಕೆ ಹೋಗಿ ಪಂದ್ಯ ನೋಡಬೇಕೆನ್ನುವವರಿಗೆ ಮತ್ತು ತಮ್ಮ ಹೋಂ ಗ್ರೌಂಡ್ ನಲ್ಲಿ ಆರ್ ಸಿ ಬಿ ಪಂದ್ಯ ನೋಡಲು ರೋಮಾಂಚನ ಎನ್ನುವ ಅಭಿಮಾನಿಗಳಿಗೆ ನೀರಾಸೆಯಾಗಿದೆ.