2011 ರಲ್ಲಿ ಧೋನಿ ನಾಯಕತ್ವದಲ್ಲಿ ಭಾರತಕ್ಕೆ 2ನೇ ವಿಶ್ವಕಪ್ ಒಲಿದಿತ್ತು. 1983 ರಲ್ಲಿ ಕಪಿಲ್ ದೇವ್ ನೇತೃತ್ವದಲ್ಲಿ ವಿಶ್ವಕಪ್ ದೊರೆತ ನಂತರ ಭಾರತ 28 ವರ್ಷಗಳ ನಂತರ ಏಕದಿನ ಪಂದ್ಯದ ವಿಶ್ವಕಪ್ ಪಡೆದಿತ್ತು.
ಸಮೀಕ್ಷೆ ಪ್ರಕಾರ, 2011 ರ ವಿಶ್ವಕಪ್ ವಿಜೇತ ಭಾರತ ತಂಡದಲ್ಲಿದ್ದ 14 ಆಟಗಾರರು ಎಲ್ಲಾ ರೀತಿಯ ಕ್ರಿಕೆಟ್ ನಿಂದ ನಿವೃತ್ತರಾಗಿದ್ದಾರೆ. ಸದ್ಯಕ್ಕೆ ವಿರಾಟ್ ಕೊಹ್ಲಿ ಮಾತ್ರ ಭಾರತ ಏಕದಿನ ಪಂದ್ಯದ ಟೀಮ್ ನಲ್ಲಿದ್ದಾರೆ.
ಕೊಹ್ಲಿ ಈಗಾಗಲೇ ಟೀ20 ಮತ್ತು ಟೆಸ್ಟ್ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿಯಾಗಿದೆ. ಟೆಸ್ಟ್ ಕ್ರಿಕೆಟ್ ಕಳೆದ ತಿಂಗಳಷ್ಟೇ ನಿವೃತ್ತಿ ಘೋಷಿಸಿದ್ದರು. ಕಳೆದ ವಾರ ಪಿಯೂಷ್ ಚಾವ್ಲಾ ಕೂಡ ಎಲ್ಲಾ ಸ್ವರೂಪದ ಕ್ರಿಕೆಟ್ ಗೆ ವಿದಾಯ ಹೇಳಿದ್ದಾರೆ.
ಧೋನಿ ನೇತೃತ್ವದ 2011 ರ ತಂಡದಲ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ಗೌತಮ್ ಗಂಭೀರ್, ಜಹೀರ್ ಖಾನ್ ರಂತಹ ದಿಗ್ಗಜ ಆಟಗಾರರು ಒಳಗೊಂಡಿದ್ದರು.