ಕನ್ನಡ ಸಿನಿಮಾ ರಂಗದ ಹಿರಿಯ ನಟ ಅನಂತ್ ನಾಗ್ ಅವರಿಗೆ ದೇಶದ ಅತ್ಯುನ್ನತ್ತ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಭೂಷಣ ಪ್ರಶಸ್ತಿಯನ್ನು ರಾಷ್ಟ್ರಪ್ರತಿ ದ್ರೌಪದಿ ಮುರ್ಮು ಅವರು ಪ್ರದಾನ ಮಾಡಿದ್ದಾರೆ. ಮೇ 27 ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ದೇಶದ ಮೂರನೇ ನಾಗರೀಕ ಅತ್ಯುನ್ನತ್ತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕನ್ನಡ ಮತ್ತು ಇನ್ನಿತರ ಭಾಷೆಗಳ ಸಿನಿಮಾ ಜಗತ್ತಿನಲ್ಲಿ ಅನಂತ್ ನಾಗ್ ಅವರ ಅಪಾರ ಕೊಡುಗೆಯನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ. ಅನಂತ್ ನಾಗ್ ಮೂಲತಃ ಉತ್ತರ ಕನ್ನಡದ ಜಿಲ್ಲೆಯ ಸಿರಳ್ಳಿ ಗ್ರಾಮದಲ್ಲಿ 1948 ರ ಸೆಪ್ಟೆಂಬರ್ 4 ರಂದು ಜನಿಸಿದ್ದರು. 1973 ರಲ್ಲಿ ಸಂಕಲ್ಪ ಸಿನಿಮಾದ ಮೂಲಕ ಸ್ಯಾಂಡಲ್ ವುಡ್ ಚಿತ್ರ ಜಗತ್ತಿಗೆ ಕಾಲಿಟ್ಟಿದ್ದರು.
ಸರಿಸುಮಾರು 300 ಸಿನಿಮಾಗಳಲ್ಲಿ ನಟಿಸಿರುವ ಅನಂತ್ ನಾಗ್, 250 ಕನ್ನಡ ಸಿನಿಮಾ ಮತ್ತು ಉಳಿದವುಗಳೆಲ್ಲಾ ಹಿಂದಿ, ತಮಿಳ್, ತೆಲುಗು, ಮರಾಠಿ, ಇಂಗ್ಲಿಷ್, ಮಲಯಾಳಂ ಭಾಷೆಗಳಲ್ಲಾಗಿದೆ. ಹಾಗೆ ಹಲವಾರು ಸಿನಿಮಾಗಳಿಗೆ ಪ್ರಶಸ್ತಿ ಪಡೆದ ಹಿರಿಮೆ ಅನಂತ್ ನಾಗ್ ರವರಿಗೆ ಸಂದಿದೆ. ಇದೀಗ ದೇಶದ ಮೂರನೇ ಅತ್ಯುನ್ನತ ನಾಗರೀಕ ಪ್ರಶಸ್ತಿ ಪಡೆದಿರುವುದು ಇಡೀ ಕನ್ನಡ ಸಿನಿಮಾರಂಗಕ್ಕೆ ಹಿರಿಮೆ ತಂದಿದೆ.
ಈ ಮೊದಲು ತನಗೆ ಪ್ರಶಸ್ತಿ ಘೋಷಣೆಯಾಗಿರುವದನ್ನು ತಿಳಿದ ಅನಂತ್ ನಾಗ್, ನನಗೆ ಸಿಗುವ ಪ್ರಶಸ್ತಿ ಕನ್ನಡ ಸಿನಿಮಾ ರಂಗಕ್ಕೆ ಮತ್ತು ಕನ್ನಡ ಸಿನಿಮಾ ಪ್ರೇಕ್ಷಕರಿಗೆ ಸಂದಾಯವಾದದ್ದು ಎಂದು ಹೇಳಿರುವುದನ್ನು ಇಲ್ಲಿ ಸ್ಮರಿಸಬಹುದಾಗಿದೆ.
ಇದನ್ನೂ ಓದಿ: ಅಬ್ಬರಿಸಿದ ಜಿತೇಶ್ ಶರ್ಮಾ : ರೋಚಕ ಪಂದ್ಯದಲ್ಲಿ ಲಕ್ನೋ ವಿರುದ್ಧ ಬೆಂಗಳೂರಿಗೆ ಭರ್ಜರಿ ಜಯ : ಕ್ವಾರ್ಟರ್ ಫೈನಲ್ ಗೆ ಲಗ್ಗೆ