ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಬಂಧಿತನಾಗಿದ್ದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಿಂದ ಪ್ರಚಾರದಲ್ಲಿದ್ದ ನಟ ಮಡೆನೂರು ಮನುಗೆ ಕೋರ್ಟ್ ರಿಲೀಫ್ ನೀಡಿದೆ.
ತಮ್ಮ ಮೇಲೆ ಹಲವಾರು ಬಾರಿ ಲೆಂಗಿಕ ದೌರ್ಜನ್ಯ ನಡೆಸಿದ್ದಾರೆ ಮತ್ತು ಜೀವ ಬೆದರಿಕೆ ಹಾಕಿದ್ದಾರೆ ಎಂದು ನಟನ ಜೊತೆ ಈ ಹಿಂದೆ ನಟಿಸಿದ್ದ ಸಹನಟಿಯೊಬ್ಬಳು ದೂರು ನೀಡಿದ್ದಳು. ಆ ಹಿನ್ನಲೆಯಲ್ಲಿ ಮಡೆನೂರು ಮನುವನ್ನು ಪೊಲೀಸರು ಮೇ 22 ರಂದು ಬಂಧಿಸಿದ್ದರು.
ನ್ಯಾಯಾಂಗ ಬಂಧನದಲ್ಲಿದ್ದ ನಟನಿಗೆ ಕೋರ್ಟುನಿಂದ ಸದ್ಯ ಜಾಮೀನು ನೀಡಲಾಗಿದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಬಂಧಿತನಾಗಿದ್ದು ಎಂದು ಹೊರಬರುವ ಸಾಧ್ಯತೆ ಇದೆ.
ಈ ಪ್ರಕರಣದ ಬಗ್ಗೆ ತಿಳಿಯಲು ಇಲ್ಲಿ ಓದಿ : ಕಾಮಿಡಿ ಕಿಲಾಡಿ ನಟ ಮಡೆನೂರು ಮನು ಅತ್ಯಾಚಾರ ಆರೋಪದಡಿ ಬಂಧನ