Bantwal : ಮಂಗಳೂರು - ಬೆಂಗಳೂರು ರಾಷ್ಟ್ರೀಯ ಹೆದ್ದಾರಿ NH - 75 ರ ಪೆರಿಯಶಾಂತಿಯಿಂದ ಬಿ ಸಿ ರೋಡ್ ವರೆಗಿನ ಕಾಮಗಾರಿಯನ್ನು ಮಳೆಗಾಲದ ಮುನ್ನವೇ ಪೂರ್ಣಗೊಳುಸುವ ಭರವಸೆಯನ್ನು ಕೆ ಏನ್ ಆರ್ ಕನ್ಸ್ಟ್ರಕ್ಷನ್ ಸಂಸ್ಥೆ ( KNR Construction ) ನೀಡಿದೆ. 48 ಕಿಲೋಮೀಟರು ವ್ಯಾಪ್ತಿಯ ಈ ಚತುಷ್ಪತ ರಸ್ತೆ ಕೊನೆಯ ಹಂತಕ್ಕೆ ತಲುಪುತ್ತಿರುವುದು ಪ್ರಯಾಣಿಕರಿಗೆ ಮತ್ತು ವಾಹನ ಚಾಲಕರಿಗೆ ತುಂಬಾ ಸಂತಸ ತಂದಿದೆ.
ಇದರಲ್ಲೂ, ತುಂಬಾ ಸಂತಸದ ವಿಷೆಯವೇನೆಂದರೆ 2 .1 ಕಿ.ಮೀ ಕಲ್ಲಡ್ಕ ಮೇಲ್ಸೇತುವೆಯನ್ನು ಏಪ್ರಿಲ್ ವೇಳೆಗೆ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ KNR ಕನ್ಸ್ಟ್ರಕ್ಷನ್ ತಿಳಿಸಿದ್ದು, ಕಲ್ಲಡ್ಕ ಭಾಗದ ಜನ ವಿಶೇಷವಾಗಿ ಅಲ್ಲಿನ ಸುತ್ತಮುತ್ತಲಿನ ಅಂಗಡಿ ಮಾಲಕರು, ಆಟೋ ಚಾಲಕರು ಮತ್ತು ದಿನಗೂಲಿ ಕೆಲಸಕ್ಕೆ ಹೋಗುವವರು ಖುಷಿಯಿಂದ ಬೀಗುವಂತಾಗಿದೆ. ಇಷ್ಟು ವರುಷಗಳ ಕಾಲ ಬೇಸಿಗೆ ಕಾಲದಲ್ಲಿ ಧೂಳು ಮತ್ತು ಮಳೆಗಾಲದಲ್ಲಿ ಹೊಂಡ, ಕೆಸರಿನಿಂದಾಗಿ ಅವರು ಪಟ್ಟ ಕಷ್ಟ ಬಹಳಷ್ಟು.
ಕಲ್ಲಡ್ಕ ಫ್ಲೈ ಓವರ್ ದೇಶದ ಅತಿ ದೊಡ್ಡ ಫ್ಲೈ ಓವರ್ ಗಳಲ್ಲಿ ಒಂದಾಗಿದ್ದು, 2 .1 ಕಿ.ಮೀ ಉದ್ದವಿದೆ. ನರಹರಿ ಪರ್ವತ ಹತ್ತಿರ ಬೋಳಂಗಡಿಯಲ್ಲಿ ಶುರು ಆಗಿರುವ ಈ ಮೇಲ್ಸೇತುವೆ, ಕುದ್ರಬೆಟ್ಟು ವರೆಗೆ ಇದೆ. ಪೆರಿಯಶಾಂತಿ ಯಿಂದ ಬಿ ಸಿ ರೋಡ್ ವರೆಗಿನ ಪ್ರಾಜೆಕ್ಟ್ ಅಂದಾಜು 1,100 ಕೋಟಿ ವೆಚ್ಚದಲ್ಲಿ ಕೆ ಏನ್ ಆರ್ ಕನ್ಸ್ಟ್ರಕ್ಷನ್ ಕಂಪನಿಗೆ ನೀಡಲಾಗಿತ್ತು. ಸತತ ಮಳೆಯ ಕಾರಣದಿಂದ ಕಾಮಗಾರಿ ವಿಳಂಬವಾಗಿತ್ತು.
ಇತ್ತೀಚಿಗೆ, ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಅಧಿಕಾರಿಗಳ ಜೊತೆ ಚತುಷ್ಪಥ ಕಾಮಗಾರಿಯ ಪರಿಶೀಲನೆ ನಡೆಸಿ " ಬಿ ಸಿ ರೋಡ್ ನಿಂದ ಪೆರಿಯಶಾಂತಿ ತನಕ ನಡೆಯುತ್ತಿರುವ ಹೆದ್ದಾರಿ ಚತುಷ್ಪಥ ಕಾಮಗಾರಿಗೆ ಹೆಚ್ಚಿನ ವೇಗ ನೀಡಿದ್ದು, ಮಳೆಗಾಲ ಆರಂಭಕ್ಕೆ ಮುನ್ನ ಮೇ ಅಂತ್ಯಕ್ಕೆ ಸಂಚಾರ ಯೋಗ್ಯ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದೆ " ಎಂಬ ಭರವಸೆಯ ಮಾತನ್ನು ಸುದ್ದಿಗಾರರ ಜತೆ ಮಾತನಾಡಿ ತಿಳಿಸಿದರು.
ಯಾವಾಗ ಈ ಕಾಮಗಾರಿ ಸಂಪೂರ್ಣಗೊಳ್ಳಲಿದೆ ?
ಬಿ ಸಿ ರೋಡ್ ನಾರಾಯಣ ಗುರು ವೃತ್ತದ ಕಾಮಗಾರಿ ಫೆಬ್ರವರಿ ಅಂತ್ಯಕ್ಕೆ ಕೈಗೆತ್ತಿಕೊಂಡು ಮೇ ತಿಂಗಳಲ್ಲಿ ಮುಗಿಸಲಾಗುಹುದು.
ಪಾಣೆಮಂಗಳೂರು ಮತ್ತು ಮೆಲ್ಕಾರ್ ಸೇತುವೆ ಕಾಮಗಾರಿ ಫೆಬ್ರವರಿಯಲ್ಲಿ ಮುಗಿಯಲಿದೆ.
ಕಲ್ಲಡ್ಕ ಮೇಲ್ಸೇತುವೆ ಮೇ ತಿಂಗಳಲ್ಲಿ ಮುಗಿಸಲಿದ್ದಾರೆ. ಕಲ್ಲಡ್ಕ ಫ್ಲೈ ಓವರ್ ಕೆಳಗಿನ ಸರ್ವಿಸ್ ರೋಡ್ ಮಾರ್ಚ್ 15 ಕ್ಕೆ ಸಂಚಾರಕ್ಕೆ ಅನುವು ಮಾಡಿಕೊಡಲಾಗುಹುದು.
ಮಾಣಿ ಮೇಲ್ಸೇತುವೆ ಮತ್ತು ಉಪ್ಪಿನಂಗಡಿ ಮೇ ತಿಂಗಳಿಗೆ ಮುಗಿಯಲಿದೆ. ಒಟ್ಟು 48 ಕಿ. ಮೀ ಉದ್ದದ ಹೆದ್ದಾರಿಯಲ್ಲಿ ಮಧ್ಯೆ ಕೆಲವಡೆ ಬಿಟ್ಟರೆ, ಸರಿಸುಮಾರು 35 ಕಿ.ಮೀ ಪೂರ್ಣಗೊಂಡಿರುತ್ತದೆ. ಮಾರ್ಚ್ ತಿಂಗಳ ಅಂತ್ಯದಲ್ಲಿ ದ್ವಿಪಥ ಪೂರ್ಣಗೊಳ್ಳಲಿದೆ.
ನರಹರಿ ಪರ್ವತ, ಪೆರ್ನೆ ಮತ್ತು ನೀರಕಟ್ಟೆಯಲ್ಲಿ ಬ್ರಹತ್ತಾಕಾರದ ಬಂಡೆಗಳು ಇರುವುದರಿಂದ ಅದನ್ನು ಸ್ಫೋಟಗೊಳಿಸುವ ಪ್ರಕ್ರಿಯೆ ನಿರಂತರ ನಡೆಯುತ್ತಲೇ ಇದೆ. ಬಂಡೆಯ ಗಾತ್ರ ಬಹಳ ದೊಡ್ಡದಾಗಿರುವುದರಿಂದ ಈ ಸ್ಥಳಗಳಲ್ಲಿ ಕಾಮಗಾರಿ ಕೆಲಸ ಸಂಪೂರ್ಣವಾಗಿ ಮುಗಿಸಲು ಕಷ್ಟವಾಗಲಿದೆ. ಆದರೆ ಈ ಸ್ಥಳಗಳನ್ನು ಬಿಟ್ಟು ಉಳಿದ ಎಲ್ಲಾ ಕಡೆ ಮೇ ಅಂತ್ಯಕ್ಕೆ ಕಾಮಗಾರಿ ಮುಗಿಯಲಿದೆ.
ಈ ಎಲ್ಲಾ ವಿಚಾರಗಳನ್ನು ಸಂಸದ ಬ್ರಿಜೇಶ್ ಚೌಟರವರು ಸುದ್ದಿಗೋಷ್ಠಿ ನಡೆಸಿ ತಿಳಿಸಿದರು. ಎಲ್ಲಾ ಕಾಮಗಾರಿಗಳು ಸಂಪೂರ್ಣಗೊಂಡ ಬಳಿಕ ಈ ಮಾರ್ಗದ ಪ್ರಯಾಣದ ಸಮಯ ಬಹಳಷ್ಟು ಕಡಿಮೆಯಾಗಲಿದ್ದು ಮಂಗಳೂರು - ಬೆಂಗಳೂರಿಗೆ ಪ್ರಯಾಣಿಸುವ ಪ್ರಯಾಣಿಕರಿಗೆ ತುಂಬಾ ಉಪಕಾರಿಯಾಗಲಿದೆ.
ಇಂದು ದಿನಾಂಕ 01-06-2025 ರಂದು ಮಧ್ಯಾಹ್ನ 13:20 ಗಂಟೆಯ ಸುಮಾರಿಗೆ #ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯ #ಗಂಗಾವಳಿ ನದಿ ಸೇತುವೆ ಕಟ್ಟೆಯ ಮೇಲೆ ಪ್ರವಾಸಿ ದಂಪತಿಗಳಿಬ್ಬರು ತಮ್ಮ ಪುಟ್ಟ ಮಗುವನ್ನು ಅಪಾಯಕಾರಿ ಸ್ಥಿತಿಯಲ್ಲಿ ನಿಲ್ಲಿಸಿಕೊಂಡಿದ್ದನ್ನು ಗೋಕರ್ಣ ಠಾಣೆಯ ಪೊಲೀಸರು ಸಿಸಿ ಕ್ಯಾಮರಾಗಳಲ್ಲಿ ಗಮನಿಸಿ, ತಕ್ಷಣ ಪ್ರವಾಸಿ ದಂಪತಿಗಳಿಗೆ… pic.twitter.com/CKD2wW4azf
— SP Karwar (@spkarwar) June 1, 2025