ಮಂಗಳೂರು, ದೇರಳಕಟ್ಟೆ : ಮಂಗಳೂರಿನ ದೇರಳಕಟ್ಟೆ ಜಂಕ್ಷನ್ನಲ್ಲಿರುವ ಎಚ್ಎಂ ಟಿಂಬರ್ಸ್ ಒಡೆತನದ ವಾಣಿಜ್ಯ ಕಟ್ಟಡದ ಮೇಲಿನ ಮಹಡಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮುತ್ತೂಟ್ ಫೈನಾನ್ಸ್ ಶಾಖೆಯನ್ನು ದರೋಡೆ ಮಾಡಲು ಕೇರಳದ ಮೂವರು ಅಪರಾಧಿಗಳು ಯತ್ನಿಸಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಶನಿವಾರ ತಡರಾತ್ರಿ ದರೋಡೆಗೆ ಯತ್ನಿಸಿದ ಘಟನೆ ನಡೆದಿದೆ.
ಸರಿಯಾದ ಭದ್ರತಾ ಉಪಕರಣಗಳನ್ನು ಹೊಂದಿದ್ದ ಬ್ಯಾಂಕ್, ಕಳ್ಳರು ಬೀಗಗಳನ್ನು ಒಡೆಯುತ್ತಿದ್ದಂತೆ, ಹಣಕಾಸು ಕಂಪನಿಯ ಸೈರನ್ ಮೊಳಗಿದೆ. ಆ ಕೂಡಲೇ ಮುತ್ತೂಟ್ ಫೈನಾನ್ಸ್ ನ ಹಿರಿಯ ಅಧಿಕಾರಿಗಳು ಪೊಲೀಸರಿಗೆ ಕರೆ ಮಾಡಿ ಮಾಹಿತಿ ಕೊಟ್ಟರು. ತಕ್ಷಣವೇ ಕೊಣಾಜೆ ಪೊಲೀಸರು ಸ್ಥಳಕ್ಕೆ ಧಾವಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದರು.
ಸೈರನ್ ಮೊಳಗುವ ಹೊತ್ತಿಗೆ, ಸ್ಥಳೀಯ ನಿವಾಸಿಗಳು ಆವರಣದ ಬಳಿ ಜಮಾಯಿಸಿದರು ಇದರಿಂದ ದರೋಡೆಕೋರರಿಗೆ ತಕ್ಷಣ ಪಲಾಯನ ಮಾಡಲು ಕಷ್ಟವಾಯಿತು. ಕಾಸರಗೋಡಿನ ಹರ್ಷದ್ ಮತ್ತು ಕಾಞಂಗಾಡ್ನ ಮುರಳಿ ಎಂದು ಗುರುತಿಸಲಾದ ಇಬ್ಬರು ಆರೋಪಿಗಳನ್ನು ಮೊದಲು ಕಟ್ಟಡದೊಳಗೆ ಬಂಧಿಸಿ ನಂತರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ ಎಂದು ವರದಿಯಾಗಿದೆ.
ಆದಾಗ್ಯೂ, ಮೂರನೇ ಆರೋಪಿ ಕಾಸರಗೋಡಿನ ಅಬ್ದುಲ್ ಲತೀಫ್ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾನೆ. ಅಪರಾಧಕ್ಕೆ ಬಳಸಿದ ಡ್ರಿಲ್ಲಿಂಗ್ ಯಂತ್ರವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಮುತ್ತೂಟ್ ಫೈನಾನ್ಸ್ ಶಾಖೆಯಲ್ಲಿ ಅಳವಡಿಸಲಾದ ಸುಧಾರಿತ ಭದ್ರತಾ ವ್ಯವಸ್ಥೆಯಿಂದಾಗಿ, ದರೋಡೆ ಯತ್ನವನ್ನು ಮೊಟಕುಗೊಳಿಸಲು ಸಾಧ್ಯವಾಗಿದೆ.
ಕೊಣಾಜೆ ಠಾಣೆಯ ಪೊಲೀಸ್ ಅಧಿಕಾರಿಗಳು ಮತ್ತು ತಂಡ ಅಪರಾಧ ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದೆ. ತಪ್ಪಿಸಿಕೊಂಡ ಮೂರನೇ ಕಳ್ಳನನ್ನು ಪತ್ತೆಹಚ್ಚಲು ಪೊಲೀಸರು ಕಾರ್ಯಗತರಾದಿದ್ದರೆ.