21 June 2025 | Join group

ಸಂದೀಪ್ 26/11 ರ ಬಲಿಪಶುವಲ್ಲ. ಅವರು ತಮ್ಮ ಕರ್ತವ್ಯ ಮಾಡಿದ್ದಾರೆ, ದಾಳಿಯಲ್ಲಿ ಪ್ರಾಣ ಕಳೆದುಕೊಂಡವರು ಬಲಿಪಶುಗಳು : ಉನ್ನಿಕೃಷ್ಣನ್, ಮೇಜರ್ ಸಂದೀಪ್ ತಂದೆಯ ಮಾತು

  • 10 Apr 2025 04:20:10 PM

"ಸಂದೀಪ್ 26/11 ರ ಬಲಿಪಶುವಲ್ಲ. ಅವರು ಅಲ್ಲಿಗೆ ಹೋದ ಭದ್ರತಾ ಸಿಬ್ಬಂದಿ. ಅವರು ಭಾರತೀಯ ಜನರ ರಕ್ಷಕರಾಗಿದ್ದರು. ದಾಳಿಯಲ್ಲಿ ಯಾರು ಪ್ರಾಣ ಕಳೆದುಕೊಂಡರು, ಅವರು ನಿಜವಾದ ಬಲಿಪಶುಗಳು. ಸಂದೀಪ್ ತಮ್ಮ ಕರ್ತವ್ಯವನ್ನು ಮಾಡಿದ್ದರಿಂದ ಬಲಿಪಶುವಾಗಿರಲಿಲ್ಲ. ಅವರು ಇದನ್ನು ಮುಂಬೈನಲ್ಲಿ ಮಾಡದಿದ್ದರೆ, ಅದನ್ನು ಬೇರೆ ಕಡೆ ಮಾಡುತ್ತಿದ್ದರು. ತಮ್ಮ ಕರ್ತವ್ಯವನ್ನು ಮಾಡುದ್ದಾರೆ" ಎಂದು ಸಂದೀಪ್ ರವರ ತಂದೆ ಉನ್ನಿಕೃಷ್ಣನ್ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ದೂರವಾಣಿಯಲ್ಲಿ ಮಾತನಾಡುತ್ತಾ ಹೇಳಿದರು ಎಂದು ಇಂಡಿಯಾ ಟಿವಿಯಲ್ಲಿ ವರದಿಯಾಗಿದೆ.

 

ಮೇಜರ್ ಸಂದೀಪ್ ಅವರ ತಂದೆ ತಮ್ಮ ಮಗನನ್ನು 26/11 ದಾಳಿಯ ಬಲಿಪಶುವಾಗಿ ನೋಡಬಾರದು, ಬದಲಾಗಿ ಭಯೋತ್ಪಾದಕ ದಾಳಿಯ ಸಮಯದಲ್ಲಿ ತನ್ನ ಕರ್ತವ್ಯವನ್ನು ನಿರ್ವಹಿಸುತ್ತಿದ್ದ ಸಮರ್ಪಿತ ಭದ್ರತಾ ಸಿಬ್ಬಂದಿಯಾಗಿ ನೋಡಬೇಕು ಎಂದು ಒತ್ತಿ ಹೇಳಿದರು.

 

ಅಮೆರಿಕದ ಒಪ್ಪಿಗೆಯ ನಂತರ ತಹವ್ವೂರ್ ರಾಣಾ ನನ್ನು ಭಾರತಕ್ಕೆ ಕರೆತರುವ ಬಗ್ಗೆ ಮಾತುಕತೆ ನಡೆದಿತ್ತು, ಆತ ಕೇವಲ ಒಂದು ಕೊಂಡಿ. ಇದು ಭಾರತ ಬಹಳ ಸಮಯದ ನಂತರ ಗಳಿಸಿದ ರಾಜತಾಂತ್ರಿಕ ಯಶಸ್ಸು. ಇದು ಅಂತಿಮವಲ್ಲ ಅಥವಾ ದೊಡ್ಡ ಸಾಧನೆಯಲ್ಲ; ನಾವು ಸಾಧಿಸಬೇಕಾದ ಹಲವು ವಿಚಾರಗಳಿವೆ. ಡೇವಿಡ್ ಕೋಲ್ಮನ್ ಹೆಡ್ಲಿ ಭಾರತದಲ್ಲಿದ್ದಾಗ ತಹವ್ವೂರ್ ರಾಣಾ 231 ಕರೆಗಳನ್ನು ಮಾಡಿದರು. ಎಲ್ಲಾ ಪುರಾವೆಗಳು ಇಲ್ಲಿವೆ. ರಾಣಾ ಒಬ್ಬ ಕಲಿತ ವ್ಯಕ್ತಿ, ಎಲ್ಲವನ್ನೂ ಒಬ್ಬಂಟಿಯಾಗಿ ನಿಭಾಯಿಸಬಲ್ಲ. ಇದರಿಂದ ಏನಾಗುತ್ತದೆ ಎಂದು ನೋಡೋಣ," ಎಂದು ಮೇಜರ್ ಅವರ ತಂದೆ ಕೆ ಉನ್ನಿಕೃಷ್ಣನ್ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ದೂರವಾಣಿಯಲ್ಲಿ ಮಾತನಾಡುತ್ತಾ ಹೇಳಿದರು ಎಂದು ವರದಿಯಾಗಿದೆ.

 

ಅಮೆರಿಕಾದ ಸ್ಪೆಷಲ್ ಕೋರ್ಟ್ ತಹವ್ವೂರ್ ರಾಣಾನನ್ನು ಭಾರತಕ್ಕೆ ಕರೆದುಕೊಂಡು ಹೋಗಲು ಅನುಮತಿ ನೀಡಿದೆ. ಅದರ ಪ್ರಕಾರ ಭಾರತದ ಅಧಿಕಾರಿಗಳು ಈಗಾಗಲೇ ತಹವ್ವೂರ್ ರಾಣಾನನ್ನು ಕರೆದುಕೊಂಡು ಬರುವ ಸಿದ್ಧತೆ ನಡಿಸಿದ್ದು, ಇಂದು ಸಂಜೆಯ ಒಳಗೆ ( ಏಪ್ರಿಲ್ 10,2025) ಆತ ದೆಹಲಿ ತಲುಪನಿದ್ದಾನೆ ಮತ್ತು ಮುಂದಿನ ತನಿಖೆ ನಡೆಯಲಿದೆ.