ದಕ್ಷಿಣ ಕನ್ನಡ, ಉರಿ ಬಿಸಿಲು : ಕರ್ನಾಟಕದ ಜನ ಈಗಾಗಲೇ ಬಿಸಿಲ ತಾಪದಿಂದ ತತ್ತರಿಸುತ್ತಿದ್ದಾರೆ. ಈ ವರ್ಷ ಕಳೆದ ವರ್ಷಕ್ಕಿಂತ ಜಾಸ್ತಿ ಬಿಸಿಲು ಬರುವ ಬಗ್ಗೆ ಹವಾಮಾನ ತಜ್ಞರು ಈಗಾಗಲೇ ಭವಿಷ್ಯ ನುಡಿದಿದ್ದಾರೆ. ಗರಿಷ್ಠ ತಾಪಮಾನ ಕರಾವಳಿ ಮತ್ತು ಉತ್ತರ ಕರ್ನಾಟಕ ಭಾಗದಲ್ಲಿ 45 ಡಿಗ್ರಿ ಯಿಂದ ಗರಿಷ್ಠ 50 ಡಿಗ್ರಿ ವರೆಗೂ ಹೋಗಬಹುದು ಎನ್ನಲಾಗಿದೆ. ಅದರಲ್ಲೂ ಕೆಲವು ಜಿಲ್ಲೆಗಳಲ್ಲಿ ಶಾಖದ ಅಲೆಗಳು ಬರಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಬೇಸಿಗೆ ಅಧಿಕೃತವಾಗಿ ಮಾರ್ಚ್ ತಿಂಗಳಲ್ಲಿ ಶುರುವಾಗಲಿದೆ. 2024 ರಲ್ಲಿ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಗರಿಷ್ಠ 45 ಡಿಗ್ರಿ ವರೆಗೆ ತಲುಪಿದೆ. ಆದರೆ ಈ ವರ್ಷ ಕಳೆದ ವರ್ಷಕ್ಕಿಂತ ಹೆಚ್ಚು ಬಿಸಿಲಿನ ತಾಪಮಾನ ಇರಲಿದೆ ಅದರಲ್ಲೂ ಏಪ್ರಿಲ್ ತಿಂಗಳು ಗರಿಷ್ಠ ಮಟ್ಟಕ್ಕೆ ತಲುಪಲಿದೆ. ಬೆಂಗಳೂರು ಈ ವರುಷ 39 ಡಿಗ್ರಿಯಾದರೆ, ಕರಾವಳಿ ಭಾಗ, ಕಲ್ಬುರ್ಗಿ, ಬೀದರ್, ರಾಯಚೂರ್ ಮತ್ತು ಬಾಗಲಕೋಟೆ ತಾಪಮಾನ 45 ಡಿಗ್ರಿ ಗಿಂತ ಮೇಲ್ಪಟ್ಟು ಹೋಗಲಿದೆ.
2025 ರ ಉರಿ ಬಿಸಿಲಿನ ಪ್ರಭಾವದಿಂದ ಕಾಪಾಡಿಕೊಳ್ಳಲು ಈ ಸರಳ ಅವಶ್ಯಕ ಉಪಾಯಗಳನ್ನು ಅಳವಡಿಸಿ.
ಬೇಸಿಗೆ ಸಾಮಾನ್ಯವಾಗಿ ಮಾರ್ಚ್ ತಿಂಗಳಲ್ಲಿ ಶುರವಾಗುತ್ತದೆ, ಆದರೆ 2025 ಈ ವರ್ಷದಲ್ಲಿ ಬೇಸಿಗೆಯ ಬಗ್ಗೆ ಅತಿಯಾದ ಚರ್ಚೆ ನಡೆಯುತ್ತಿದೆ. ಫೆಬ್ರವರಿ ಮಧ್ಯದಲ್ಲೇ ಈ ರೀತಿಯಾದ ಸೆಕೆ ಮುಂದಿನ ದಿನಗಳಲ್ಲಿ ಸಹಿಕೊಳ್ಳಲು ಅಸಾಧ್ಯವಾಗಿದೆ. ಅದರಲ್ಲೂ ಕರಾವಳಿ ಭಾಗದ ಜನ ಈಗಾಗಲೇ ತತ್ತರಿಸಿ ಹೋಗಿದ್ದಾರೆ. ಸಮುದ್ರದ ಮಟ್ಟಕ್ಕೆ ಸಮನಾಗಿರುವ ಕರಾವಳಿ ಭಾಗ ಪ್ರತಿ ವರ್ಷ ಸೂರ್ಯನ ಕಿರಣಗಳಿಂದ ಸುಡುತ್ತದೆ.
ಆದರೆ ಇತ್ತೀಚಿನ ಹವಾಮಾನ ಇಲಾಖೆಯಿಂದ ಬಂದಿರುವ ಭವಿಷ್ಯದ ಹವಾಮಾನ ವರದಿ ಮತ್ತಷ್ಟು ತಲೆ ಬಿಸಿಯನ್ನು ತಂದಿರಿಸಿದೆ. ಹವಾಮಾನ ಪರಿಸ್ಥಿತಿಗಳಲ್ಲಿನ ತೀವ್ರವಾದ ಬದಲಾವಣೆಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಸಾಮಾನ್ಯವಾಗಿ ಫೆಬ್ರವರಿ ಶೀತ ತಿಂಗಳು ಆದರೆ ಅನಿರೀಕ್ಷಿತ ಶಾಖ ಜನರನ್ನು ಕಂಗಾಲುಗೊಳಿಸಿದೆ.
ಮುಂಬರುವ ಅತಿಯಾದ ಸೂರ್ಯನ ಶಾಖದಿಂದ ಜನರಿಗೆ ಬರುವ ಆರೋಗ್ಯದ ಸಮಸ್ಯೆ ಬಗ್ಗೆ ಅರೋಗ್ಯ ಇಲಾಖೆ ಮತ್ತು ಸಂಬಂಧಪಟ್ಟ ಇಲಾಖೆಗಳು ಮುನ್ನೆಚರ ವಹಿಸಬೇಕಾಗಿದೆ. ಜನರು ಕೂಡ ತಮ್ಮ ಆರೋಗ್ಯದ ಕಡೆ ಉತ್ತಮ ಕಾಳಜಿವಹಿಸಬೇಕಾಗಿದೆ.