New Delhi, May 01 : ಮೇ 5 ರಿಂದ 9 ರವರೆಗೆ ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಹಿಮಾಚಲ ಪ್ರದೇಶ ಭೇಟಿ ನಿಗದಿಯಾಗಿತ್ತು. ಆದರೆ ಮೂಲಗಳ ಪ್ರಕಾರ ರಾಷ್ಟ್ರಪತಿಯ ಹಿಮಾಚಲ ಪ್ರದೇಶ ಭೇಟಿಯನ್ನು ಮುಂದೂಡಲಾಗಿದೆಯಂತೆ.
ಇದೆ ರೀತಿ ಪ್ರಧಾನಿ ಮೋದಿಯವರು ರಷ್ಯಾದ ವಿಜಯ ದಿವಸ ಪೇರಡ್ ನಲ್ಲಿ ಭಾಗವಹಿಸಲು ಆಹ್ವಾನವಿದ್ದರೂ, ಪ್ರಧಾನಿಯವರು ಈ ಕಾರ್ಯಕ್ರಮಕ್ಕೆ ಭಾಗವಹಿಸುವುದಿಲ್ಲ ಎಂದು ವರದಿಯಾಗಿದೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಇರುವ ಕಾರಣ ರಾಷ್ಟ್ರಪತಿ ಮತ್ತು ಪ್ರಧಾನಿ ತಮ್ಮ ಪ್ರವಾಸವನ್ನು ಕೈ ಬಿಟ್ಟಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ರಾಷ್ಟ್ರಪತಿಯವರು ಹಿಮಾಚಲ ಪ್ರದೇಶದ ಸಂಪೂರ್ಣ ಅಭಿವೃದ್ಧಿ ಮತ್ತು ಇನ್ನಿತರ ಬೌಗೋಳಿಕ ಹಾಗೂ ರಾಜಕೀಯ ವಿಚಾರಗಳು ಮತ್ತು ಇನ್ನಿತರ ಸಮಸ್ಯೆಗಳ ಪರಿಶೀಲನೆಗೆ ಭೇಟಿ ನೀಡಲಿದ್ದರು.
ಎರಡನೇ ಮಹಾಯುದ್ಧದಲ್ಲಿ ನಾಜಿ ಜರ್ಮನಿಯ ವಿರುದ್ಧ ಸೋವಿಯತ್ ಪಡೆಗಳ ವಿಜಯದ 80ನೇ ವರ್ಷಾಚರಣೆಯ ಅಂಗವಾಗಿ ಮಾಸ್ಕೋದಲ್ಲಿ ಮೇ 9 ರಂದು ನಡೆಯಲಿರುವ ವಿಜಯೋತ್ಸವ ಆಚರಣೆಯಲ್ಲಿ ಭಾಗವಹಿಸಲು ರಷ್ಯಾ ಪ್ರಧಾನಿ ಮೋದಿ ಅವರಿಗೆ ಅಧಿಕೃತ ಆಹ್ವಾನವನ್ನು ನೀಡಿತ್ತು.
ಆದರೆ, ಮೇ 9 ರ ಆಚರಣೆಗಳಿಗೆ ಮಾಸ್ಕೋಗೆ ಭೇಟಿ ನೀಡುವುದಿಲ್ಲ, ರಷ್ಯಾದ ಆಹ್ವಾನವನ್ನು ಪ್ರಧಾನಿ ಮೋದಿ ತಿರಸ್ಕರಿಸಿದ್ದಾರೆ.