ಮಂಗಳೂರು, ಮೇ 01 : ಏಪ್ರಿಲ್ 27 ರಂದು ಸಂಜೆ ನಡೆದ ಕುಡುಪುವಿನಲ್ಲಿ ಗುಂಪಿನಿಂದ ಹಲ್ಲೆಗೊಳಗಾಗಿ ಸಾವನ್ನಪ್ಪಿದ ಘಟನೆಯ ಬಗ್ಗೆ ಕೆಪಿಸಿಸಿ ಉಪಾಧ್ಯಕ್ಷ ಮತ್ತು ರಾಜ್ಯ ಮಾಜಿ ಸಚಿವರಾದ ರಮಾನಾಥ ರೈ ಮಾತನಾಡಿ, ಈ ಪ್ರಕರಣದ ತನಿಖೆಗೆ ವಿಶೇಷ ತನಿಖಾ ಸಂಸ್ಥೆ (ಎಸ್ಐಟಿ) ರಚಿಸಬೇಕೆಂದು ಒತ್ತಾಯಿಸಿದರು.
ಈ ಪ್ರಕರಣದ ಬಗ್ಗೆ ಮೇ 01, ಗುರುವಾರ ಪತ್ರಿಕಾಗೋಷ್ಠಿ ನಡೆಸಿ, ಜಿಲ್ಲೆಯಲ್ಲಿ ಪಬ್ ದಾಳಿ, ಚರ್ಚ್ ದಾಳಿಗಳ ಫಲಿತಾಂಶ ಏನಾಗಿದೆ ಎಂಬಹುದು ಎಲ್ಲರಿಗೆ ತಿಳಿದಿದೆ. ಜಿಲ್ಲೆಯಲ್ಲಿ ನಡೆಯುತ್ತಿರುವ ಧರ್ಮ ಆಧಾರಿತ ರಾಜಕೀಯ ಹತ್ಯೆಗಳಿಗೆ ಮೂಲ ಕಾರಣ ಎರಡು ಧರ್ಮಗಳಲ್ಲಿರುವ ಮತೀಯ ಶಕ್ತಿಗಳು. ಕುಡುಪಿನಲ್ಲಿ ನಡೆದಿರುವುದು ಕೋಮು ಘರ್ಷಣೆ ಅಲ್ಲ ಹೊರತಾಗಿ ಅದು ಒಂದು ' ಟಾರ್ಗೆಟೆಡ್ ಕಿಲ್ಲಿಂಗ್' ಎಂದು ಆರೋಪಿಸಿದ್ದಾರೆ.
ಇಂತಹ ಘಟನೆ ತುಂಬಾ ಅಪಾಯಕಾರಿ ಮತ್ತು ಇದು ಗುಂಪು ಹಲ್ಲೆ ಮೂಲಕ ಪ್ರಾರಂಭವಾಗುತ್ತದೆ ಹಾಗೂ ಇದನ್ನು ಮೊಳಕೆಯಲ್ಲೇ ಚಿವುಟಬೇಕು ಎಂದು ಪತ್ರಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಎಸ್ಐಟಿ ಗೆ ಈ ಕೇಸ್ ನ್ನು ಒಪ್ಪಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ ಎಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಬಿತ್ತರವಾಗಿದೆ.
ಏಪ್ರಿಲ್ 27 ರಂದು ನಗರದ ಹೊರವಲಯದ ಕುಡುಪು ಎಂಬಲ್ಲಿ ಕ್ರಿಕೆಟ್ ಪಂದ್ಯದ ವೇಳೆ ನಡೆದ ಜಗಳದಲ್ಲಿ ವ್ಯಕ್ತಿಯೊಬ್ಬ ಸಾವನ್ನಪ್ಪಿದ್ದಾನೆ. ಭಟ್ರ ಕಲ್ಲುರ್ಟಿ ದೇವಸ್ಥಾನದ ಬಳಿ ಈ ಘಟನೆ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ : ಕುಡುಪಿನಲ್ಲಿ ನಡೆದ ಘಟನೆ: ಕ್ರಿಕೆಟ್ ಪಂದ್ಯದ ವೇಳೆ 'ಪಾಕಿಸ್ತಾನ ಜಿಂದಾಬಾದ್' ಎಂದು ಕೂಗಿದ್ದಕ್ಕೆ ವ್ಯಕ್ತಿಗೆ ಥಳಿತ;ಸಾ*ವು