21 June 2025 | Join group

ಮಂಗಳೂರಿನ ಬಜ್ಪೆಯಲ್ಲಿ ತಲವಾರಿನಿಂದ ಸುಹಾಸ್ ಶೆಟ್ಟಿಯ ಹತ್ಯೆ

  • 01 May 2025 10:20:02 PM

ಮಂಗಳೂರು, ಮೇ 01 : ಮೇ 1 ರ ರಾತ್ರಿ 5 ಜನರ ತಂಡವೊಂದು ನಗರದ ಹೊರವಲಯದ ಬಜ್ಪೆಯಲ್ಲಿ ಯುವಕನೋರ್ವನನ್ನು ಬರ್ಬರವಾಗಿ ಕೊ*ಲೆ ಮಾಡಲಾಗಿದೆ. ತಲವಾರು ಹಿಡಿದು ರಾಜಾರೋಷವಾಗಿ ವ್ಯಕ್ತಿಯೊಬ್ಬನನ್ನು ಕಡಿದು ಹಲ್ಲೆಗೈದ ಯುವಕರ ತಂಡ, ನಂತರ ಅಲ್ಲಿಂದ ಪರಾರಿಯಾದ ಘಟನೆ ಸಾರ್ವಜನಿಕರ ಮೊಬೈಲ್ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ.

 

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಹೊರವಲಯದ ಕುಡುಪಿನಲ್ಲಿ ನಡೆದ ಗುಂಪು ಕೊ*ಲೆಯ ಕೆಲವೇ ದಿನಗಳಲ್ಲಿ ಈ ರೀತಿಯ ಮತ್ತೊಂದು ಘಟನೆ ನಡೆದಿರುವುದು ಇಡೀ ದಕ್ಷಿಣ ಕನ್ನಡ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದೆ. ಈ ಘಟನೆಯ ಅಧಿಕೃತ ಮಾಹಿತಿ ಇನ್ನು ದೊರೆಯಬೇಕಾಗಿದೆ.

 

ಮೂಲಗಳ ಪ್ರಕಾರ, ಮಾರಣಾಂತಿಕವಾಗಿ ಹಲ್ಲೆಗೊಳಗಾದ ವ್ಯಕ್ತಿಯನ್ನು ಸುಹಾಸ್ ಶೆಟ್ಟಿ ಎಂದು ಗುರುತಿಸಲಾಗಿದೆಯಂತೆ. ಈ ಹಿಂದೆ ಸುರತ್ಕಲ್ ನಲ್ಲಿ ನಡೆದ ಮುಹಮ್ಮದ್ ಫಾಝಿಲ್ ಕೊಲೆ ಪ್ರಕರಣದಲ್ಲಿ ಇತ ಭಾಗಿಯಾಗಿದ್ದ ಎಂದು ತಿಳಿದು ಬಂದಿದೆ.

 

5 ಜನರ ತಂಡ ಸಾರ್ವಜನಿಕರ ಎದುರೇ ತಲವಾರಿನಿಂದ ದಾಳಿ ನಡೆಸಿದ ಚಿತ್ರಣ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಹಲ್ಲೆಗೆ ಬಳಸಿದ ಮಾರಕಾಸ್ತ್ರಗಳನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದರೆಂದು ತಿಳಿದು ಬಂದಿದೆ. ಹಲ್ಲೆಯ ತೀವ್ರತೆ ಜೋರಾಗಿ ಇದ್ದುದರಿಂದ ಹಲ್ಲೆಗೊಳಗಾದ ವ್ಯಕ್ತಿ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ. ಹೆಚ್ಚಿನ ವಿವರಗಳು ಪೊಲೀಸ್ ತನಿಖೆಯ ನಂತರ ತಿಳಿಯಲಿದೆ.