'ಭಾರತದಲ್ಲಿ ವಾಸಿಸುತ್ತಿದ್ದು ಪಾಕಿಸ್ತಾನದ ಬಗ್ಗೆ ಸಹಾನುಭೂತಿ ಹೊಂದಿರುವವರು ಕೂಡ ಭಯೋತ್ಪಾದಕರು' ಎಂದು ಕನ್ನಡದ ನಟ ಧ್ರುವ ಸರ್ಜಾರವರ ಹೇಳಿಕೆ ಮೆಚ್ಚುಗೆಗೆ ಪಾತ್ರವಾಗಿದೆ.
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಮೂಲಸೌಕರ್ಯಗಳನ್ನು ನಾಶಪಡಿಸಲು ಭಾರತ ಸೇನೆ ಕೈಗೊಂಡ 'ಆಪರೇಷನ್ ಸಿಂಧೂರ್' ಕಾರ್ಯಾಚರಣೆಯ ಬೆನ್ನಲ್ಲೇ ತಮಿಳು ನಟ ಅರ್ಜುನ್ ಸರ್ಜಾ ರವರ ಸಹೋದರಳಿಯ ಕನ್ನಡದ ಯಶಸ್ವಿ ನಟ ಧ್ರುವ ಸರ್ಜಾ ತನ್ನ ಎಕ್ಸ್ ಪೋಸ್ಟಿನಲ್ಲಿ ಬರೆದುಕೊಂಡಿದ್ದಾರೆ.
"ಭಾರತದಲ್ಲಿ ಪಾಕಿಸ್ತಾನದ ಮೇಲೆ ಸಹಾನುಭೂತಿ ಹೊಂದಿರುವವರಿಗೆ, ನೀವು ಅವರ ಬಗ್ಗೆ ಸಹಾನುಭೂತಿ ಹೊಂದಿದ್ದರೆ ನೀವು ಕೂಡ ಭಯೋತ್ಪಾದಕರು" ಎಂದು ಬರೆದಿದ್ದಾರೆ.
ಪಹಲ್ಗಾಮ್ನಲ್ಲಿ ನಾಗರಿಕರ ಮೇಲಿನ ದಾಳಿಗೆ ಪ್ರತಿಕ್ರಿಯಿಸಿದ ನಟ ಧ್ರುವ ಸರ್ಜಾ, "ಭಾರತದ ಕಲಶದಂತಿರುವ ಜಮ್ಮು ಮತ್ತು ಕಾಶ್ಮೀರ ಯಾವಾಗಲೂ ನಮ್ಮದಾಗಿರುತ್ತದೆ" ಎಂದು ಹೇಳಿದ್ದರು.
ಭಾರತದ ದ್ರೋಹಿಗಳಾಗಬೇಡಿ, ಭಾರತದಲ್ಲಿ ಇರುವುದು ಎಂದರೆ ಭಾರತವನ್ನು ನಂಬುವುದು. ನೀವು ವಾಸಿಸುವ ದೇಶವನ್ನು ಪ್ರೀತಿಸಿ, ಇಲ್ಲದಿದ್ದರೆ ಶೀಘ್ರದಲ್ಲಿ ನಾವು ನಿಮ್ಮನ್ನು ಹೊರ ಹಾಕುತ್ತೇವೆ ಜೈ ಹಿಂದ್ ಎಂದು ಪೋಸ್ಟಿನಲ್ಲಿ ಬರೆದಿದ್ದಾರೆ.
ಭಾರತದ ಪಹಲ್ಗಾಂನಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಲ್ಲಿ 26 ಅಮಾಯಕ ಭಾರತೀಯರ ಪಾವು ಸಂಭವಿಸಿದೆ. ಈ ದಾಳಿಯ ಸಂದರ್ಭದಲ್ಲಿ ಪ್ರತಿಕ್ರಿಯಿಸಿದ ಮೊದಲ ನಟ ಎಂಬ ಹೆಗ್ಗಳಿಕೆ ಕೂಡ ಧ್ರುವ ಸರ್ಜಾ ಪಾತ್ರರಾಗಿದ್ದಾರೆ.
ಧ್ರುವ ಸರ್ಜಾ ರವರ ದಿಟ್ಟ ನಿಲುವಿನ ಬಗ್ಗೆ ಜನ ಅವರ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.