ಹಿಂದಿನ ಯುಪಿಎ-2 ಮನಮೋಹನ್ ಸರಕಾರದ ಅವಧಿಯಲ್ಲಿ ರಕ್ಷಣಾ ಸಚಿವರಾಗಿದ್ದ ಎ.ಕೆ ಆಂಟನಿಯವರ ವಿಡಿಯೋ ತುಣುಕೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಫೆಬ್ರವರಿ 2014 ರ ಮಾದ್ಯಮ ಸಂದರ್ಶನದಲ್ಲಿ ಅವರ ಯುದ್ದ ವಿಮಾನ ಖರೀದಿ ಬಗ್ಗೆ ನೀಡಿದ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ತುಂಬಾ ಚರ್ಚೆಗೆ ಗುರಿಯಾಗಿದೆ.
2024 ರ ಫೆಬ್ರವರಿಯಂದು ಪತ್ರಕಾರರೊಂದಿಗೆ ಮಾತನಾಡಿ, ಈ ವರ್ಷದಲ್ಲಿ ನಮ್ಮಲ್ಲಿ ಹಣದ ಕೊರತೆಯಿದೆ, ಆದ್ದರಿಂದ ಈ ವರ್ಷ ಯಾವುದೇ ರೀತಿಯ ಯುದ್ದ ವಿಮಾನ ಖರೀದಿ ಮಾಡುವ ಒಪ್ಪಂದ ಅಂತಿಮೀಕರಣವನ್ನು ನಿರೀಕ್ಷಿಸಬೇಡಿ. ನಮ್ಮಲ್ಲಿ ಹಣವಿಲ್ಲ, ಮುಂದಿನ ವರ್ಷ ( ಅಂದರೆ 2015 ) ಯುದ್ದ ವಿಮಾನ ಖರೀದಿಯ ಒಪ್ಪಂದ ಪೂರ್ಣಗೊಳ್ಳುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು.
ಯುಪಿಎ ಸರಕಾರದ ಸಂದರ್ಭದಲ್ಲಿ ಭಾರತ ಸೈನಿಕ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಹೆಚ್ಚಿನ ಗಮನ ವಹಿಸುತ್ತಿರಲಿಲ್ಲ ಆರೋಪ ಕೇಳಿ ಬರುತಿತ್ತು. ಈ ಹೇಳಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಯುದ್ದ ವಿಮಾನಗಳಿಗೆ ಮೀಸಲಿಟ್ಟ ಹಣವನ್ನು ಇಂಧನ ಖರೀದಿಗೆ ಬಳಸಲಾಗಿದೆ ಎಂದು ತಿಳಿಸಲಾಗಿತ್ತು.
2013 ರ ಸಂದರ್ಭದಲ್ಲೂ ಯುದ್ದ ವಿಮಾನ ಖರೀದಿಗೆ ಮೀಸಲಿಟ್ಟ ಹಣವನ್ನು ಇಂಧನ ಮತ್ತು ಇನ್ನಿತರ ನಿರ್ವಹಣೆ ಕಾಮಗಾರಿಗೆ ವಿನಿಯೋಗಿಸಲಾಗಿದೆ ಎಂಬ ಆರೋಪವು ಇದೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ನೋಡಿ ಜನ ಮನಮೋಹನ್ ಸಿಂಗ್ ನೇತೃತ್ವದ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ದೇಶದ ರಕ್ಷಣೆಗೆ ಆದ್ಯತೆ ಹೆಚ್ಚಾಗಿ ಕೊಡಲಿಲ್ಲ ಎಂದು ಜನ ಕೋಪ ವ್ಯಕ್ತಪಡಿಸಿದ್ದಾರೆ.
@rishibagree ಎನ್ನುವ 'ಎಕ್ಸ್' ಅಕೌಂಟ್ ನಲ್ಲಿ ಈ ವಿಡಿಯೋ ಹಂಚಿಕೊಂಡಿದ್ದು, 'ಹೆಡ್ ಲೈನ್ಸ್ ಟುಡೇ' ಟಿವಿ ಮಾಧ್ಯಮದಲ್ಲಿ ಈ ವಿಷಯದ ಬಗ್ಗೆ ಚರ್ಚೆ ನಡೆದ ಅಣುಕು ಇದರಲ್ಲಿ ಜೋಡಿಸಲಾಗಿದೆ.
ಗಾಂಧಿ ಪರಿವಾರಕ್ಕೆ ಹತ್ತಿರವಾಗಿದ್ದ ಎ.ಕೆ ಆಂಟನಿ, ಸರಿಸುಮಾರು 8 ವರ್ಷಗಳ ಕಾಲ ಭಾರತದ ರಕ್ಷಣಾ ಸಚಿವರಾಗಿದ್ದರು. 2006 ರಿಂದ 2014 ರವರೆಗೆ ಇವರು ಸೇವೆ ಸಲ್ಲಿಸಿದ್ದರು.