ಗುಜರಾತ್, ಮೇ 16: ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುಜರಾತಿನ ಭುಜ್ ವಾಯುಪಡೆ ನಿಲ್ದಾಣಕ್ಕೆ ಭೇಟಿ ನೀಡಿ ರೋಮಾಂಚನಕಾರಿ ಹೇಳಿಕೆ ಒಂದನ್ನು ನೀಡಿದ್ದಾರೆ.
“ನಾನು ಒಂದು ವಿಷಯವನ್ನು ನಿಮ್ಮ ಮುಂದೆ ಸ್ಪಷ್ಟ ಪಡಿಸಲು ಬಯಸುತ್ತೇನೆ ಅದೇನೆಂದರೆ, ಆಪರೇಷನ್ ಸಿಂಧೂರ್ ಇನ್ನೂ ಮುಗಿದಿಲ್ಲ. ಇದು ಒಂದು ಟ್ರೈಲರ್ ಮಾತ್ರ. ಸರಿಯಾದ ಸಮಯದಲ್ಲಿ ನಾವು ವಿಶ್ವಕ್ಕೆ ನಮ್ಮ ಶಕ್ತಿ ಏನೆಂದು ತಿಳಿಸುತ್ತೇವೆ ಎಂದು ಹೇಳಿದ್ದಾರೆ.
ರಕ್ಷಣಾ ಸಚಿವರು ಎರಡು ದಿವಸದ ಗುಜರಾತ್ ಭೇಟಿಯ ಸಂದರ್ಭದಲ್ಲಿ ಇಂದು ಬುಜ್ ಏರ್ ಬೇಸ್ ಗೆ ಭೇಟಿಕೊಟ್ಟು ಸೈನಿಕರನ್ನು ಉದ್ದೇಶಿಸಿ ಮಾತನಾಡಿ, ಆಪರೇಷನ್ ಸಿಂಧೂರ್ ಇನ್ನು ಮುಗಿದಿಲ್ಲ, ಇದೊಂದು ಜಸ್ಟ್ ಟ್ರೈಲರ್ ಮಾತ್ರ ಪಿಚ್ಚರ್ ಇನ್ನೂ ಬಾಕಿ ಇದೆ ಎನ್ನುವ ಮೂಲಕ ಪಾಕಿಸ್ತಾನಕ್ಕೆ ಕಟುವಾದ ಸಂದೇಶವನ್ನು ರವಾನಿಸಿದ್ದಾರೆ.
ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ನಡೆದ ನಂತರ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಪಾಕಿಸ್ತಾನದ ಬಾರ್ಡರ್ ನಲ್ಲಿರುವ ಏರ್ ಬೇಸ್ ಗಳಿಗೆ ಭೇಟಿ ನೀಡಿ ಅಲ್ಲಿನ ಸೇನಾಧಿಕಾರಿಗಳು ಜೊತೆ ಸಮಾಲೋಚನೆ ನಡೆಸಿ ಸೈನಿಕರನ್ನು ಉರಿದುಂಬಿಸುವ ಕೆಲಸ ಮಾಡುತ್ತಲೇ ಇದ್ದಾರೆ.