ಮಂಗಳೂರು : ನಗರದಿಂದ ಚೆನ್ನೈ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕಿಯೊಬ್ಬರು ಶನಿವಾರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ವಿಶೇಷವೆಂದರೆ, ಮಂಗಳೂರಿನ ರೈಲ್ವೆ ರಕ್ಷಣಾ ಪಡೆ (ಆರ್ಪಿಎಫ್) ಸಿಬ್ಬಂದಿಯ ತಕ್ಷಣದ ಮತ್ತು ಸಹಸ್ರ ಪ್ರಯತ್ನಗಳ ಹೊರತಾಗಿಯೂ ಪ್ರಯಾಣಿಕರ ಸಾವು ತುಂಬಾ ಬೇಸರ ತಂದಿದೆ.
ಮಂಗಳೂರು-ಚೆನ್ನೈ 12602 ರೈಲಿನಲ್ಲಿ ಮಧ್ಯಾಹ್ನ ಸುಮಾರು 1:35 ಕ್ಕೆ ಸಾಮಾನ್ಯ ಬೋಗಿಯಲ್ಲಿ ಈ ಘಟನೆ ಸಂಭವಿಸಿದೆ. ಮಾಹಿತಿ ತಿಳಿದ ಕೂಡಲೇ ಆರ್ಪಿಎಫ್ ತಂಡ ಕ್ಷಿಪ್ರ ಕಾರ್ಯಾಚರಣೆ ನಡೆಸಿ, ಪ್ರಯಾಣಿಕರನ್ನು ಬೋಗಿಯಿಂದ ಹೊರಗೆ ಕರೆತಂದು, ಸಿಪಿಆರ್ ನೀಡಿ, ಬಾಯಿಯಿಂದ ಬಾಯಿಗೆ ಉಸಿರಾಟದ ಪ್ರಯೋಗ ಮಾಡಿದರು ಪ್ರಯಾಣಿಕರ ಜೀವ ಉಳಿಸಲು ಸಾಧ್ಯವಾಗಲಿಲ್ಲ.
ನಂತರ ವೆನ್ ಲಾಕ್ ಆಸ್ಪತ್ರೆಗೆ ಹೃದಯಾಘಾತವಾದ ವ್ಯಕ್ತಿಯನ್ನು ಸಾಗಿಸಿದಾದರು, ದುರದೃಷ್ಟವಶಾತ್,ಆಸ್ಪತ್ರೆಯಲ್ಲಿ ಪ್ರಯಾಣಿಕನನ್ನು ಸಂಜೆ 4.00 ಗಂಟೆ ಸುಮಾರಿಗೆ ಮೃತಪಟ್ಟಿರುವುದಾಗಿ ಘೋಷಿಸಲಾಯಿತು. ಆರ್ಪಿಎಫ್ ಸಿಬ್ಬಂದಿಯ ಸಮರ್ಪಿತ ಪ್ರತಿಕ್ರಿಯೆಯು ವಿಫಲವಾದರೂ, ಪ್ರಯಾಣಿಕರು ಮತ್ತು ರೈಲ್ವೆ ಸಿಬ್ಬಂದಿಯಿಂದ ವ್ಯಾಪಕವಾಗಿ ಮೆಚ್ಚುಗೆ ಪಡೆದಿದೆ.
"ಪ್ರಯಾಣಿಕನನ್ನು ಉಳಿಸಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸಿದ್ದೇವೆ. ಪ್ರತಿಯೊಬ್ಬ ಪ್ರಯಾಣಿಕರೂ ನಮಗೆ ಮುಖ್ಯ" ಎಂದು ಆರ್ಪಿಎಫ್ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ ಎಂದು ದೈಜಿವರ್ಲ್ಡ್ ಮಾದ್ಯಮದಲ್ಲಿ ವರದಿ ಮಾಡಲಾಗಿದೆ.