ತೆಲಂಗಾಣ: ಹೈದರಾಬಾದಿನ ಐತಿಹಾಸಿಕ ಚಾರ್ಮಿನಾರ್ ನಲ್ಲಿ ಗುಲ್ಜಾರ್ ಹೌಸ್ನಲ್ಲಿ(Gulzar House) ಕಟ್ಟಡವೊಂದಕ್ಕೆ ಭಾರಿ ಬೆಂಕಿ ಅವಘಡದಲ್ಲಿ 8 ಮಕ್ಕಳು ಮತ್ತು 5 ಮಹಿಳೆಯರು ಸೇರಿದಂತೆ 17 ಜನರು ಸಾವನ್ನಪ್ಪಿದ ಭೀಕರ ಘಟನೆ ನಡೆದಿದೆ. ಇವತ್ತು ಬೆಳಿಗ್ಗೆ ಅಂದಾಜು 5.30 ಕ್ಕೆ ಈ ಘಟನೆ ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಘಟನಾ ಸ್ಥಳಕ್ಕೆ ಧಾವಿಸಿದ 11 ಅಗ್ನಿ ಶಾಮಕ ದಳ ಬೆಂಕಿಯನ್ನು ನಂದಿಸಲು ಪ್ರಯತ್ನಪಟ್ಟಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತಿಸಿದ್ದಾರೆ. ಘಟನೆ ನಡೆದ ಪ್ರದೇಶದಲ್ಲಿ ಸಾಲು ಸಾಲಾಗಿ ಆಭರಣ ಅಂಗಡಿಗಳಿವೆ ಮತ್ತು ಇದು ಪ್ರಸಿದ್ಧ ಚಾರ್ಮಿನಾರ್ಗೆ ಬಹಳ ಹತ್ತಿರದಲ್ಲಿದೆ. ಈ ಪ್ರದೇಶದಲ್ಲಿರುವ ಕಟ್ಟಡಗಳು ಹಲವು ಶತಮಾನಕ್ಕೂ ಹೆಚ್ಚು ಹಳೆಯದಾಗಿದೆ ಮತ್ತು ಒಂದು ಕಟ್ಟಡ ಮತ್ತೊಂದು ಕಟ್ಟಡ ಅಂಟುಕೊಂಡಿರುವ ಸ್ಥಿತಿಯಲ್ಲಿದೆ.
ಅವಘಡ ಸಂದರ್ಭದಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆಯೊಂದು ನಡೆದಿದೆ, ಒಬ್ಬ ತಾಯಿ ತನ್ನ ಎರಡು ಮಕ್ಕಳನ್ನು ರಕ್ಷಿಸಲು ಹೋಗಿ ಎರಡು ಮಕ್ಕಳನ್ನು ಕೊನೆಯ ಕ್ಷಣದಲ್ಲಿ ಅಪ್ಪುಕೊಂಡಿದ್ದಾಳೆ. ಆದರೆ ಆ ಕೊನೆಯ ಅಪ್ಪುಗೆಯಲ್ಲಿ ತಾಯಿ ಮತ್ತು ಮಕ್ಕಳು ಸಜೀವ ದಹನಗೊಂಡಿದ್ದಾರೆ.
ಪ್ರಧಾನಿ ಮೋದಿ ಮತ್ತು ತೆಲಂಗಾಣ ಮುಖ್ಯಮತ್ರಿ ರೇವಂತ್ ರೆಡ್ಡಿ ಈ ಅಗ್ನಿ ದುರಂತದ ಬಗ್ಗೆ ಸಂತಾಪ ಸೂಚಿಸಿದ್ದು, ಸರಕಾರ ವತಿಯಿಂದ ಸಾವನಪ್ಪಿದ ಮತ್ತು ಗಾಯಗೊಂಡವರಿಗೆ ನೆರವು ಘೋಷಣೆ ಮಾಡಿದ್ದಾರೆ. ಈ ಬೆಂಕಿ ಅವಘಡಕ್ಕೆ ಸರಿಯಾದ ಕಾರಣಗಳೇನು ಎಂಬುವುದು ತನಿಖೆ ನಂತರ ತಿಳಿದುಬರಬೇಕಾಗಿದೆ.