21 June 2025 | Join group

ವೇದವ್ಯಾಸ ಕಾಮತ್ ಅವರನ್ನು ಉದ್ದೇಶಿಸಿ ಸಿಎಂ ನಗೆ ಪಟಾಕಿ - ನಗುವಿನಲ್ಲಿ ಮುಳುಗಿದ ಸಭಿಕರು

  • 18 May 2025 08:17:02 PM

ಮಂಗಳೂರು : ಮೇ 16 ರಂದು ಮಂಗಳೂರಿನ ಪಡೀಲ್ ನಲ್ಲಿ ನಿರ್ಮಾಣವಾದ ಹೊಸ ಡಿಸಿ ಕಚೇರಿ 'ಪ್ರಜಾಸೌಧ' ಉದ್ಘಾಟನೆಯ ಸಂದರ್ಭದಲ್ಲಿ ಸರಕಾರ ಯೋಜನೆಗಳ ಬಗ್ಗೆ ವಿಸ್ತಾರವಾಗಿ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ರಾಜ್ಯ ಸರಕಾರದ ಸಚಿವರು, ಸ್ಪೀಕರ್, ಮಾಜಿ ಸಚಿವರು, ಕಾಂಗ್ರೆಸ್ ಶಾಸಕರು, ಮಂಗಳೂರು ಭಾಗದ ಬಿಜೆಪಿ ಶಾಸಕರು ಮತ್ತು ಇನ್ನಿತರ ಮುಖಂಡರು ಭಾಗವಹಿಸಿದ್ದರು.

 

ತನ್ನ ಭಾಷಣದಲ್ಲಿ ನಗೆ ತರಿಸುವ ಕೆಲವು ಮಾತುಗಳನ್ನು ಬಳಸಿದ ಮುಖ್ಯಮಂತ್ರಿ, ವೇದಿಕೆಯಲ್ಲಿ ಉಪಸ್ಥಿತರಿದ್ದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಂಗಳೂರು ನಗರ ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ರವರ ಕಡೆಗೆ ವ್ಯಂಗ್ಯಭರಿತವಾಗಿ ಮಾತು ಹೇಳಿದರು. ಈ ಸಂದರ್ಭ ಸಭಿಕರು ನಗೆಗೇರಿದರು.

 

"ನಾವು ಮಾತು ಕೊಟ್ಟಂತೆ ಎಲ್ಲಾ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ. ನುಡಿದಂತೆ ನಡೆಯುತ್ತಿದ್ದೇವೆ. ಅಭಿವೃದ್ಧಿ ಕೆಲಸಗಳನ್ನು ಕೂಡ ಮುಂದುವರೆಸಿದ್ದೇವೆ. ನಾನು 1994ರಲ್ಲಿ ಮತ್ತು ನಂತರ ಧರ್ಮಸಿಂಗ್ ಅವರು 2004-05ರಲ್ಲಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ, ಪ್ರತಿಯೊಂದು ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡುವುದಾಗಿ ಘೋಷಿಸಿದ್ದೆವು.

 

"ಒಂದು ಮೆಡಿಕಲ್ ಕಾಲೇಜು, ಒಂದು ಸರ್ಕಾರಿ ಆಸ್ಪತ್ರೆ ಜೊತೆಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸುವ ಯೋಜನೆ ಅದು. ದಕ್ಷಿಣ ಕನ್ನಡ ಜಿಲ್ಲೆ ಯಾವಾಗಲೂ ಶಿಕ್ಷಣ, ಬ್ಯಾಂಕಿಂಗ್, ಮೀನುಗಾರಿಕೆ ಮತ್ತು ವ್ಯಾಪಾರ ಕ್ಷೇತ್ರದಲ್ಲಿ ಹೆಸರುವಾಸಿಯಾಗಿದೆ."

 

ಮುಖ್ಯಮಂತ್ರಿ ಹಾಸ್ಯಭರಿತವಾಗಿ ಮುಂದುವರೆಸಿದ ಅವರು ಮಂಗಳೂರು ಶಾಸಕ ವೇದವ್ಯಾಸ ಕಾಮತ್ ರವರನ್ನು ಉದ್ದೇಶಿಸಿ, “ಗೋಡಂಬಿ! ಅಲ್ವೇನಯ್ಯ, ಗೋಡಂಬಿ ಬೆಳೆದೀಯಾ?... ಬೆಳೆಯಲ್ಲ, ತಿನ್ತೀಯಾ ಅಷ್ಟೇ... ತಿನ್ತೀಯಾ ನೀನು? ತಿನ್ನಲ್ಲವಾ?...ಫ್ಯಾಕ್ಟರಿ ಇಟ್ಟುಕೊಂಡಿದ್ದೀಯಾ? ವೆರಿ ಗುಡ್!"

 

"ಫ್ಯಾಕ್ಟರಿ ಇಟ್ಟುಕೊಂಡಿದ್ದಾರೆ, ಆದರೆ ಬೆಳೆಯೋದಿಲ್ಲ. ವ್ಯಾಪಾರ!.. ಅದಕ್ಕೇನೆ ವ್ಯಾಪಾರ ಮಾಡಿಕೊಂಡು ಎಂಎಲ್‌ಎ ಆಗಿರುವದು!" ಅಂತು ಹೇಳಿದರು ಮತ್ತು ಸಭೆಯಲ್ಲಿ ಹಾಸ್ಯ ಹೊತ್ತಿಸಿದರು."

 

ಹೊಸ ಡಿಸಿ ಕಚೇರಿ ಈಗ ಸಾರ್ವಜನಿಕರಿಗೆ ಲಭ್ಯವಿದ್ದು, ಇನ್ನು ಮುಂದೆ ಎಲ್ಲಾ ಸಂಬಂಧಪಟ್ಟ ಕೆಲಸಗಳು ಈ ಕಚೇರಿಯಲ್ಲೇ ನಡೆಯಲಿದೆ. ಹಳೆ ಡಿಸಿ ಆಫೀಸ್ ಇನ್ನು ಮುಂದೆ ಮ್ಯೂಸಿಯಂ ಆಗಿ ಮಾರ್ಪಡಾಗಲಿದೆ.