ಭಾರತದಲ್ಲಿ ಸದ್ಯಕ್ಕೆ 257 ಕೋವಿಡ್ -19 ಪ್ರಕರಣಗಳು ವರದಿಯಾಗಿವೆ. ಸಿಂಗಾಪುರ ಮತ್ತು ಹಾಂಗ್ ಕಾಂಗ್ನಲ್ಲಿ ಕೋರೋಣ ಹೊಸ ಅಲೆ ಬೀಸುತ್ತಿದ್ದು ಭಾರತದಲ್ಲಿ ಪರಿಸ್ಥಿತಿ ನಿಯಂತ್ರದಲ್ಲಿದೆ ಎಂದು ಅರೋಗ್ಯ ಸಚಿವಾಲಯ ತಿಳಿಸಿದೆ.
2019 ರಂದು ಇಡೀ ವಿಶ್ವಕ್ಕೆ ಮಾರಕವಾದ ಕೋವಿಡ್ -19 ರೋಗ, ವಿಶ್ವದಾದ್ಯಂತ ಲಕ್ಷಗಟ್ಟಲೆ ಜನರ ಜೀವವನ್ನು ಬಲಿಪಡೆದಿದೆ.
ವೈದ್ಯರ ಊಹೆಯ ಪ್ರಕಾರ, ಕೋವಿಡ್-19 ಸಾಂಕ್ರಾಮಿಕ ರೋಗವಾಗಿ ಪರಿಣಮಿಸಿದೆ. ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಅಥವಾ ಸಾವು ನೋವುಗಳಲ್ಲಿ ಗಮನಾರ್ಹ ಏರಿಕೆ ಕಂಡುಬಂದರೆ ಮಾತ್ರ ಭಯಪಡಬೇಕಾದ ಸಂದರ್ಭ ಎದುರಾಗಬಹುದು ಎನ್ನುತ್ತಾರೆ.
ಇಲ್ಲಿಯವರೆಗಿನ ಒಟ್ಟು ದಾಖಲಾದ ಪ್ರಕರಣಗಳು
ಮೇ 12 ರಿಂದ ಕೇರಳದಲ್ಲಿ ಅತಿ ಹೆಚ್ಚು ಅಂದರೆ ಒಟ್ಟು 69 ಪ್ರಕರಣಗಳು ದಾಖಲಾಗಿವೆ. ನಂತರ ಮಹಾರಾಷ್ಟ್ರದಲ್ಲಿ 44 ಮತ್ತು ತಮಿಳುನಾಡಿನಲ್ಲಿ 34 ಪ್ರಕರಣಗಳು ದಾಖಲಾಗಿವೆ. ಕರ್ನಾಟಕ, ಗುಜರಾತ್, ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಸಿಕ್ಕಿಂನಂತಹ ಇತರ ರಾಜ್ಯಗಳು ಕಡಿಮೆ ಏಕ-ಅಂಕಿಯ ಪ್ರಕರಣಗಳ ಸಂಖ್ಯೆಯನ್ನು ಕಂಡಿವೆ. ಆದರೆ ಮಹಾರಾಷ್ಟ್ರದಲ್ಲಿ ಎರಡು ಸಾವಿನ ಪ್ರಕರಣಗಳು ವರದಿಯಾಗಿವೆ
ತೆಗೆದುಕೊಳ್ಳಬೇಕಾದ ಎಚ್ಚರಿಕೆ ಕ್ರಮ
ಮುಖ್ಯವಾಗಿ ಮಕ್ಕಳು, ವಯಸ್ಸಾದವರು ಮತ್ತು ರೋಗನಿರೋಧಕ ಶಕ್ತಿ ಕಡಿಮೆ ಇರುವ ವ್ಯಕ್ತಿಗಳಿಗೆ ಇರುವ ಏಕೈಕ ಎಚ್ಚರಿಕೆಯೆಂದರೆ ಕೈ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು, ಮುಖವಾಡಗಳನ್ನು ಧರಿಸುವುದು ಮತ್ತು ಜನದಟ್ಟಣೆಯ ಸ್ಥಳಗಳನ್ನು ತಪ್ಪಿಸುವುದು ಮುಂತಾದ ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸುವುದು ಮೊದಲ ಆದ್ಯತೆಯಾಗಿರಬೇಕು.
ಈ ಕ್ರಮವನ್ನು ಪ್ರತಿಯೊಬ್ಬ ವ್ಯಕ್ತಿಯು ಪಾಲಿಸಿದರೆ ಬೇರೆಯವರಿಗೆ ಕೋರೋಣ ಸೋಂಕು ಹರಡದಂತೆ ಕಾಪಾಡಿಕೊಳ್ಳಬಹುದು. ಜನದಟ್ಟಣೆಯ ಸ್ಥಳಗಳಲ್ಲಿ ಅಥವಾ ಅಕ್ಕ ಪಕ್ಕ ಜನರು ಇರುವಾಗ ಸೀನುವುದಾಗಲಿ, ಕೆಮ್ಮುವುದಾಗಲಿ ಮಾಡಬಾರದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಸಿಂಗಾಪುರ ಮತ್ತು ಹಾಂಗ್ ಕಾಂಗ್ ನಲ್ಲಿ ಭಾರಿ ಏರಿಕೆ
ಪ್ರತಿಷ್ಠಿತ ಬಿಸಿನೆಸ್ ಟುಡೇ ಯಲ್ಲಿ ಪ್ರಕಟವಾದಂತೆ, ಸಿಂಗಾಪುರ ಮತ್ತು ಹಾಂಗ್ ಕಾಂಗ್ covid-19 ಪ್ರಕರಣ ಗಣನೀಯ ಏರಿಕೆ ಕಂಡಿದೆ. ಸಿಂಗಾಪುರದಲ್ಲಿ ಏಪ್ರಿಲ್ ತಿಂಗಳಲ್ಲಿ ಇದ್ದ 11,100 ಪ್ರಕರಣಗಳು, ಮೇ ತಿಂಗಳ ಮೊದಲ ವಾರಕ್ಕೆ 14,200 ಪ್ರಕರಣಕ್ಕೆ ಏರಿಕೆಯಾಗಿದೆ.
ಹಾಂಗ್ ಕಾಂಗ್ ನಲ್ಲಿ 1,042 ಪ್ರಕರಣಗಳು ರಿಜಿಸ್ಟರ್ ಆಗಿದ್ದು ಅಚ್ಚರಿಯ ಸಂಗತಿ ಏನೆಂದರೆ, ಮೇ 3 ಕ್ಕೆ ಕೊನೆಗೊಂಡ ವಾರದಲ್ಲಿ ಹಾಂಗ್ ಕಾಂಗ್ನಲ್ಲಿ 31 ವೈರಸ್ ಸಂಬಂಧಿತ ಸಾವುಗಳು ದಾಖಲಾಗಿವೆ. ಇದು ನಗರದಲ್ಲಿ ಒಂದು ವರ್ಷದಲ್ಲಿ ಅತಿ ಹೆಚ್ಚು ಸಾಪ್ತಾಹಿಕ ಸಂಖ್ಯೆಯಾಗಿದೆ ಎಂದು ವರದಿಯಾಗಿದೆ.