21 June 2025 | Join group

ನಾಳೆ ಮೇ 21 ರಂದು ಕರ್ನಾಟಕದಲ್ಲಿ ಮದ್ಯ ಸಿಗಲ್ಲ : ಇಲ್ಲಿದೆ ಕಾರಣ

  • 20 May 2025 12:06:04 PM

ದಿನದಿಂದ ದಿನಕ್ಕೆ ಅಬಕಾರಿ ಸುಂಕ ಹೆಚ್ಚಾಗುತ್ತಿರುವ ಹಿನ್ನಲೆ ಮತ್ತು ಕರ್ನಾಟಕದ ಮದ್ಯದ ಪರವಾನಿಗೆ ಶುಲ್ಕ ಹೆಚ್ಚಾದ ಕಾರಣ, ಕರ್ನಾಟಕ ಮದ್ಯ ವ್ಯಾಪಾರಿಗಳು ಮೇ 21 ರಂದು ಬಾರ್ ಮತ್ತು ವೈನ್ ಶಾಪ್ ಮುಚ್ಚಿ ಪ್ರತಿಭಟನೆ ಮಾಡಲು ನಿರ್ಧರಿಸಿದ್ದಾರೆ.

 

ಮೇ 21 ರಂದು ಕರ್ನಾಟಕದಾದ್ಯಂತ ಎಲ್ಲಾ ಬಾರ್ ಮತ್ತು ಮದ್ಯದ ಅಂಗಡಿಗಳನ್ನು ಮುಚ್ಚುವ ಮೂಲಕ ಸರಕಾರಕ್ಕೆ ಸ್ಪಷ್ಟ ಸಂದೇಶ ಕಳುಹಿಸಲು ಬಾರ್ ಮಾಲಕರು ನಿರ್ಧಾರ ಕೈಗೊಂಡಿದ್ದಾರೆ. ಮೇ 20 ರಂದು ಮುಷ್ಕರದ ಕಾರಣಗಳ ಬಗ್ಗೆ ಪ್ರತಿಭಟನೆಯ ಮೂಲಕ ಸರಕಾರದ ಗಮನಕ್ಕೆ ತಂದು, ಮೇ 21 ರಂದು ಸಂಪೂರ್ಣ ಬಂದ್ ಮಾಡಲು ನಿರ್ಧರಿಸಿದ್ದಾರೆ.

 

ಸರಕಾರದ ಪೂರೈಕೆಗಳಿಗೂ ಹೊಡೆತ

ಬಾರ್ ಮಾಲಕರು ಸರಕಾರದ ಡಿಪೋಗಳಿಂದ ಮದ್ಯ ಖರೀದಿ ಮಾಡದೇ ಇರಲು ನಿರ್ಧರಿಸಿದ್ದು, ಕರ್ನಾಟಕ ವೈನ್ ವ್ಯಾಪಾರಿಗಳ ಸಂಘ, ರಾಷ್ಟ್ರೀಯ ವೈನ್ ಪರಿಶೀಲನಾ ಸಮಿತಿ, ಕರ್ನಾಟಕ ಬ್ರುವರೀಸ್ ಅಂಡ್ ಡಿಸ್ಟಾಲರಿಸ್ ಅಸೋಸಿಯೇಷನ್ ಹಾಗು ಇನ್ನಿತರ ಸಂಘಟನೆಗಳು ಈ ಪ್ರತಿಭಟನೆಗೆ ಸಾಥ್ ನೀಡಲಿದೆ.

 

ಲೈಸೆನ್ಸ್ ಶುಲ್ಕ ದುಪ್ಪಟ್ಟು ಏರಿಕೆ

ಕರ್ನಾಟಕ ಸರಕಾರ ಹೊರಡಿಸಿದ ಕರಡು ಅಧಿಸೂಚನೆಯಲ್ಲಿ, ಬ್ರೂವರೀಸ್ ನ ವಾರ್ಷಿಕ ಲೈಸನ್ಸ್ ಶುಲ್ಕ ರೂ.27 ಲಕ್ಷದಿಂದ ರೂ.54 ಲಕ್ಷ ಮಾಡಲಾಗಿದ್ದು, ಡಿಸ್ಟಿಲರಿಗಳು ಮತ್ತು ಗೋದಾಮುಗಳ ಶುಲ್ಕ ರೂ.45 ಲಕ್ಷದಿಂದ ರೂ.95 ಲಕ್ಷ ಮಾಡಲಾಗಿದೆ. ಈ ಹೊಸ ಶುಲ್ಕ ಜೂಲೈ 1 ರಿಂದ ಜಾರಿಗೆ ಬರಲಿದೆ.

 

ಬಹಳಷ್ಟು ಬಾರ್ ಮತ್ತು ವೈನ್ ಶಾಪ್ ಸಾಧ್ಯತೆ

ಕಳೆದ ಒಂದು ವರ್ಷದಲ್ಲಿ ಮದ್ಯದ ಶುಲ್ಕ ಹೆಚ್ಚಾಗುತ್ತಲೇ ಇದ್ದು, ಗ್ರಾಹಕರ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಕೆಲವು ದಿನಗಳ ಹಿಂದೆ ಮದ್ಯದ ಶುಲ್ಕ ಹೆಚ್ಚಾದ ಪರಿಣಾಮ ಕೆಲವು ಬ್ರಾಂಡ್ ಗಳಲ್ಲಿ ಗಣನೀಯ ಬೆಲೆ ಏರಿಕೆ ಕಂಡುಬಂದಿತ್ತು. ಇದೀಗ ಬಾರ್ ಲೈಸೆನ್ಸ್ ಶುಲ್ಕ ಹೆಚ್ಚು ಮಾಡಿದ ಪರಿಣಾಮ ಬಾರ್ ಮಾಲಕರು ಆ ಹೊರೆಯನ್ನು ಗ್ರಾಹಕರ ಮೇಲೆ ಹಾಕಲಿದ್ದಾರೆ. ಈ ಎಲ್ಲಾ ಹೆಚ್ಚಳಗಳಿಂದ ಗ್ರಾಹಕರಿಗೆ ದೊಡ್ಡ ಪೆಟ್ಟು ಬೀಳಲಿದೆ ಎಂದು ಗ್ರಾಹಕರುಗಳು ಮತ್ತು ಬಾರ್ ಮಾಲಕರು ಅಭಿಪ್ರಾಯ ಪಟ್ಟಿದ್ದಾರೆ.

 

ಮೆಟ್ರೋ ನಗರಗಳಲ್ಲಿ ಪಬ್ ನ ಸ್ಥಿತಿ ಅಧೋಗತಿ

ಸಾಮಾನ್ಯವಾಗಿ ಬೆಂಗಳೂರಿನಂತ ಮೆಟ್ರೋ ನಗರಗಳಲ್ಲಿ ನಡೆಯುವ ಪಬ್ ವ್ಯವಹಾರಗಳಲ್ಲಿ ಸರಕಾರ ಅತಿ ಹೆಚ್ಚಿನ ತೆರಿಗೆ ಪಡೆಯುವುದರಿಂದ ಸರಕಾರಕ್ಕೆ ಉತ್ತಮ ರೀತಿಯ ಆದಾಯ ದೊರೆಯುತ್ತದೆ. ಬೇರೆ ನಗರ ಅಥವಾ ದೇಶಗಳಿಂದ ಬರುವ ಜನ ಇಂತಹ ಪಬ್ ಗಳಲ್ಲಿ ಹಣ ಖರ್ಚು ಮಾಡುವುದರಿಂದ ಸರಕಾರಗಳಿಗೆ ಆದಾಯದ ಮೂಲವಾಗಿರುತ್ತದೆ ಆದರೆ ಬೆಂಗಳೂರಿನಲ್ಲಿ 40ಕ್ಕೂ ಹೆಚ್ಚು ಪಬ್ ಗಳು ಈ ಒಂದು ವರ್ಷದಲ್ಲಿ ಮುಚ್ಚಿವೆ ಎಂದು ಕೆಲ ಮೂಲಗಳಿಂದ ತಿಳಿದು ಬಂದಿದೆ.