21 June 2025 | Join group

'ಎಷ್ಟು ಜೆಟ್ ಗಳು ನಷ್ಟವಾಗಿವೆ' ಎಂದು ರಾಹುಲ್ ಕೇಳಿದರೆ, 'ಚುಟ್ ಪುಟ್ ಯುದ್ಧ' ಎಂದಿದ್ದಾರೆ ಖರ್ಗೆ

  • 21 May 2025 11:48:31 AM

ಮಂಗಳವಾರ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಖಾರ್ಜುನ ಖರ್ಗೆ ಮತ್ತು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ 'ಆಪರೇಷನ್ ಸಿಂಧೂರ್' ಬಗ್ಗೆ ಕೇಂದ್ರ ಸರಕಾರದ ವಿರುದ್ಧ ಪರೋಕ್ಷ ದಾಳಿ ನಡೆಸಿದ್ದಾರೆ. ವಿಜಯನಗರದ ಹೊಸಪೇಟೆಯಲ್ಲಿ ನಡೆದ ಸಮರ್ಪಣೆ ಸಂಕಲ್ಪ ರ್‍ಯಾಲಿಯಲ್ಲಿ ಮಾತನಾಡುತ್ತಾ ಈ ಇಬ್ಬರು ಮುಖಂಡರು ಬಿಜೆಪಿ ವಿರುದ್ಧ ಪ್ರಹಾರ ನಡೆಸಿದ್ದು ಕಂಡುಬಂದಿದೆ.

 

ಖರ್ಗೆಯವರು ಆಪರೇಷನ್ ಸಿಂಧೂರ್ ಕಾರ್ಯಾಚರಣೆಯನ್ನು ಪಾಕಿಸ್ತಾನದ ವಿರುದ್ಧದ "ಚುಟ್ ಪುಟ್ ಯುದ್ಧ" ಸರಣಿ ಎಂದು ಕರೆದಿದ್ದಾರೆ. 26 ಜೀವಗಳನ್ನು ಬಲಿ ಪಡೆದ ಮಾರಕ ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಕೆಲವೇ ದಿನಗಳ ಮೊದಲು ಪ್ರಧಾನಿ ನರೇಂದ್ರ ಮೋದಿ ಜಮ್ಮು ಮತ್ತು ಕಾಶ್ಮೀರಕ್ಕೆ ನಿಗದಿತ ಭೇಟಿಯನ್ನು ತಪ್ಪಿಸಿಕೊಂಡಿದ್ದನ್ನು ಟೀಕಿಸಿದ್ದಾರೆ.

 

"ಪ್ರಧಾನಿ ಮೋದಿ ಏಪ್ರಿಲ್‌ 17ರಂದು ಕಾಶ್ಮೀರಕ್ಕೆ ಭೇಟಿ ನೀಡಬೇಕಿತ್ತು. ಆದರೆ ಗುಪ್ತಚರ ಎಚ್ಚರಿಕೆಯಿಂದಾಗಿ ಭೇಟಿ ರದ್ದಾಯಿತು. ಸರ್ಕಾರಕ್ಕೆ ಈ ಮಾಹಿತಿ ಇದ್ದರೆ, ಸಾರ್ವಜನಿಕರಿಗೆ ಏಕೆ ಎಚ್ಚರಿಕೆ ನೀಡಲಿಲ್ಲ?" ಎಂದು ಪ್ರಶ್ನಿಸಿದರು. "ಸಾರ್ವಜನಿಕರಿಗೆ ಎಚ್ಚರಿಕೆ ನೀಡಿದ್ದರೆ, 26 ನಿರಪರಾಧಿಗಳ ಜೀವ ಉಳಿಯುತ್ತಿತ್ತು," ಎಂದು ಅವರು ಆರೋಪಿಸಿದರು.

 

ಲೋಕಸಭೆ ವಿರೋಧ ಪಕ್ಷದ ಅಧ್ಯಕ್ಷ ರಾಹುಲ್ ಗಾಂಧಿ ಯುದ್ದದಲ್ಲಿ ಭಾರತಕ್ಕೆ ಆದ ನಷ್ಟವೇನು ಎಂದು ಪ್ರಶ್ನೆ ಮಾಡಿ "ವಿದೇಶಾಂಗ ಸಚಿವ ಜೈಶಂಕರ್ ಅವರ ಮೌನ ಕೇವಲ ಹೇಳುವುದಲ್ಲ - ಅದು ಶಾಪಗ್ರಸ್ತ. ಹಾಗಾಗಿ ನಾನು ಮತ್ತೊಮ್ಮೆ ಕೇಳುತ್ತೇನೆ: ಪಾಕಿಸ್ತಾನಕ್ಕೆ ತಿಳಿದಿದ್ದರಿಂದ ನಾವು ಎಷ್ಟು ಭಾರತೀಯ ವಿಮಾನಗಳನ್ನು ಕಳೆದುಕೊಂಡಿದ್ದೇವೆ? ಇದು ಒಂದು ಲೋಪವಲ್ಲ. ಇದು ಅಪರಾಧ. ಮತ್ತು ರಾಷ್ಟ್ರವು ಸತ್ಯವನ್ನು ತಿಳಿದುಕೊಳ್ಳಲು ಅರ್ಹವಾಗಿದೆ" ಎಂದು ಮರು ಪ್ರಶ್ನಿಸಿದ್ದಾರೆ.

 

ಇದೀಗ ಕಾಂಗ್ರೆಸ್ ಮುಖಂಡೂರಗಳ ಭಾಷಣ ಮತ್ತು ಸಾಮಜಿಕ ಜಾಲತಾಣಗಳಲ್ಲಿ ಕೇಂದ್ರ ಸರಕಾರದ ವಿರುದ್ಧ ಕೇಳಿದ ಪ್ರಶ್ನೆಗಳು ಪಾಕಿಸ್ತಾನದ ಮೀಡಿಯಾಗಳಲ್ಲಿ ಬಹಳ ಸದ್ದು ಮಾಡುತ್ತಿದೆ. ಸುಳ್ಳುಸುದ್ದಿಯನ್ನು ನಂಬಿಕೊಂಡು, ಭಾರತದ ವಿರುದ್ದ ತಮ್ಮ ದೇಶ ಮೇಲುಗೈ ಸಾಧಿಸಿತು ವಿಜಯೋತ್ಸವವನ್ನು ಆಚರಿಸಿದ್ದ ಪಾಕಿಸ್ತಾನ ಇದೀಗ ಅವರ ಉತ್ಸಾಹಕ್ಕೆ ಇನ್ನಷ್ಟು ಬಲತುಂಬಿದಂತಾಗಿದೆ ಎಂದು ಬಿಜೆಪಿ ಮತ್ತು ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.