ಭಾರತವು ಪಾಕಿಸ್ತಾನದಲ್ಲಿ ನೆಲೆಸಿರುವ ಭಯೋತ್ಪಾದಕ ಕ್ಯಾಂಪ್ಗಳನ್ನು ನಿಷ್ಕ್ರಿಯಗೊಳಿಸುವ ಉದ್ದೇಶದಿಂದ 'ಆಪರೇಷನ್ ಸಿಂಧೂರ್' ಎಂಬ ಹೆಸರಿನಲ್ಲಿ ಸ್ಪಷ್ಟ ಹಾಗೂ ಪರಿಣಾಮಕಾರಿ ಕಾರ್ಯಾಚರಣೆ ನಡೆಸಿತ್ತು. ಈ ಕಾರ್ಯಾಚರಣೆಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ತೀವ್ರ ಯುದ್ಧವಾತಾವರಣ ನಿರ್ಮಾಣವಾಯಿತು.
ಪಾಕಿಸ್ತಾನವು ಚೀನಾ ಹಾಗೂ ಟರ್ಕಿಯಿಂದ ಆಮದು ಮಾಡಿದ ಡ್ರೋನ್ಗಳು ಮತ್ತು ಫೈಟರ್ ಜೆಟ್ಗಳನ್ನು ಬಳಸಿಕೊಂಡು ಭಾರತದ ಮೇಲೆ ದಾಳಿ ನಡೆಸಿತು. ಆದರೆ, ಭಾರತೀಯ ವಾಯುಪಡೆ ಭದ್ರತೆ ಉಚ್ಛ ಸ್ಥಾನದಲ್ಲಿದ್ದು, ಪಾಕಿಸ್ತಾನ ಕಳಿಸಿದ ಎಲ್ಲಾ ಡ್ರೋನ್ಗಳು ಹಾಗೂ ಯುದ್ಧವಿಮಾನಗಳನ್ನು ಆಕಾಶದಲ್ಲಿಯೇ ನಿಷ್ಕ್ರಿಯಗೊಳಿಸಿ ಭದ್ರತೆಯ ಸಂದೇಶವನ್ನು ಪಾಕಿಸ್ತಾನದ ಮೂಲಕ ಇಡೀ ವಿಶ್ವಕ್ಕೆ ತಿಳಿಸಿತ್ತು.
ಭಾರತದ ತಂತ್ರಜ್ಞಾನಿ ಶಕ್ತಿಯ ಪ್ರದರ್ಶನ
ಭಾರತವು ವಿಶ್ವದ ಅತ್ಯಾಧುನಿಕ ತಂತ್ರಜ್ಞಾನದಿಂದ ಒಳಗೊಂಡ S-400 ಏರ್ ಡಿಫೆನ್ಸ್ ಸಿಸ್ಟಮ್ ಅನ್ನು ಯಶಸ್ವಿಯಾಗಿ ಬಳಸಿಕೊಂಡಿತು. 2020ರಲ್ಲಿ ರಷ್ಯಾದಿಂದ ಖರೀದಿಸಿದ ನಾಲ್ಕು S-400 ಘಟಕಗಳು ಭಾರತಕ್ಕೆ ಗಗನ ದಾಳೆಗಳನ್ನು ತಡೆಯಲು ಅಪಾರ ಶಕ್ತಿ ನೀಡಿದವು. ಈ ವ್ಯವಸ್ಥೆಯನ್ನು ಭಾರತೀಯ ಸೇನೆ “ಸುದರ್ಶನ ಚಕ್ರ” ಎಂದು ಕರೆದಿದ್ದು, ಶತ್ರು ಕ್ಷಿಪಣಿಗಳು ಮತ್ತು ವಿಮಾನಗಳನ್ನು ಕ್ಷಣಾರ್ಧದಲ್ಲಿ ನಿಷ್ಕ್ರಿಯಗೊಳಿಸುವಲ್ಲಿ ಯಶಸ್ವಿಯಾಗಿತ್ತು.
ಪಾಕಿಸ್ತಾನದ ಆಧಾರ ಚೀನಾ ಹಾಗೂ ಟರ್ಕಿಯ ವಿಫಲತೆ
ಪಾಕಿಸ್ತಾನವು ಚೀನಾದ JF-17 ಫೈಟರ್ ಜೆಟ್ಗಳು ಹಾಗೂ HQ-9 ಕ್ಷಿಪಣಿ ವ್ಯವಸ್ಥೆಗಳನ್ನು ನಂಬಿಕೊಂಡಿತ್ತು. ಆದರೆ ಭಾರತೀಯ ಸೇನೆಯ ತಂತ್ರಜ್ಞಾನಿ ತಯಾರಿಯ ಆಧುನಿಕ ಯುದ್ಧವಿಮಾನಗಳು ಹಾಗೂ ಎಲೆಕ್ಟ್ರಾನಿಕ್ ಯುದ್ಧತಂತ್ರಗಳು ಪಾಕಿಸ್ತಾನದ ಎಲ್ಲಾ ಯತ್ನಗಳನ್ನು ವಿಫಲಗೊಳಿಸಿದವು. ಈ ಪರಿಣಾಮವಾಗಿ ಚೀನಾದ ಯುದ್ಧ ಉಪಕರಣಗಳ ಗುಣಮಟ್ಟ ಮಾರುಕಟ್ಟೆಯಲ್ಲಿ ತಿಳಿದುಬಂದು .ವಿಶ್ವ ಮಾರುಕಟ್ಟೆಯಲ್ಲಿ ಬೇಡಿಕೆ ಶೇ.10 ಕ್ಕಿಂತ ಹೆಚ್ಚು ಕುಸಿತ ಕಂಡಿದೆ. ಭದ್ರತಾ ತಜ್ಞರ ಅಭಿಪ್ರಾಯದಂತೆ, ಚೀನಾ ಉತ್ಪಾದನೆಯ ಸಶಸ್ತ್ರ ಉಪಕರಣಗಳ ಗುಣಮಟ್ಟದ ಮೇಲೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅನುಮಾನಗಳು ಹುಟ್ಟಿಕೊಂಡಿದೆ.
ಭಾರತದ ಶಸ್ತ್ರಾಸ್ತ್ರಗಳಿಗೆ ವಿಶ್ವದ ಮೆಚ್ಚುಗೆ
ಆಪರೇಷನ್ ಸಿಂಧೂರ್ ಬಳಿಕ, ಭಾರತದಲ್ಲಿ ನಿರ್ಮಿತವಾದ ಯುದ್ಧ ಉಪಕರಣಗಳು ಹಾಗೂ ತಂತ್ರಜ್ಞಾನಗಳು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆಗೆ ತಲುಪಿವೆ. ವಿವಿಧ ರಾಷ್ಟ್ರಗಳು ಈಗ ಭಾರತದಿಂದ ಡ್ರೋನ್ಗಳು, ಮಿಸೈಲ್ ವ್ಯವಸ್ಥೆಗಳು ಮತ್ತು ರಾಡಾರ್ ತಂತ್ರಜ್ಞಾನಗಳನ್ನು ಖರೀದಿಸಲು ಆಸಕ್ತಿ ತೋರಿಸುತ್ತಿವೆ.
ಭಾರತವು ಈಗಾಗಲೇ ಬೆಲಾರುಸ್, ಇಜಿಪ್ಟ್, ವಿಯೆಟ್ನಾಂ ಮತ್ತು ಆಫ್ರಿಕಾದ ಹಲವಾರು ರಾಷ್ಟ್ರಗಳಿಗೆ ಉಪಕರಣ ಪೂರೈಕೆ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಭಾರತವು ವಿಶ್ವದ ಅತ್ಯಂತ ಪ್ರಮುಖ ಸಶಸ್ತ್ರ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿ ಹೊರಹೊಮ್ಮುವ ಸಾಧ್ಯತೆ ಇದೆ.