Kukke Subramanya : ಕರ್ನಾಟಕದ ಅತೀ ಶ್ರೀಮಂತ ದೇವಸ್ಥಾನಗಳಲ್ಲಿ ಒಂದಾದ ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಮಣ್ಯ ದೇವಸ್ಥಾನದಲ್ಲಿ ಬೆಳಗ್ಗಿನ ಉಪಹಾರ ನೀಡುವ ಬಗ್ಗೆ ಚರ್ಚಿಸಲಾಗಿದ್ದು, ದೇಗುಲದ ನೂತನ ವ್ಯವಸ್ಥಾಪನ ಮಂಡಳಿ ಈ ಬಗ್ಗೆ ಯೋಜನೆಯೊಂದನ್ನು ಹಾಕಿಕೊಂಡಿದೆ.
ಕುಕ್ಕೆ ಸುಬ್ರಮಣ್ಯ ಕ್ಷೇತ್ರಕ್ಕೆ ಪ್ರತಿದಿನ ಸಾವಿರಾರು ಭಕ್ತರು ಆಗಮಿಸುತ್ತಾರೆ. ಇಲ್ಲಿಯವರೆಗೆ ಮಧ್ಯಾಹ್ನ ಮತ್ತು ರಾತ್ರಿಯ ಅನ್ನ ಪ್ರಸಾದ ಛತ್ರದಲ್ಲಿ ವಿತರಿಸುಲಾಗುತ್ತಿದ್ದು, ಇನ್ನು ಮುಂದೆ ಬೆಳಗ್ಗಿನ ಉಪಹಾರ ಭಕ್ತರಿಗೆ ಸಿಗಲಿದೆ.
ಈ ಬಗ್ಗೆ ಸಭೆಯಲ್ಲಿ ಚರ್ಚಿಸಿ, ಆದಷ್ಟು ಬೇಗ ಭಕ್ತರಿಗೆ ಬೆಳಗ್ಗಿನ ಉಪಹಾರ ನೀಡುವ ಯೋಜನೆಯನ್ನು ಅನುಷ್ಠಾನ ಮಾಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ತಿಂಡಿ ಪಟ್ಟಿ ಮತ್ತು ಉಪಹಾರದ ಸಮಯದ ಬಗ್ಗೆ ಅಂತಿಮ ನಿರ್ಧಾರ ವ್ಯವಸ್ಥಾಪನ ಸಮಿತಿ ನಿರ್ಧಾರಿಸಲಿದ್ದು, ಆ ಬಳಿಕ ಈ ಹೊಸ ಯೋಜನೆ ಅನುಷ್ಠಾನಕ್ಕೆ ಬರಲಿದೆ. ಈ ಹೊಸ ಸೌಲಭ್ಯದಿಂದ ಭಕ್ತರಿಗೆ ಬಹಳಷ್ಟು ಪ್ರಯೋಜನವಾಗಲಿದೆ.