ಮಂಗಳೂರು : ಮೇ 22 ರ ರಾತ್ರಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಚಾಕು ಇರಿತದ ಪ್ರಕರಣ ನಡೆದಿದೆ. ಈ ಘಟನೆಯಲ್ಲಿ ಒಬ್ಬರ ಸಾವು ಸಂಭವಿಸಿದ್ದು, ಇಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ.
ಮೃತರನ್ನು ವಾಮಂಜೂರು ನಿವಾಸಿ ಅಹ್ಮದ್ ಭಾವಾ ಅವರ ಪುತ್ರ ಸುಲೇಮಾನ್ (50) ಎಂದು ಗುರುತಿಸಲಾಗಿದೆ. ರಾತ್ರಿ 9:30 ರ ಸುಮಾರಿಗೆ ವಳಚಿಲ್ನಲ್ಲಿ ಈ ಘಟನೆ ನಡೆದಿದ್ದು, ದಾಳಿಯಲ್ಲಿ ಅವರ ಪುತ್ರರಾದ ರಿಯಾಬ್ ಮತ್ತು ಸಿಯಾಬ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಚಾಕು ಇರಿತಕ್ಕೆ ಕಾರಣ
ಪ್ರಾಥಮಿಕ ವರದಿ ಪ್ರಕಾರ, ಸುಲೇಮಾನ್ ಮಾಡುವೆ ಬ್ರೋಕರ್ ಕೆಲಸ ಮಾಡುತ್ತಿದ್ದರು. ಸುಮಾರು ಎಂಟು ತಿಂಗಳ ಹಿಂದೆ ಆರೋಪಿ ಮುಸ್ತಫಾ (30) ಅವರ ಸಂಬಂಧಿ ಮತ್ತು ಶಾಹೀನಾಜ್ ಎಂಬ ಮಹಿಳೆಯೊಂದಿಗೆ ಸುಮಾರು ಎಂಟು ತಿಂಗಳ ಹಿಂದೆ ಮದುವೆ ಮಾಡಿಸಿದ್ದರು. ವೈವಾಹಿಕ ಭಿನ್ನಾಭಿಪ್ರಾಯದಿಂದಾಗಿ, ಶಾಹೀನಾಜ್ ಎರಡು ತಿಂಗಳ ಹಿಂದೆ ತನ್ನ ಪೋಷಕರ ಮನೆಗೆ ಮರಳಿದ್ದರು, ಇದು ಮುಸ್ತಫಾ ಮತ್ತು ಸುಲೇಮಾನ್ ನಡುವೆ ಉದ್ವಿಗ್ನತೆಗೆ ಕಾರಣವೆಂದು ತಿಳಿಸಲಾಗಿದೆ.
ನಿನ್ನೆ ರಾತ್ರಿ ನಡೆದ ಚಾಕು ಇರಿತದ ಘಟನೆ
ನಿನ್ನೆ ಮೇ 22 ರಂದು ಮುಸ್ತಫಾ ಸುಲೇಮಾನ್ಗೆ ನಿಂದನೀಯ ಫೋನ್ ಕರೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಇದಕ್ಕೆ ಪ್ರತಿಕ್ರಿಯೆಯಾಗಿ, ವಿಷಯವನ್ನು ಬಗೆ ಹರಿಸುವ ಸಲುವಾಗಿ ಸುಲೇಮಾನ್ತ ತನ್ನ ಮಕ್ಕಳಾದ ರಿಯಾಬ್ ಮತ್ತು ಸಿಯಾಬ್ ಜೊತೆಗೂಡಿ ವಳಚಿಲ್ನಲ್ಲಿರುವ ಮುಸ್ತಫಾ ಅವರ ನಿವಾಸಕ್ಕೆ ಹೋಗಿದ್ದರು. ಮಕ್ಕಳು ರಸ್ತೆಬದಿಯಲ್ಲಿ ಕಾಯುತ್ತಿದ್ದಾಗ, ಸುಲೇಮಾನ್ ಒಬ್ಬಂಟಿಯಾಗಿ ಮುಸ್ತಫಾ ಅವರೊಂದಿಗೆ ಮಾತನಾಡಲು ಹೋದರು. ಬಹಳಷ್ಟು ಹೊತ್ತಿನ ಮಾತುಕಡೆ ನಡೆದ ನಂತರ, ಸಂಭಾಷಣೆ ಫಲಪ್ರದವಾಗಿಲ್ಲ ಎಂದು ಸುಲೇಮಾನ್ ಹೊರಗಡೆ ಬಂದಿದ್ದರು.
ಆ ಕ್ಷಣದಲ್ಲಿ, ಮುಸ್ತಫಾ ತನ್ನ ಮನೆಯಿಂದ ಓಡಿ ಬಂದು ಬ್ಯಾರಿ ಭಾಷೆಯಲ್ಲಿ ಬೆದರಿಕೆ ಹಾಕುತ್ತಾ, ಇದ್ದಕ್ಕಿದ್ದಂತೆ ಸುಲೇಮಾನ್ ಅವರ ಕುತ್ತಿಗೆಯ ಬಲಭಾಗಕ್ಕೆ ಚಾಕುವಿನಿಂದ ಇರಿದಿದ್ದಾರೆ ಎಂದು ವರದಿಯಾಗಿದೆ. ಸುಲೇಮಾನ್ ಸ್ಥಳದಲ್ಲೇ ಕುಸಿದು ಬಿದ್ದರು. ನಂತರ ಮುಸ್ತಫಾ ಪುತ್ರರ ಮೇಲೆ ತಿರುಗಿ, ಸಿಯಾಬ್ ಅವರ ಎದೆಯ ಎಡಭಾಗ ಮತ್ತು ರಿಯಾಬ್ ಅವರ ಬಲ ಮುಂಗೈಗೆ ಇರಿದಿದ್ದಾರೆ.
ಸ್ಥಳೀಯರ ಸಹಾಯದಿಂದ, ಗಾಯಾಳುಗಳನ್ನು ರಾತ್ರಿ 11 ಗಂಟೆ ಸುಮಾರಿಗೆ ಜನಪ್ರಿಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಸುಲೇಮಾನ್ ಅವರನ್ನು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು. ಇಬ್ಬರು ಮಕ್ಕಳನ್ನು ಹೆಚ್ಚಿನ ಚಿಕಿತ್ಸೆಗೆ ಆಸ್ಪತೆಗೆ ಸೇರಿಸಲಾಗಿದ್ದು ಒಬ್ಬನ ಎದೆಗೆ ತೀವ್ರ ಪ್ರಮಾಣದ ಗಾಯಗಳಾಗಿದೆ ಎಂದು ವರದಿಯಾಗಿದೆ.
ದೂರಿನ ಆಧಾರದ ಮೇಲೆ, ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿ ಮುಸ್ತಫಾನನ್ನು ಬಂಧಿಸಿ, ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.