21 June 2025 | Join group

'ಶೌರ್ಯ ಚಕ್ರ' ವಿಜೇತ ಮೇಜರ್ 'ಆಶೀಶ್ ದಹಿಯಾ': ಅವರ ಧೈರ್ಯ ಮತ್ತು ಸಾಹಸದ ಕಥೆ ಪ್ರತಿಯೊಬ್ಬರೂ ತಿಳಿಯಲೇಬೇಕು

  • 23 May 2025 10:28:43 PM

5 ಹೈ ರಿಸ್ಕ್ ಕಾರ್ಯಾಚರಣೆಗಳಲ್ಲಿ ನಾಲ್ವರು ಉಗ್ರಗಾಮಿಗಳನ್ನು ತಟಸ್ಥಗೊಳಿಸಿರುವ ಮತ್ತು ಮೂರೂ ಸ್ಪೋಟಕ ಸಾಧನಗಳನ್ನು ನಿಷ್ಕ್ರಿಯಗೊಳಿಸಿ ಎದೆಗುಂದಿ ಹೋರಾಡಿದ ಮೇಜರ್ ಆಶೀಶ್ ದಹಿಯಾ ಭಾರತದ ಅತಿದೊಡ್ಡ ಸೇನಾ ಪ್ರಶಸ್ತಿಯಾದ ಶೌರ್ಯ ಚಕ್ರ ಪ್ರಶಸ್ತಿಗೆ ಪಾತ್ರರಾದರು. ಲ್ಯಾನ್ಸ್ ನಾಯಕ್ ಅಶೋಕ್ ದಹಿಯಾ ಮತ್ತು ಸವಿತಾ ಅವರ ಪುತ್ರ ಮೇಜರ್ ಆಶಿಶ್ ದಹಿಯಾ ಭಾರತೀಯ ಸೇನೆಯ ಅಧಿಕಾರಿ.

 

50 ರಾಷ್ಟ್ರೀಯ ರೈಫಲ್ಸ್‌ನ ಮೇಜರ್ ಆಶಿಶ್ ದಹಿಯಾ ಅವರಿಗೆ ಶೌರ್ಯ ಚಕ್ರವನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದ್ದಾರೆ. ಜೂನ್ 2022ರಿಂದ ಐದು ಹೈ-ರಿಸ್ಕ್ ಕಾರ್ಯಾಚರಣೆಗಳಲ್ಲಿ ನಾಲ್ವರು ಉಗ್ರಗಾಮಿಗಳನ್ನು ತಟಸ್ಥಗೊಳಿಸುವ ಮತ್ತು ಮೂರು ಸುಧಾರಿತ ಸ್ಫೋಟಕ ಸಾಧನಗಳನ್ನು ನಿಷ್ಕ್ರಿಯಗೊಳಿಸುವ ಅವರ ಪಾತ್ರವನ್ನು ಗೌರವಿಸುವ ಮೂಲಕ ಶೌರ್ಯ ಚಕ್ರ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

 

2022ರಿಂದ ಈವರೆಗೆ 5 ಅತ್ಯಂತ ಅಪಾಯಕಾರಿ ಆಪರೇಷನ್‌ಗಳಲ್ಲಿ ಭಾಗಿಯಾಗಿರುವ ಆಶೀಶ್ ದಹಿಯಾ, 2024ರ ಜೂನ್ 2 ರಂದು ಪುಲ್ವಾಮಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಯೋಜಿಸಲಾದ ಕಾರ್ಯಾಚರಣೆಯನ್ನು ಮುನ್ನಡೆಸಿದ್ದರು. ಭಯೋತ್ಪಾದಕರನ್ನು ಹುಡುಕಾಡುವ ಸಮಯದಲ್ಲಿ ಭಯೋತ್ಪಾದಕರು ವಿವೇಚನೆಯಿಲ್ಲದೆ ಗುಂಡು ಹಾರಿಸುವ ಮತ್ತು ಗ್ರೆನೇಡ್‌ಗಳನ್ನು ಎಸೆಯುವ ಮೂಲಕ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದರು.

 

ರಾಷ್ಟ್ರೀಯ ರೈಫಲ್ಸ್ 50ನೇ ಬೆಟಾಲಿಯನ್‌ನ ಧೀರ ಯೋಧ, ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರ ವಿರುದ್ಧ ಅಪ್ರತಿಮವಾಗಿ ಹೋರಾಡಿದ್ದರು. ಈ ಕಾರ್ಯಾಚರಣೆಯ ಸಂದರ್ಭದಲ್ಲಿ ಆಶಿಶ್ ದಹಿಯಾ ರವರ ತನ್ನ ತಂಡದ ಇನ್ನೊಬ್ಬರನ್ನು ರಕ್ಷಿಸಿದ ಕಥೆ ಬಹಳ ಸಾಹಸವಾದದ್ದು. ಗ್ರೆನೇಡ್ ಸ್ಫೋಟದಿಂದ ತನ್ನ ಸ್ನೇಹಿತನಿಗೆ ಗಾಯಗಳಾದಾಗ ಆಶಿಶ್ ದಹಿಯಾ ತಕ್ಷಣ ಸುರಕ್ಷಿತ ಸ್ಥಳಕ್ಕೆ ತೆವಳುತ್ತಾ ಹೋಗಿ, ತನ್ನ ಸ್ವಂತ ಸುರಕ್ಷತೆಯನ್ನು ಕೂಡ ಲೆಕ್ಕಿಸದೆ ತನ್ನ ಗೆಳೆಯನನ್ನು ಎಳೆದುಕೊಂಡು ಹೋಗಿ ಕಾಪಾಡಿದ್ದರು.

 

ಮೇಜರ್ ಆಶಿಶ್ ದಹಿಯಾ ರವರ ಧೈರ್ಯ, ಸಾಹಸ ಪ್ರತಿಯೊಬ್ಬ ಯೋಧನಿಗೆ ಪ್ರೇರಣೆ ನೀಡಲಿದೆ. ತನ್ನ ಪ್ರಾಣವನ್ನು ಲೆಕ್ಕಿಸದೆ, ದೇಶಕ್ಕಾಗಿ ಹೋರಾಡಿದ ಆಶಿಶ್ ದಹಿಯಾ ರ ಬಗ್ಗೆ ದೇಶದ ರಾಷ್ಟ್ರಪತಿ ಮೆಚ್ಚುಗೆಯ ಪದಗಳನ್ನು ತನ್ನ ಎಕ್ಸ್ ಅಕೌಂಟ್ ನಲ್ಲಿ ಬರೆದು ಹಾಕಿದ್ದಾರೆ.