ಕರ್ನಾಟಕ ರಾಜ್ಯದಾದ್ಯಂತ ಶಾಲೆಗಳು ಮೇ 29 ರಂದು ತೆರೆಯುವುದಾಗಿ ಶಾಲಾ ಶಿಕ್ಷಣ ಇಲಾಖೆ ಅಧಿಕೃತವಾಗಿ ಘೋಷಣೆ ಮಾಡಿದೆ. ಬೇಸಿಗೆ ರಜೆ ಮೇ 28 ಕ್ಕೆ ರಂದು ಕೊನೆಗೊಳ್ಳಲಿದ್ದು, ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಯಾಗಿರಲಿಲ್ಲ. ಈ ಮದ್ಯೆ ಪೋಷಕರಲ್ಲಿದ್ದ ಗೊಂದಲವನ್ನು ಸರಕಾರ ಅಧಿಕೃತ ಹೇಳಿಕೆಯ ಮೂಲಕ ದೃಡೀಕರಿಸಿದ್ದಾರೆ.
ಆದರೆ, ಇದೀಗ ರಾಜ್ಯದಾದ್ಯಂತ ಸುರಿಯುವ ಭಾರೀ ಮಳೆಯ ಕಾರಣದಿಂದ ಶಾಲೆಗಳ ಆರಂಭಿಕ ದಿನಗಳಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ ಎಂಬ ಸಂಶಯ ವ್ಯಕ್ತವಾಗಿದೆ. ಈಗಾಗಲೇ ಬೆಂಗಳೂರಿನಲ್ಲಿ ಸುರಿದ ಧಾರಾಕಾರ ಮಳೆಯಿಂದ ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತ್ತು.
ಕರ್ನಾಟಕದ ಕರಾವಳಿ ಭಾಗದಲ್ಲಿ ಬಿಡದೆ ಸುರಿಯುತ್ತಿರುವ ಗಾಳಿ ಮಳೆಗೆ ಅವಾಂತರವೇ ಸೃಷ್ಟಿಯಾಗಿದೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಂಗಳೂರು, ಮಡಿಕೇರಿಯ ಪ್ರದೇಶಗಳಲ್ಲಿ ಮಳೆಯ ಅವಾಂತರಕ್ಕೆ ಮನೆ, ಮರ, ಧರೆಗಳು ಕುಸಿದ್ದು ಬೀಳುವ ದೃಶ್ಯಗಳು ಕಾಣಸಿಗುತ್ತವೆ. ಹಲವಾರು ಕಡೆ ಸಾರ್ವಜನಿಕ ವಸ್ತುಗಳಿಗೆ ಮತ್ತು ವಾಹನಗಳಿಗೆ ತುಂಬಾ ಹಾನಿಯಾದ ಪ್ರಕರಣಗಳು ಬೆಳಕಿಗೆ ಬಂದಿದೆ.
ಮತ್ತೊಂದು ಕಡೆ, ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ನಿಧಾನ ಗತಿಯಲ್ಲಿ ಹೆಚ್ಚಾಗುತ್ತಿರುವುದು ಪೋಷಕರಲ್ಲಿ ಗೊಂದಲಕ್ಕೆ ಕಾರಣವಾಗಿದೆ. ರಾಜ್ಯ ಸರಕಾರ ಕೊರೋನಾ ಪರೀಕ್ಷೆ ಕಡ್ಡಾಯ ಮಾಡಿದೆ. ಒಂದು ಕಡೆ ಬಿಡದ ಮಳೆ ಮತ್ತೊಂದು ಕಡೆ ಕೊರೋನಾ ಭೀತಿ, ಈ ಎಲ್ಲದರ ನಡುವೆ ಶಾಲಾ ಕಾಲೇಜುಗಳು ತೆರಿಯೋದು ತುಂಬಾ ಕಷ್ಟದ ಕೆಲಸ ಎಂದು ಶಾಲಾ ಶಿಕ್ಷಕಿಯೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಕೆಲವರು ಹೇಳುವ ಪ್ರಕಾರ, ಶಾಲಾ ಕಾಲೇಜುಗಳನ್ನು ನಿಗದಿತ ದಿನದಂದೇ ತೆರೆಯುವ ಸಾಧ್ಯತೆ ಇದೆ ಆಮೇಲೆ ಮಳೆ ಅಥವಾ ಇನ್ನಿತರ ತೊಂದರೆಗಳನ್ನು ಗಮನದಲ್ಲಿಟ್ಟುಕೊಂಡು ರಜೆ ಘೋಷಿಸುವ ಅನಿವಾರ್ಯತೆ ಬಂದಲ್ಲಿ ರಜೆ ಘೋಷಿಸಬಹುದು ಎಂದು ನಂಬಿದ್ದಾರೆ. ಈಗಾಗಲೇ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಅಂಗನವಾಡಿ ಕೇಂದ್ರಗಳಿಗೆ ಇಂದು ರಜೆ ಘೋಷಿಸಲಾಗಿದೆ.
ಸರಕಾರ ಶಿಕ್ಷಣ ಇಲಾಖೆಯಿಂದ ಘೋಷಣೆಯಾದ ಕ್ಯಾಲೆಂಡರ್ ಈ ರೀತಿ ಇದೆ:
ಮೊದಲ ಅವಧಿ: ಮೇ 29 ರಿಂದ ಸೆಪ್ಟೆಂಬರ್ 19, 2025 ರವರೆಗೆ
ದಸರಾ ರಜಾದಿನಗಳು: ಸೆಪ್ಟೆಂಬರ್ 20 ರಿಂದ ಅಕ್ಟೋಬರ್ 7, 2025
ಎರಡನೇ ಅವಧಿ: ಅಕ್ಟೋಬರ್ 8, 2025 ರಿಂದ ಏಪ್ರಿಲ್ 10, 2026
ಬೇಸಿಗೆ ರಜೆ: ಏಪ್ರಿಲ್ 11 ರಿಂದ ಮೇ 28, 2026 ರವರೆಗೆ
ಈ ಕ್ಯಾಲೆಂಡರ್ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅನ್ವಹಿಸುತ್ತದೆ. ಪರಿಸ್ಥಿತಿ ಏನೇ ಇರಲಿ ಮಕ್ಕಳು ತಮ್ಮ ಶಾಲಾ ಚೀಲ ಮತ್ತು ಇನ್ನಿತರ ಶಾಲಾ ಸಾಮಗ್ರಿಗಳನ್ನು ಕೂಡಿ ಹಾಕಿ ಶಾಲೆಗೆ ಹೋಗಲು ಸಿದ್ಧರಾಗುವ ಸಮಯ ಬಂದಿದೆ.