ಬಾಂಗ್ಲಾದೇಶ ಇತ್ತೀಚಿನ ದಿನಗಳಲ್ಲಿ ಭಾರತದ ವಿರುದ್ಧ ಬಾಲ ಬಿಚ್ಚುವ ಕೆಲಸ ಮಾಡುತ್ತಿದೆ. ಬಾಂಗ್ಲಾದೇಶದ ಸರಕಾರದ ಹಂಗಾಮಿ ಮುಖ್ಯಸ್ಥ ಮೊಹಮದ್ ಯೂನಸ್ ಚೀನಾ ದೇಶಕ್ಕೆ ಭೇಟಿ ಕೊಟ್ಟು ಅಲ್ಲಿನ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಭೇಟಿಯಾದ ನಂತರ ಭೂಮಿ ಬಿಟ್ಟು ಆಕಾಶದಲ್ಲಿ ಹಾರಾಡಲು ಪ್ರಾರಂಭಿಸಿದಂತಿದೆ. ಚೀನಾ ಈಗಾಗಲೇ ಬಾಂಗ್ಲಾದೇಶದ ಜೊತೆ ಕೆಲಸ ಮಾಡಲು ಒಪ್ಪಿಕೊಂಡಿದೆ.
ಚೀನಾ ಬಾಂಗ್ಲಾದೇಶದ ರಸ್ತೆ ನಿರ್ಮಾಣ, ಡಿಜಿಟಲ್ ಆರ್ಥಿಕತೆ, ಕಡಲ ಆರ್ಥಿಕತೆ, ಮೂಲ ಸೌಕರ್ಯಗಳ ನಿರ್ಮಾಣ ಮತ್ತು ಜನರಿಂದ ಜನರಿಗೆ ಸಂಪರ್ಕರವನ್ನು ಕಳುಹಿಸುವ ಹೀಗೆ ಇನ್ನಿತರ ಹಲವಾರು ಯೋಜನೆಗಳಿಗೆ ನೆರವು ನೀಡುವುದಾಗಿ ಭರವಸೆಯನ್ನು ನೀಡಿತ್ತು. ಬಾಂಗ್ಲಾದೇಶದ ಹಂಗಾಮಿ ಮುಖ್ಯಸ್ಥ ಮೊಹಮದ್ ಯೂನಸ್ ಚೀನಾ ಭೇಟಿ ನೀಡಿದ ನಂತರ ನಾನಾ ರೀತಿಯ ಹೇಳಿಕೆಗಳನ್ನು ಕೊಡುತ್ತಾ ಬಂದಿದೆ.
ಭಾರತ ಸರಕಾರ ಬಾಂಗ್ಲಾದೇಶಕ್ಕೆ ಕಠಿಣವಾದ ಸಂದೇಶವನ್ನು ಈಗಾಗಲೇ ಕಳುಹಿಸಿ ಆಗಿದೆ. ಭಾರತದ ಪಶ್ಚಿಮ ಬಂಗಾಳ ಹತ್ತಿರ ಚೀನಾಕ್ಕೆ ವಾಯುನೆಲೆಯನ್ನು ನಿರ್ಮಿಸಲು ಅನುಮತಿಯನ್ನು ಕೊಟ್ಟ ಬಾಂಗ್ಲಾದೇಶಕ್ಕೆ 'ದೇಶದ ಭದ್ರತೆಯ' ಕಾರಣ ಕೊಟ್ಟು ಯಾವುದೇ ಕಾರಣಕ್ಕೂ ಅಲ್ಲಿ ಚೀನಾದ ವಾಯುನೆಲೆ ಬರಬಾರದೆಂದು ಹೇಳಿದೆ.
ಇದೀಗ, ಅಸ್ಸಾಂ ಮುಖ್ಯಮಂತ್ರಿ ಹೇಮಂತ್ ಬಿಸ್ವಾಸ್ ಶರ್ಮ ಬಾಂಗ್ಲಾದೇಶಕ್ಕೆ ಕಟುವಾದ ಎಚ್ಚರಿಗೆ ನೀಡಿದ್ದಾರೆ. "ಬಾಂಗ್ಲಾದೇಶ ಸೇಲಿಗೂರಿ ಕಾರಿಡಾರ್ ಚಿಕನ್ ನೆಕ್ ತೋರಿಸಿ ಭಾರತಕ್ಕೆ ಬೆದರಿಕೆ ಹಾಕಿದರೆ, ಬಾಂಗ್ಲಾದೇಶದಲ್ಲಿ ಎರಡು ಚಿಕನ್ ನೆಕ್ ಗಳಿವೆ, 80 ಕಿಲೋಮೀಟರ್ ಉದ್ದದ ಉತ್ತರ ಬಾಂಗ್ಲಾದೇಶ ಕಾರಿಡಾರ್ ಮತ್ತು 28 ಕಿಲೋಮೀಟರ್ ಉದ್ದದ ಚಿತ್ತಗಾಂಗ್ ಕಾರಿಡಾರ್ ಇವೆರಡು ಅಸುರಕ್ಷಿತವಾಗಿವೆ ಎಂಬುದು ಜನರು ಮರೆತಿರಬಹುದಾದ ಭೌಗೋಳಿಕ ಸತ್ಯಗಳನ್ನು ನಾನು ಇಲ್ಲಿ ತಿಳಿಸುತ್ತಿದ್ದೇನೆ ಎಂದು ಗುಡುಗಿದ್ದಾರೆ.
ತನ್ನ ಎಕ್ಸ್ ಅಕೌಂಟ್ ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ,
'ಬಾಂಗ್ಲಾದೇಶ ತನ್ನದೇ ಆದ 2 ಕೋಳಿ ಕುತ್ತಿಗೆಗಳನ್ನು ಹೊಂದಿದೆ, ಎರಡು ಹೆಚ್ಚು ದುರ್ಬಲವಾಗಿದೆ.
ಮೊದಲನೆಯದು 80 ಕಿ.ಮೀ ಉತ್ತರ ಬಾಂಗ್ಲಾದೇಶ ಕಾರಿಡಾರ್ - ದಖಿನ್ ದಿನಜ್ಪುರದಿಂದ ನೈಋತ್ಯ ಗಾರೋ ಬೆಟ್ಟಗಳವರೆಗೆ. ಇಲ್ಲಿ ಯಾವುದೇ ಅಡಚಣೆ ಉಂಟಾದರೆ, ಇಡೀ ರಂಗ್ಪುರ ವಿಭಾಗವು ಬಾಂಗ್ಲಾದೇಶದ ಉಳಿದ ಭಾಗದಿಂದ ಸಂಪೂರ್ಣವಾಗಿ ಪ್ರತ್ಯೇಕಿಸಲ್ಪಡುತ್ತದೆ.
ಎರಡನೆಯದು ದಕ್ಷಿಣ ತ್ರಿಪುರದಿಂದ ಬಂಗಾಳ ಕೊಲ್ಲಿಯವರೆಗೆ 28 ಕಿ.ಮೀ ಚಿತ್ತಗಾಂಗ್ ಕಾರಿಡಾರ್. ಭಾರತದ ಚಿಕ್ ನೆಕ್ಗಿಂತ ಚಿಕ್ಕದಾದ ಈ ಕಾರಿಡಾರ್ ಬಾಂಗ್ಲಾದೇಶದ ಆರ್ಥಿಕ ರಾಜಧಾನಿ ಮತ್ತು ರಾಜಕೀಯ ರಾಜಧಾನಿಯ ನಡುವಿನ ಏಕೈಕ ಕೊಂಡಿಯಾಗಿದೆ.
ಕೆಲವರು ಮರೆತುಬಿಡಬಹುದಾದ ಭೌಗೋಳಿಕ ಸಂಗತಿಗಳನ್ನು ಮಾತ್ರ ನಾನು ಪ್ರಸ್ತುತಪಡಿಸುತ್ತಿದ್ದೇನೆ.
ಭಾರತದ ಸಿಲಿಗುರಿ ಕಾರಿಡಾರ್ನಂತೆಯೇ, ನಮ್ಮ ನೆರೆಯ ದೇಶವು ಸಹ ಅವರ ಎರಡು ಕಿರಿದಾದ ಕಾರಿಡಾರ್ಗಳಿಂದ ಕೂಡಿದೆ' ಎಂದು ಬರೆದುಕೊಂಡಿದ್ದಾರೆ.