ಈಗಾಗಲೇ ಅತಿಯಾದ ಮಳೆಯಿಂದ ತತ್ತರಿಸಿರುವ ಕರಾವಳಿ ಕರ್ನಾಟಕ ಇನ್ನೆರಡು ದಿವಸ ಭೀಕರ ಮಳೆ ಮತ್ತು ಬಲವಾದ ಗಾಳಿ ಪ್ರಭಾವಕ್ಕೆ ಸಿಲುಕಲಿದೆ. ಕರ್ನಾಟಕದಾದ್ಯಂತ ಮೇ 28 ರ ವರೆಗೆ ವ್ಯಾಪಕ ಮಳೆ ಆಗುವ ಬಗ್ಗೆ ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕರಾವಳಿ ಭಾಗದಲ್ಲಿ ಈಗಾಗಲೇ ಮಾನ್ಸೂನ್ ಆರಂಭವಾಗಿದ್ದು ದಕ್ಷಿಣ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಹೆಚ್ಚಿನ ಪರಿಣಾಮ ಬೀಳಲಿದೆ ಎಂದು ತಿಳಿಸಲಾಗಿದೆ. ಮಳೆಯ ಜೊತೆಗೆ ಬಲವಾದ ಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಹಲವಾರು ಪ್ರದೇಶಗಳಲ್ಲಿ 40 ರಿಂದ 60 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿದಿದೆ.
ಉತ್ತರ ಕರ್ನಾಟಕದ ಬೆಳಗಾವಿ, ಧಾರವಾಡ, ಬಾಗಲಕೋಟೆ, ವಿಜಯಪುರ, ಮತ್ತು ಗದಗ ಜಿಲ್ಲೆಗಳಲ್ಲಿ ಸೋಮವಾರ ಮತ್ತು ಮಂಗಳವಾರ ಅತಿಯಾದ ಮಳೆಯಾಗಲಿದೆ. ಉತ್ತರದ ಜಿಲ್ಲೆಗಳಾದ ಬೀದರ್, ಹಾವೇರಿ, ಕಲ್ಬುರ್ಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಬುಧವಾರ ವರೆಗೆ ಮಳೆಯಾಗಲಿದೆ.
ಚಿಕ್ಕಮಂಗಳೂರು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗಿದ್ದು ಹಲವಾರು ಮನೆ ವಾಹನಗಳು ಜಖಂ ಬಗ್ಗೆ ವರದಿಯಾಗಿದೆ ಅತಿಯಾಗಿ ಬೀಸಿದ ಗಾಳಿಗೆ ಮರಗಳು ರಸ್ತೆ ಮತ್ತು ವಾಹನಗಳ ಮೇಲೆ ಬೀಳುತ್ತಿದೆ. ವಾಹನ ಸವಾರರು ಅತಿಯಾದ ಜಾಗರೂಕರಾಗಿ ವಾಹನ ಚಲಾವಣೆ ಮಾಡಬೇಕಾಗಿ ವಿನಂತಿಸಲಾಗಿದೆ.