ಮಂಗಳೂರು : ವಿಶ್ವ ಹಿಂದೂ ಪರಿಷದ್ ಮುಖಂಡ ಶರಣ್ ಪಂಪವೆಲ್ ರವರನ್ನು ಕದ್ರಿ ಪೊಲೀಸರು ಬಂಧಿಸಿದ್ದಾರೆ. ಸುಹಾಸ್ ಶೆಟ್ಟಿ ಹ*ತ್ಯೆ ಸಂದರ್ಭದಲ್ಲಿ ಮಂಗಳೂರು ಬಂದ್ ಗೆ ಕರೆ ನೀಡಿದ್ದರು ಎನ್ನುವ ಕಾರಣಕ್ಕೆ ಶರಣ್ ಪಂಪವೆಲ್ ರವರನ್ನು ಮೇ 27 ರಂದು ಸಂಜೆ ಬಂಧನಕ್ಕೆ ಒಳಪಡಿಸಲಾಯಿತು.
ಇದೆ ಸಂದರ್ಭದಲ್ಲಿ ಬಂಟ್ವಾಳ ಕೊಳತಮಜಲ್ ನಲ್ಲಿ ಅಬ್ದುಲ್ ರಹೀಮ್ ಎನ್ನುವ ಯುವಕನ ಬರ್ಬರ ಹ*ತ್ಯೆಯಾದ ಕಾರಣ ಕದ್ರಿ ಪೊಲೀಸ್ ಠಾಣೆಯ ಸುತ್ತ ಗೊಂದಲದ ವಾತಾವರಣವಿತ್ತು. ಶರಣ್ ಪಂಪವೆಲ್ ಬಂಧನದ ಸುದ್ದಿ ತಿಳಿದ್ದಂತೆ ಕದ್ರಿ ಠಾಣೆಯ ಎದುರು ಹಿಂದೂ ಕಾರ್ಯಕರ್ತರು ಜಮಾಯಿಸಿದ್ದರು. ಕಾರ್ಯಕರ್ತರನ್ನು ಪೊಲೀಸ್ ಠಾಣೆಯ ಹತ್ತಿರದಿಂದ ಚದುರಿಸಲಾಯಿತು.
ಪೊಲೀಸರ ಕ್ರಮಕ್ಕೆ ಹಿಂದೂ ಸಂಘಟನೆ ಕಾರ್ಯಕರ್ತರು ಖಂಡನೆ ವ್ಯಕ್ತಪಡಿಸಿದರು. ಶರಣ್ ಅವರನ್ನು ವೈದ್ಯಕೀಯ ತಪಾಸಣೆಗೆ ವೆನಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ನಿಷೇದಾಜ್ಞೆ ಜಾರಿಯಾದ ಕಾರಣ ಹಿಂದೂ ಕಾರ್ಯಕರ್ತರನ್ನು ಗುಂಪುಗಾರಿಕೆ ಮಾಡದಂತೆ ಪೊಲೀಸರು ಆದೇಶ ಮಾಡಿದ್ದರು.
ಠಾಣೆಗೆ ಡಿಸಿಪಿ ರವಿಶಂಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮಂಗಳವಾರ ಮೇ 27 ರ ರಾತ್ರಿಯೇ ಬೋಂದೆಲ್ ನಲ್ಲಿರುವ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಯಿತು. ಈ ವೇಳೆ ವಿಚಾರಣೆ ನಡೆಸಿ ಮೇ 28 ಬುಧವಾರಕ್ಕೆ ವಿಚಾರಣೆ ಮುಂದೂಡಿಸಲಾಗಿದೆ ಎಂದು ತಿಳಿಸಿ ಶರಣ್ ಪಂಪವೆಲ್ ಗೆ ಜಾಮೀನು ಮಂಜೂರು ಮಾಡಿದರು.
ಮೇ 30 ರವರೆಗೆ ನಿಷೇದಾಜ್ಞೆ
ಮೇ 27 ರ ಸಂಜೆ 6 ಗಂಟೆಯಿಂದ, ಮೇ 30 ಸಂಜೆ 6 ಗಂಟೆವರೆಗೆ ಬಂಟ್ವಾಳ ಸುತ್ತಮುತ್ತಲಿನ ಒಟ್ಟು 5 ತಾಲೂಕುಗಳಿಗೆ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಬಂಟ್ವಾಳ, ಬೆಳ್ತಂಗಡಿ, ಪುತ್ತೂರು, ಕಡಬ ಮತ್ತು ಸುಳ್ಯ ತಾಲೂಕುಗಳಲ್ಲಿ ನಿಷೇದಾಜ್ಞೆ ಜಾರಿಯಲಿರುವುದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಕೇಳಿಕೊಳ್ಳಲಾಗಿದೆ.