20 June 2025 | Join group

ಬಂಟ್ವಾಳ ಮರ್ಡರ್ : ಕಾಂಗ್ರೆಸ್ ನಾಯಕರುಗಳ ಸಾಮೂಹಿಕ ರಾಜೀನಾಮೆಗೆ ಒತ್ತಾಯ

  • 28 May 2025 12:44:35 PM

ಬಂಟ್ವಾಳ : ನಿನ್ನೆ ನಡೆದ ರಹೀಮ್ ಹ*ತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರುಗಳ ಮತ್ತು ಪೊಲೀಸರ ವಿರುದ್ಧ ಬಹಳ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾಗಳಲ್ಲಿ ಸ್ಥಳೀಯ ಕಾಂಗ್ರೆಸ್ ಮತ್ತು ಮುಸ್ಲಿಂ ಮುಖಂಡರುಗಳ ಆಡಿಯೋ ಮತ್ತು ಬರಹಗಳು ಹರಿದಾಡುತ್ತಿದೆ.

 

ಇದರ ಜೊತೆಗೆ ಕಾಂಗ್ರೆಸ್ ಮತ್ತು ಕಾಂಗ್ರೆಸ್ ಬೆಂಬಲಿಗರು ಸರಕಾರಕ್ಕೆ ಮತ್ತೊಂದು ಬೇಡಿಕೆ ಇಟ್ಟಿದ್ದಾರೆ. ಹತ್ಯಾಕೋರರನ್ನು ತಕ್ಷಣ ಬಂಧಿಸಬೇಕು ಮತ್ತು ಜಿಲ್ಲೆಗೆ ಮುಖ್ಯಮಂತ್ರಿ ಹಾಗೂ ಡಿಕೆ ಶಿವಕುಮಾರ್ ಆಗಮಿಸಬೇಕೆಂದು ಒತ್ತಾಯ ಮಾಡಿದ್ದಾರೆ.

 

ಜಿಲ್ಲಾ ಉಸ್ತುವಾರಿ ಸಚಿವರು ಈ ಘಟನೆ ನಡೆದ ಬೆನ್ನಲ್ಲೇ ಖಂಡನೆ ವ್ಯಕ್ತಪಡಿಸಿದ್ದು, ಆದರೆ ಮುಸ್ಲಿಂ ನಾಯಕರುಗಳು ನಿಮ್ಮ ಖಂಡನೆ ಅಗತ್ಯವಿಲ್ಲ, ನೀವು ಪ್ರಚೋದನಕಾರಿ ಭಾಷಣ ಮಾಡಿದವರ ವಿರುದ್ಧ ಯಾಕೆ ಕ್ರಮ ಕೈಗೊಳ್ಳಲಿಲ್ಲ ಎಂಬ ಆಕ್ರೋಶ ವ್ಯಕ್ತಪಡಿಸಿದ್ದರು.

 

ಇದೀಗ, ಕಾಂಗ್ರೆಸ್ ನಾಯಕರುಗಳು ಸಾಮೂಹಿಕ ರಾಜೀನಾಮೆ ನೀಡಬೇಕೆಂದು ಮುಸ್ಲಿಂ ಮುಖಂಡರು ಒತ್ತಾಯಿಸಿದ್ದಾರೆ. ಈಗಾಗಲೇ 15 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು ಮುಂದಿನ ತನಿಖೆ ನಡೆಯಲಿದೆ. ಬಂಟ್ವಾಳ ಸುತ್ತಮುತ್ತಲಿನ 5 ತಾಲೂಕಿನಲ್ಲಿ ನಿಷೇದಾಜ್ಞೆ ಮೇ 30 ರವರಿಗೆ ಹೊರಡಿಸಲಾಗಿದೆ.

 

ಈ ಹಿಂದೆ ಬಜ್ಪೆಯಲ್ಲಿ ನಡೆದ ಸುಹಾಸ್ ಶೆಟ್ಟಿ ಕೊ*ಲೆ ಪ್ರಕರಣದಲ್ಲಿ, ಮುಸ್ಲಿಂ ಮುಖಂಡರು ರಾಜ್ಯ ಗೃಹ ಸಚಿವರನ್ನು ಭೇಟಿ ಮಾಡಿ ಯಾವುದೇ ಕಾರಣಕ್ಕೂ ನೀವು ಸುಹಾಸ್ ಮನೆಗೆ ಭೇಟಿ ಕೊಡಬಾರದೆಂಬ ಒತ್ತಾಯವನ್ನು ಇಟ್ಟಿದ್ದರು. ಒಂದು ವೇಳೆ ಭೇಟಿ ನೀಡಿದರೆ ನಾವು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಬೆದರಿಕೆ ನೀಡಿದ್ದರು. ಆ ಕಾರಣದಿಂದಾಗಿ ಕಾಂಗ್ರೆಸ್ ನ ಯಾವುದೇ ಮುಖಂಡರುಗಳು ಸುಹಾಸ್ ಕುಟುಂಬಸ್ಥರನ್ನು ಭೇಟಿ ಮಾಡಲಿಲ್ಲ.

 

ಇದೀಗ ಕಾಂಗ್ರೆಸ್ ಸಚಿವರುಗಳಿಗೆ ಮುಸ್ಲಿಂ ನಾಯಕರು ಮತ್ತು ಬೆಂಬಲಿಗರು ಕೇಳುವ ಪ್ರಶ್ನೆಗಳು ತಲೆಬಿಸಿಯಾಗಿ ಪರಿಣಮಿಸಿದೆ. ಯಾವುದೇ ಸಂದರ್ಭದಲ್ಲಿ ರಾಜಧಾನಿಯಿಂದ ಉನ್ನತ ಮಟ್ಟದ ಸಚಿವರು ಭೇಟಿ ಕೊಡುವ ಸಾಧ್ಯತೆಗಳಿವೆ ಎಂದು ಮೂಲಗಳಿಂದ ತಿಳಿದುಬಂದಿದೆ.