ಸಂಸದ ಬೃಜೇಶ್ ಚೌಟ ಅಡಿಕೆ ರೈತರ ಸಮಸ್ಯೆ ಮತ್ತು ಕಾಫಿ ಕೃಷಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಭಿವೃದ್ಧಿ ಮಾಡಲು ಸಚಿವ ಪಿಯೂಷ್ ಗೋಯಲ್ ಭೇಟಿ.
ನವದೆಹಲಿ : ಅಡಿಕೆ ದಕ್ಷಿಣ ಕನ್ನಡ ಜಿಲ್ಲೆಯ ಆದಾಯದ ಬಹು ದೊಡ್ಡ ಮೂಲ. ಬಹಳಷ್ಟು ರೈತರು ಅಡಿಕೆಯನ್ನೇ ನಂಬಿಕೊಂಡು ತಮ್ಮ ಜೀವನ ನಡೆಸುತ್ತಾರೆ. ದಕ್ಷಿಣ ಕನ್ನಡದಲ್ಲಿ ಅಡಿಕೆ ರೈತರು ಎದುರಿಸುತ್ತಿರುವ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನಕ್ಕೆ ದಕ್ಷಿಣ ಕನ್ನಡದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಯೋಚಿಸಿದ್ದು, ಅವರು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕ ಸಚಿವ ಪಿಯೂಷ್ ಗೋಯಲ್ ಭೇಟಿ ಮಾಡಿ ಈ ವಿಷಯದ ಬಗ್ಗೆ ಚರ್ಚೆ ನಡೆಸಿದ್ದಾರೆ.
ವಿದೇಶಗಳಿಂದ ಬರುವ ಅಡಿಕೆಯಿಂದ ಕರಾವಳಿ ಭಾಗದ ಜನ ಸಂಕಷ್ಟ ಅನುಭವಿಸುತ್ತಿದ್ದಾರೆ. ಇದರಿಂದಾಗಿ ಸ್ಥಳೀಯ ರೈತರು ತಮ್ಮ ಬೆಳೆಗೆ ನ್ಯಾಯಯುತ ಮಾರುಕಟ್ಟೆ ಬೆಲೆ ಪಡೆಯುವುದು ಕಷ್ಟಕರವಾಗಿದೆ. ಸರಿಯಾದ ತಪಾಸಣೆ ಇಲ್ಲದೆ, ವಿದೇಶಗಳಿಂದ ಅಡಿಕೆಯನ್ನು ನಿರಂತರವಾಗಿ ಆಮದು ಮಾಡಿಕೊಳ್ಳುವುದರಿಂದ ಕರಾವಳಿ ಪ್ರದೇಶದ ಅಡಿಕೆ ರೈತರು ಸಂಕಷ್ಟದಲ್ಲಿದ್ದಾರೆ. ರೈತರಿಗೆ ಸ್ಥಿರ ಮಾರುಕಟ್ಟೆ ದರಗಳನ್ನು ಖಚಿತಪಡಿಸಬೇಕು ಮತ್ತು ವಿದೇಶದಿಂದ ಅಡಿಕೆ ಆಮದಿನ ಮೇಲೆ ಕಠಿಣ ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಚೌಟ ಸಚಿವರನ್ನು ಮನವಿ ಮಾಡಿದ್ದಾರೆ.
ಮಳೆಯ ಮತ್ತು ಇನ್ನಿತರ ಹವಾಮಾನ ಕಾರಣಗಳಿಂದ ಅಡಿಕೆ ಬೆಳೆಗಳಲ್ಲಿ ಕೊಳೆತ ಮತ್ತು ಎಲೆ ಚುಕ್ಕೆ ರೋಗಗಳು ಹೆಚ್ಚುತ್ತಿರುವುದರಿಂದ, ರೈತರು ಬಹಳಷ್ಟು ನಷ್ಟವನ್ನು ಅನುಭವಿಸುತ್ತಿದ್ದಾರೆ. ಆ ಕಾರಣದಿಂದ, ಜಿಲ್ಲೆಯಲ್ಲಿ ಕಾಫಿ ಕೃಷಿಯನ್ನು ಪರ್ಯಾಯ ಬೆಳೆಯಾಗಿ ಉತ್ತೇಜಸುವ ಅವಶ್ಯಕತೆ ಇದೆ. ಈ ವಿಚಾರವನ್ನು ಕೂಡ ಗಮನದಲ್ಲಿ ಇಟ್ಟುಕೊಂಡು ರೈತರಿಗೆ ನೇರವಾಗಬೇಕೆಂದು ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಸಚಿವರನ್ನು ಬೇಡಿಕೊಂಡಿದ್ದಾರೆ.
ಕಾಫಿ ಬೆಳೆಗೆ ಸಂಬಂಧಪಟ್ಟ ಸಮಗ್ರ ಸಮೀಕ್ಷೆಯನ್ನು ಕಾಫಿ ಮಂಡಳಿಯು ಸಮೀಕ್ಷೆಯನ್ನು ನಡೆಸಿತ್ತು. ಆ ಸಮೀಕ್ಷೆಯ ವರದಿಯನ್ನು ಸಂಸದರು ಸಚಿವರಿಗೆ ತೋರಿಸಿದರು ಮತ್ತು ಈ ಎಲ್ಲಾ ವಿಷಯಗಳು ಸಂಸದನಲ್ಲಿ ಎತ್ತಿರುವುದಾಗಿ ತಿಳಿಸಿದರು. ಕಾಫಿ ರೈತರನ್ನು ಕರಾವಳಿ ಭಾಗದಲ್ಲಿ ಬೆಂಬಲಿಸಬೇಕು ಮತ್ತು ಬೆಳೆಯ ಸಾಮರ್ಥ್ಯದ ಬಗ್ಗೆ ರೈತರಲ್ಲಿ ಜಾಗ್ರತಿ ಮೂಡಿಸುವ ಸಲುವಾಗಿ ಮಂಗಳೂರಿನಲ್ಲಿ ಕಾಫಿ ಮಂಡಳಿಯ ನಿರ್ದೇಶನ ಕಚೇರಿಯನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿದರು.
ಕೇಂದ್ರದ “ ಗ್ರಾಮಕ್ಕೆ ಹಿಂತಿರುಗಿ ” ಅಭಿಯಾನಕ್ಕೆ ಒತ್ತು ನೀಡುವುದರ ಮೂಲಕ ದಕ್ಷಿಣ ಕನ್ನಡಕ್ಕೆ ಹೂಡಿಕೆಯನ್ನು ಆಕರ್ಷಿಸುವ ಯೋಜನೆ ಬೆಂಬಲ ನೀಡುತ್ತೇವೆ. ಚೌಟರವರ ಪ್ರತಿಯೊಂದು ಪ್ರಯತ್ನಕ್ಕೆ ಸಂಪೂರ್ಣ ಬೆಂಬಲ ನೀಡಿ ರೈತರ ಮತ್ತು ಸ್ಥಳೀಯ ಆರ್ಥಿಕತೆಗೆ ಪ್ರಯೋಜನಕಾರಿಯಾದ ನವೀನ ವಿಚಾರಗಳನ್ನು ಉತ್ತೇಜಿಸುವ ಬದ್ಧತೆಯನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕ ಸಚಿವ ಪಿಯೂಷ್ ಗೋಯಲ್ ಸಂಸದರಿಗೆ ಮನದಟ್ಟು ಮಾಡಿದರು.
ಕಾಫಿ ಬೆಳೆಗೆ ಫಲವತ್ತಾದ ಭೂಮಿ ದಕ್ಷಿಣ ಕನ್ನಡದಲ್ಲಿ ಇರುವುದರಿಂದ ಅಡಿಕೆ ಜೊತೆಗೆ ಕಾಫಿ ಕೃಷಿಯನ್ನು ನಡೆಸಿದರೆ ದಕ್ಷಿಣ ಕನ್ನಡ ರೈತರು ಹೆಚ್ಚಿನ ಆದಾಯಗಳಿಸಬಹುದು. ಅದಕ್ಕೆ ಕೇಂದ್ರ ಮತ್ತು ರಾಜ್ಯ ಸರಕಾರ ಹಾಗೂ ಕೃಷಿಗೆ ಸಂಬಂಧಪಟ್ಟ ಸಂಸ್ಥೆಗಳು ಮತ್ತು ಅಧಿಕಾರಗಳ ಮಾರ್ಗದರ್ಶನ ಮತ್ತು ಸರಿಯಾದ ಯೋಜನೆಗಳ ನಡೆಸಿದರೆ ಯಶಸ್ಸು ಕಾಣಬಹುದು.