Agniveer : ಕಳೆದ ಎರಡು ವರ್ಷಗಳಲ್ಲಿ ಅಗ್ನಿಪಥ್ ಯೋಜನೆಯಡಿ ನೇಮಕಗೊಂಡ ಸುಮಾರು 3000 ಸಾವಿರ ಅಗ್ನಿವೀರರು ಪಾಕಿಸ್ತಾನದ ಭಯೋತ್ಪಾದಕರ ಭಾರತ ದಾಳಿ ಮಾಡಿದ ಆಪರೇಷನ್ ಸಿಂಧೂರ್ ನಲ್ಲಿ ಮುಂಚೂಣಿಯಲ್ಲಿ ನೇತೃತ್ವ ವಹಿಸಿದ್ದರು. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕಾರವಾಗಿ ಭಾರತದ ಸೇನೆ ಪಾಕಿಸ್ತಾನದ ಒಳಗಡೆ ದಾಳಿ ನಡೆಸಿ ಪರಾಕ್ರಮ ಮೆರೆದಿತ್ತು.
ಸುಮಾರು 20 ವರ್ಷ ವಯಸ್ಸಿನ ಅಗ್ನಿವೀರರು, ಪಾಕಿಸ್ತಾನದ ಕ್ಷಿಪಣಿ ಮತ್ತು ಡ್ರೋನ್ ಗಳ ದಾಳಿಯಿಂದ ಭಾರತದ ಮಿಲಿಟರಿ ಸ್ಥಾಪನೆಗಳನ್ನು ರಕ್ಷಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ರಕ್ಷಣಾ ವ್ಯವಸ್ಥೆಗಳನ್ನು ನಿರ್ವಹಿಸುವುದರ ಜೊತೆಗೆ ವಾಯುನೆಲೆಗಳನ್ನು ಹಿಡಿದಿಟ್ಟುಕೊಳ್ಳುವ ಕೆಲಸ ಅಗ್ನಿವೀರರದಾಗಿತ್ತು. ಶತ್ರುಗಳ ದಾಳಿಯ ಹೊರತಾಗಿಯೂ ಇವರ ಕಾರ್ಯಕ್ಷಮತೆಯು ಸಾಮಾನ್ಯ ಸೈನಿಕರಿಗೆ ಸಮನಾಗಿತ್ತು.
'ಫ್ರಂಟ್ ಲೈನ್ ಪ್ರತಿಕ್ರಿಯೆಯು ಅವರ ನಿರ್ಣಾಯಕ ಮತ್ತು ಶ್ಲಾಘನೀಯ' ಎಂದು ರಕ್ಷಣಾ ಸಚಿವಾಲಯ ಬಣ್ಣಿಸಿದೆ. ನಾಲ್ಕು ದಿನಗಳ ಮಿಲಿಟರಿ ಪ್ರತಿಕಾರದ ಸಂದರ್ಭದಲ್ಲಿ ಭಾರತೀಯ ಮಿಲಿಟರಿ ಕೋಟೆಯನ್ನು ಹಿಡಿದ್ದವರು ಆ ಅಗ್ನಿವೀರರು. ಸುಮಾರು ಇನ್ನೂರು ಅಗ್ನಿವೀರರು ವಾಯು ರಕ್ಷಣಾ ಘಟಕಗಳಲ್ಲಿ ಸೇವೆ ಸಲ್ಲಿಸುತ್ತಿದ್ದರು.
ವಿಶೇಷವೆಂದರೆ, ಅಗ್ನಿವೀರರು ನಾಲ್ಕು ವಿಶೇಷ ವೃತ್ತಿಯಲ್ಲಿ ಅಂದರೆ ಗನ್ನರ್, ರೇಡಿಯೋ ನಿರ್ವಾಹಕರು, ಅಗ್ನಿ ಶಾಮಕ ನಿಯಂತ್ರಣ ನಿರ್ವಾಹಕರು ಮತ್ತು ಬಂದೂಕುಗಳು ಮತ್ತು ಕ್ಷಿಪಣಿಗಳನ್ನು ಹೊಂದಿದ ಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಭುಜದಿಂದ ಗುಂಡು ಹಾರಿಸುವ ಕ್ಷಿಪಣಿಗಳು ಮತ್ತು ಮಾನವಸಹಿತ ಗುಂಡು ಹಾರಿಸುವ ಬಂದೂಕುಗಳೊಂದಿಗೆ ಶತ್ರುಗಳ ಗುರಿಗಳನ್ನು ನಾಶಪಡಿಸಿದ್ದರು.
ಈ ಅಗ್ನಿವೀರರಿಗೆ ಸರಕಾರ ನೀಡುವ ಮತ್ತೊಂದು ವಿಶೇಷ ಸೌಲಭ್ಯ ಏನೆಂದರೆ, ಇವರು 48 ಲಕ್ಷ ರೂ ಮೌಲ್ಯದ ವಿಮ ಪಾಲಿಸಿಯಿಂದ ರಕ್ಷಣೆ ಪಡೆಯುತ್ತಾರೆ. ಒಂದು ವೇಳೆ ಕರ್ತವ್ಯದ ಸಮಯದಲ್ಲಿ ಪ್ರಾಣಕ್ಕೆ ಕುತ್ತು ಬಂದರೆ 44 ಲಕ್ಷ ರೂ 'ಎಕ್ಸ್-ಗ್ರೇಷಿಯ' ಪ್ರಯೋಜನವನ್ನು ಪಡೆಯುತ್ತಾರೆ. ನಾಲ್ಕು ವರ್ಷ ಸಂಪೂರ್ಣಗೊಳಿಸಿದರೆ 11.70 ಲಕ್ಷ ರೂ ಗಳ ಸೇವಾ ನಿಧಿ ಪಡೆಯುತ್ತಾರೆ. ಇದರಲ್ಲಿ 5.02 ಲಕ್ಷ ಸ್ವಯಂ ಕೊಡುಗೆಯಾಗಿರುತ್ತದೆ.
ಅಗ್ನಿವೀರ್ ಯೋಜನೆ ಬಗ್ಗೆ ಬಹಳಷ್ಟು ಗೊಂದಲಗಳು, ಪ್ರತಿಭಟನೆಗಳು ನಡೆದಿದ್ದವು. ಕೇಂದ್ರ ಸರಕಾರದ ಈ ಯೋಜನೆ ವಿರುದ್ಧ ದೇಶದ ನಾನಾ ಕಡೆಗಳಲ್ಲಿ ಪರಿಸ್ಥಿತಿ ಬಹಳಷ್ಟು ವಿಕೋಪಕ್ಕೆ ತಿರುಗಿತ್ತು. ಆದರೂ ಕೇಂದ್ರ ಸರಕಾರ ಈ ಯೋಜನೆಯನ್ನು ಮುಂದುವರಿಸಿದ್ದು ಈಗ ದೇಶದಾದ್ಯಂತ ಬಹಳಷ್ಟು ಯುವ ಜನತೆ ಅಗ್ನಿವೀರರಾಗಿ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.