ಮುಂಬಯಿ: ದಯಾ ನಾಯಕ್, ಮುಂಬಯಿ ಭೂಗತ ಲೋಕಕ್ಕೆ ಸಿಂಹಸ್ವಪ್ನ, 85 ಕ್ಕೂ ಹೆಚ್ಚು ರೌಡಿಗಳನ್ನು ಹೊಡೆದುರುಳಿಸಿದ್ದ ಮುಂಬಯಿ ಕ್ರೈಂ ಬ್ರಾಂಚ್ ಸೀನಿಯರ್ ಇನ್ಸ್ಪೆಕ್ಟರ್ ಆಗಿರುವ ಇವರು ಮುಂಬಯಿನ ಅಸಿಸ್ಟೆಂಟ್ ಕಮಿಷನರ್ ಆಫ್ ಪೊಲೀಸ್ (ಎಸಿಪಿ) ಆಗಿ ಭರ್ತಿಗೊಂಡಿದ್ದಾರೆ.
ದಕ್ಷಿಣ ಕನ್ನಡ ಕಾರ್ಕಳದ ಎಣ್ಣೆ ಹೊಳೆಯಿಂದ ಮುಂಬಯಿ ನಗರಕ್ಕೆ ತೆರಳಿದ್ದ ದಯಾ ನಾಯಕ್ ರಾತ್ರಿ ಕ್ಯಾಂಟೀನ್ ನಲ್ಲಿ ಕೆಲಸ ಮಾಡುತ್ತಾ, ಅಲ್ಲೇ ವರಾಂಡದಲ್ಲಿ ಮಲಗುತ್ತಾ ಜೀವನ ಕಳೆದವರು. ಕ್ಯಾಂಟೀನ್ ಗಳಲ್ಲಿ ಕೆಲಸ ಮಾಡುತ್ತಿದ್ದರು ತನ್ನ ವಿದ್ಯಾಭ್ಯಾಸವನ್ನು ಮುಂದುವರಿಸಿದ ದಯಾನಾಯಕ್, ಅವರಲ್ಲಿದ್ದ ಸಾಧಿಸುವ ಛಲ, ಮನೋಸ್ಥೈರ್ಯ ಅವರನ್ನು ಈ ಉನ್ನತ ಮಟ್ಟಕ್ಕೆ ಕೊಂಡೊಯ್ದಿದೆ.
1995ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡ ದಯಾ ನಾಯಕ್ 2004 ರ ವೇಳೆಗೆ ಮುಂಬಯಿ ಭೂಗತ ಲೋಕದ 85ಕ್ಕೂ ಹೆಚ್ಚು ಪಾತಕಿಗಳನ್ನು ಎನ್ಕೌಂಟರ್ ಮಾಡಿದ್ದರು. 1995 ರಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ನೇಮಕಗೊಂಡಿದ್ದ ಇವರಿಗೆ 1997 ರ ಕಾರ್ಯಾಚರಣೆ ಒಂದರಲ್ಲಿ ಭೂಗತ ಲೋಕದ ಪಾತಕಿಗಳ 2 ಬಾರಿ ಗುಂಡು ಹಾರಿಸಿದ್ದರು. ಈ ಘಟನೆಯಲ್ಲಿ ದಯಾ ನಾಯಕ್ ರವರು ಗಂಭೀರವಾಗಿ ಗಾಯಗೊಂಡಿದ್ದರು.
ಮುಂಬಯಿ ನಗರದಲ್ಲಿ ಆವರಿಸಿದ್ದ ಡ್ರಗ್ಸ್ ಮಾಫಿಯಾಕ್ಕೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದು, ಹಲವಾರು ಡ್ರಗ್ಸ್ ದಂಧೆಗಳನ್ನು ಭೇದಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. 2003 ಮತ್ತು 2006 ನೇ ಇಸವಿಯಲ್ಲಿ ಇವರ ವಿರುದ್ಧ ಕೇಸು ದಾಖಲಾಗಿದ್ದು, ದಯಾ ನಾಯಕ್ ರವರಿಗೆ ಭೂಗತ ಲೋಕದ ಕೈವಾಡ ಇದೆ ಎಂಬ ಆರೋಪವಿತ್ತು. ದಯಾ ನಾಯಕ್ ರವರ ಜೀವನ ಚರಿತ್ರೆ ಕನ್ನಡ ಸಿನಿಮಾ 'ದಯಾ ನಾಯಕ್' ಪ್ರೇಕ್ಷಕರ ಮನಗೆದ್ದಿತ್ತು. ಇದು ಮಾತ್ರವಲ್ಲದೆ ಹಿಂದಿ, ತೆಲುಗು ಮತ್ತು ಇನ್ನಿತರ ಭಾಷೆಗಳಲ್ಲಿ ಇವರ ಜೀವನ ಚರಿತ್ರೆಗೆ ಸಂಬಂಧಪಟ್ಟ ಸಿನಿಮಾಗಳು ತೆರೆ ಕಂಡಿದೆ.