ಬಂಟ್ವಾಳ : ಇನ್ನು ಮುಂದೆ ಮಾಣಿಯಲ್ಲಿ ಪ್ರಯಾಣಿಕರು ಪರದಾಡುತ್ತಿರುವ ಸನ್ನಿವೇಶ ಕಾಣುವುದಿಲ್ಲ ಯಾಕೆಂದರೆ ಮಾಣಿಯ ಹೊಸ ಮಾರ್ಗವನ್ನು ಸಂಚಾರಕ್ಕೆ ಅನುವುಮಾಡಿಕೊಡಲಾಗಿದೆ. ಮಾಣಿ ಸರ್ವಿಸ್ ರೋಡ್ ತುಂಬಾ ಕಿರಿದಾಗಿದ್ದು ವಾಹನ ಸಂಚಾರಕ್ಕೆ ಬಹಳ ತೊಂದರೆ ಆಗುತ್ತಿತ್ತು. ಎತ್ತರದ ರಸ್ತೆಯ ಕೇವಲ ಒಂದು ಬದಿಯಲ್ಲಿ ಸೇವಾ ರಸ್ತೆಯನ್ನು ನಿರ್ಮಿಸಿದ್ದು, ಮತ್ತೊಂದು ಭಾಗದಲ್ಲಿ ಕಿರಿದಾದ ರಸ್ತೆ ಇತ್ತಾದರೂ ಸರಿಯಾಗಿ ವಾಹನ ಸಂಚಾರವಾಗುತ್ತಿರಲಿಲ್ಲ.
ಇನ್ನು ಮುಂದೆ ಬಿ.ಸಿ ರೋಡ್ ಅಥವಾ ಉಪ್ಪಿನಂಗಡಿ ಕಡೆ ಹೋಗುವವರು ನೇರವಾಗಿ ಎಲಿವೇಟೆಡ್ (ಎತ್ತರದ) ಫ್ಲೈ ಓವರ್ ನಿಂದ ಮಾಣಿ ಸಿಟಿಯನ್ನು ದಾಟಿ ಹೋಗಬಹುದು. ಈಗಾಗಲೇ ಮೆಲ್ಕಾರ್ ಮತ್ತು ಪಾಣೆಮಂಗಳೂರು ರಸ್ತೆಯನ್ನು ತೆರವುಗೊಳಿಸಿದ್ದು, ಮಾಣಿಯಲ್ಲಿ ವಿಳಂಬವಾದ್ದರಿಂದ ಸಾರ್ವಜನಿಕರು ಮತ್ತು ಪ್ರಯಾಣಿಕರು ಬೇಸರ ವ್ಯಕ್ತಪಡಿಸಿದ್ದರು.
ಕಳೆದ ಗುರುವಾರದಿಂದ ಈ ಸಂಪರ್ಕವನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ (NHAI) ಅಧಿಕಾರಿಗಳು ಮತ್ತು ಯೋಜನೆಯ ಅನುಷ್ಠಾನ ಗುತ್ತಿಗೆದಾರರೊಂದಿಗೆ ಸಭೆ ನಡೆಸಿದ ದಕ್ಷಿಣ ಕನ್ನಡ ಸಂಸದ ಕೆ ಬ್ರಿಜೇಶ್ ಚೌಟ ಅವರ ಇತ್ತೀಚಿನ ಹಸ್ತಕ್ಷೇಪದ ನಂತರ ಈ ಉದ್ಘಾಟನೆಯಾಗಿದೆ. ಇನ್ನು ಮುಂದೆ ಪುತ್ತೂರು ಕಡೆ ಪ್ರಯಾಣಿಸುವವರು ಮತ್ತು ಸ್ಥಳೀಯರು ಮಾತ್ರ ಮಾಣಿ ಸರ್ವಿಸ್ ರೋಡ್ ಉಪಯೋಗಿಸಲಿದ್ದಾರೆ. ಇದ್ದರಿಂದ ದಟ್ಟಣೆಯ ಮಾರ್ಗದಿಂದ ಪರಿಹಾರ ಸಿಕ್ಕಿದಂತಾಗಿದೆ.
ಉಪ್ಪಿನಂಗಡಿಯಲ್ಲು ನಿರ್ಮಿಸದ ಹೊಸ ಎತ್ತರದ ಮಾರ್ಗವನ್ನು ಸಹ ವಾಹನ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಶಾಶ್ವತ ತಡೆಗೋಡೆಗಳನ್ನು ನಿರ್ಮಿಸಲು ಬಾಕಿ ಇದೆ ಆದರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಾತ್ಕಾಲಿಕ ಪ್ಲಾಸ್ಟಿಕ್ ಡ್ರಮ್ಗಳನ್ನು ಇರಿಸಲಾಗಿದೆ.
ಸಂಸದರು ಮತ್ತು NHAI ಅಧಿಕಾರಿಗಳ ಭರವಸೆಯಂತೆ ಕಲ್ಲಡ್ಕ ಫ್ಲೈ ಓವರ್ ಜೂನ್ 2 ರಿಂದ ಏಕಮುಖ ಸಂಚಾರವನ್ನು ತೆರವುಗೊಳಿಸಲಾಗುವುದು. ಈ ನಿರ್ಧಾರದಿಂದ ಕಲ್ಲಡ್ಕ ಫ್ಲೈ ಓವರ್ ಕೆಳಗಡೆ ಇರುವ ಸರ್ವಿಸ್ ರೋಡ್ ನಲ್ಲಿ ವಾಹನ ಸಂಚಾರಕ್ಕೆ ಆಗುತ್ತಿರುವ ಬಹಳ ದೊಡ್ಡ ಸಮಸ್ಯೆಗೆ ಪರಿಹಾರ ಸಿಕ್ಕಿದಂತಾಗುತ್ತದೆ. ಈಗಾಗಲೇ ಮಳೆಯ ಸಂದರ್ಭದಲ್ಲಿ ಬೋಳಂಗಡಿ ಮೇಲ್ಮುಖ ರಸ್ತೆಯ ಇಕ್ಕೆಲಗಳಲ್ಲಿ ನೀರು ಜಲಪಾತದಂತೆ ಚಿಮ್ಮುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತಿತ್ತು.
ಇದೀಗ, ಉಪ್ಪಿನಂಗಡಿ, ಮಾಣಿ, ಮೆಲ್ಕಾರ್, ಪಾಣೆಮಂಗಳೂರು ಹೊಸ ರಸ್ತೆಗಳಲ್ಲಿ ಸಂಚಾರಕ್ಕೆ ಅನುವು ಮಾಡಿಕೊಟ್ಟಿರುವುದರಿಂದ ಕೊಂಚ ನಿಟ್ಟಿಸಿರು ಬಿಟ್ಟಿರುವ ವಾಹನ ಚಾಲಕರು, ಕಲ್ಲಡ್ಕ ಫ್ಲೈ ಓವರ್ ತೆರವುಗೊಂಡರೆ ಮತ್ತಷ್ಟು ಸಂತುಷ್ಟಿಯಾಗಲಿದ್ದಾರೆ.